ಮನಸ್ಸಿದ್ದರಷ್ಟೇ ಸಾಲದು, ಓಡ್ತಾ ಇರಬೇಕು; ಬಾಲ ಇರ್ಬೇಕು, ಅಲ್ಲಾಡಿಸುತ್ತಿರಬೇಕು !

"ನೋಡ್ರಪ್ಪಾ, ಈ ಬಾರಿ ಆ ಯಂಗ್‌ ಫೇಸ್‌ಗೆ ಟಿಕೆಟ್‌ ಕೊಡೋಣ

Team Udayavani, Mar 21, 2023, 3:34 PM IST

ಮನಸ್ಸಿದ್ದರಷ್ಟೇ ಸಾಲದು, ಓಡ್ತಾ ಇರಬೇಕು; ಬಾಲ ಇರ್ಬೇಕು, ಅಲ್ಲಾಡಿಸುತ್ತಿರಬೇಕು !

ಈಗ ಎಲ್ಲಿ ಕೇಳಿದರೂ ಹೊಸ ಪ್ರಯೋಗಗಳ ಮಾತೇ. ಚುನಾವಣೆಯಲ್ಲೂ ಅಷ್ಟೇ. ಓಡಿದ ಅನುಭವ ಇದ್ದರೆ ಸಾಲದು, ಈಗಲೂ ಓಡೋ ಹುಮ್ಮಸ್ಸು ಇದೆಯಾ ಅಂತಾ ನೋಡ್ತಾರೆ. ಎಲ್ಲಾದರೂ ಚೂರು ಕುಂಟ್ಕೊಂಡು ನಡೆದ್ರೂ ಅಂದ್ಕೊಳ್ಳಿ ಅಥವಾ ಓಡಿ ಚೂರು ಉಸಿರು ಬಿಟ್ಟರೆಂದುಕೊಳ್ಳಿ, ಫೌಲ್‌ ಅಂತಾ ಕೆಂಪು ಬಾವುಟ ತೋರಿಸಿ ಬಿಡ್ತಾರೆ. ಒಟ್ಟೂ ಮುಖದಲ್ಲೂ ಯಂಗ್‌, ಮನಸ್ಸಿನಲ್ಲೂ ಯಂಗ್‌, ಕ್ಷೇತ್ರದಲ್ಲೂ ಯಂಗ್‌!

ಮೊನ್ನೆ ಹೀಗೇ ಆಯಿತು. ಒಂದು ಪಕ್ಷದ ಟಿಕೆಟ್‌ ಆಕಾಂಕ್ಷಿ (ಪಕ್ಷ ಯಾವುದು ಎಂದು ನೀವು ಕೇಳುವಂತಿಲ್ಲ, ನಾವು ಹೇಳುವಂತಿಲ್ಲ, ಯಾಕಂದ್ರೆ ಚುನಾವಣ ನೀತಿ ಸಂಹಿತೆ ಜಾರಿಯಲ್ಲಿದೆ) ಕ್ಷೇತ್ರದಲ್ಲಿ ಚುನಾವಣ ಪೂರ್ವ ಪ್ರಚಾರ ಮಾಡುತ್ತಿದ್ದರು. ಪಕ್ಷದವರು ಈ ಬಾರಿ “ಯಂಗ್‌ ಫೇಸ್‌’ಗೆ ಅವಕಾಶ ಕೊಡ್ತಾರೆ ಅಂತಾ ಅಂದಿದ್ದಕ್ಕೆ, ಈತ ಸಣ್ಣ ಉದ್ಯೋಗ ಬಿಟ್ಟು ಟಿಕೆಟ್‌ ರೇಸ್‌ಗೆ ಬಿದ್ದ.

ಇವನ ಹುಮ್ಮಸ್ಸು ನೋಡಿ ಹಾಲಿಗಳು, ಕೆಲವು ಮಾಜಿ ಹಿರಿಯರು “ಇನ್ನೂ ಪೀಚು, ಎರಡು ಬಿಸಿಲು ಜೋರಾದರೆ ಉದುರಿ ಹೋಗುತ್ತೆ, ಇರಲಿ ನಾಲ್ಕು ದಿನ’ ಎಂದು ಗೇಲಿ ಮಾಡುತ್ತಾ ತಿರುಗತೊಡಗಿದರು. ಒಂದು ದಿನ ಪಕ್ಷದ ವರಿಷ್ಠರು ಎಲ್ಲರನ್ನೂ ಕರೆದು, “ನೋಡ್ರಪ್ಪಾ, ಈ ಬಾರಿ ಆ ಯಂಗ್‌ ಫೇಸ್‌ಗೆ ಟಿಕೆಟ್‌ ಕೊಡೋಣ’ ಎಂದರಂತೆ.

ಈ ಹಾಲಿಗಳು, ಮಾಜಿ ಹಿರಿಯರೆಲ್ಲ ಮುಖ ಮುಖ ನೋಡ್ಕೊಳ್ಳೋಕೆ ಶುರು ಮಾಡಿದರು. ಅಲ್ಲಯ್ಯ ಇದನ್ನು ಕಪ್ಪು ಕುದುರೆ (ಡಾರ್ಕ್‌ ಹಾರ್ಸ್‌) ಎಂದುಕೊಂಡಿದ್ದವಲ್ಲಪ್ಪ? ನಮ್ಮ ಬಿಳಿ ಕುದುರೆ ಇರುವಾಗ ಈ ಕಪ್ಪಿಗೇಕಪ್ಪಾ ಮಣೆ ಎಂದು ಕೇಳಿಕೊಳ್ಳ ತೊಡಗಿದರು. ಸಭೆಯಲ್ಲಿದ್ದ ಚುನಾವಣೆ ರಾಜಕೀಯದಿಂದ ನಿವೃತ್ತಿ ಯಾಗಿದ್ದ ಹಿರಿಯರೊಬ್ಬರು ಹತ್ತಿರದಲ್ಲಿದ್ದವನ ಕಿವಿ ಯಲ್ಲಿ-“ನಮಗೆ ಬೇಕಿರೋದು ಕತ್ತೇನೋ, ಕುದುರೇನೋ, ಕಪ್ಪೋ, ಬಿಳುಪೋ ಅಲ್ಲ. ಅದಕ್ಕೆ ಕಾಲಿರಬೇಕು, ಬಾಲ ಇರಬೇಕು, ಅಲ್ಲಾಡಿಸುತ್ತಿರಬೇಕು, ಗೆಲ್ತಿನಿ ಅಂತ ಹಾರ ಹಾಕ್ಕೊಂಡು ಓಡ್ತಾನೇ ಇರಬೇಕು!’ ಅಷ್ಟೇ.

ಟಾಪ್ ನ್ಯೂಸ್

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!

ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!

dk shivakumar

CM Post Crisis: ನಾನು ಈ ಪಕ್ಷ ಕಟ್ಟಿದ್ದೇನೆ..: ದೆಹಲಿಯಲ್ಲಿ ಗುಡುಗಿದ ಡಿಕೆ ಶಿವಕುಮಾರ್

dk shivakumar siddaramaiah rahul gandhi

ಸಿಎಂ ಆಯ್ಕೆಗೆ ಕಗ್ಗಂಟಾಗುತ್ತಿರುವುದು ಅಂದು ‘ರಾಹುಲ್ ಗಾಂಧಿ’ ಕೊಟ್ಟ ಆ ಒಂದು ಮಾತು!

Ramanath-rai

ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತಿದ್ದೇನೆ: ರಮಾನಾಥ ರೈ ಘೋಷಣೆ

1-wwe

ಮುಖ್ಯಮಂತ್ರಿ ಆಯ್ಕೆ; ಅಮ್ಮ ಡಿಕೆಶಿ ಪರ, ಮಗ ಸಿದ್ದು ಪರ: ಬಿಕ್ಕಟ್ಟಿಗೆ ಹೈಕಮಾಂಡ್‌ ಕಾರಣವೇ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.