ಕೇಡು ಬಯಸಿದರೂ ಒಳಿತು ಬಯಸುವ ಯೇಸು ದೇವ : ಅಮರೇಗೌಡ ಪಾಟೀಲ
Team Udayavani, Dec 25, 2021, 5:15 PM IST
ಕುಷ್ಟಗಿ: ಒಳಿತು ಮಾಡಿದರೂ ಕೇಡು ಬಯಸುವ ಮನುಷ್ಯ ಸ್ವಭಾವದ ದಿನಮಾನಗಳಲ್ಲಿ ಕೇಡು ಬಯಸಿದರೂ ಒಳಿತು ಬಯಸುವ ಯೇಸು ದೇವ ಮಾನವರೆನಿಸಿದ್ದಾರೆ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಹೇಳಿದರು.
ಪಟ್ಟಣದ ಹೊರವಲಯದ ಚೀಯೋನ್ ನಗರದಲ್ಲಿ ಬ್ಲೆಸಿಂಗ್ ಸ್ಪಿರ್ಚ್ಯೂವಲ್ ಸೋಷಿಯಲ್ ಮಿನಿಷ್ಟ್ರೀ ಸ್ಪಿರಿಟ್ ಪಿಲ್ಡ್ ಯುನಿವರ್ಸಲ್ ಚರ್ಚ್ ಆತ್ಮಭರಿತ ಸಾರ್ವತ್ರಿಕ ಎಜೆ ಸಭೆಯಲ್ಲಿ ಕ್ರಿಸಮಸ್ ಹಬ್ಬದ ಸಂಭ್ರಮ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಯೇಸು ಯಾವುದೇ ತಪ್ಪು ಮಾಡದೇ ಇದ್ದರೂ, ಒಬ್ಬ ವ್ಯಕ್ತಿ ಅವರ ವಿರುದ್ದ ರೇಗಾಡಿ ಯೇಸುವಿನ ಬಲ ಕೆನ್ನೆಗೆ ಬಾರಿಸಿದಾಗ ಯೇಸು ಪ್ರತಿಕಾರ ತೋರಿಸದೇ ಎಡ ಕೆನ್ನೆಗೆ ಹೊಡೆಯುವಂತೆ ಕೇಳಿ ಕೊಂಡರು. ನಾವಾದರೆ ಬಲವಾಗಿ ಹೊಡೆದು ಪ್ರತಿಕಾರ ತೋರಿಸಿಕೊಳ್ಳುತ್ತಿದ್ದೆವು ಇದೇ ನಮಗೂ ದೇವಮಾನವರಿಗೆ ಇರುವ ವ್ಯತ್ಯಾಸವಾಗಿದೆ.ಹೀಗಾಗಿ ದೇವ ಮಾನವರನ್ನು ನೆನೆಸಿಪಿ, ಪೂಜಿಸಿದರೆ ಸಾಲದು ಅವರ ಸಂದೇಶಗಳು, ನಡೆ ನುಡಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.ಬಡವರು, ತುಳಿತಕ್ಕೆ ಒಳಗಾದವರ ಸಹಾಯ ಮಾಡುವ ಗುಣ ಬೆಳಸಿಕೊಳ್ಳಬೇಕು ಎಂದ ಅವರು,ಗಳಿಸಿರುವ ಸಂಪತ್ತು ಬಡವ, ದೀನದಲಿತರಿಗೆ ಹಂಚಬೇಕು. ವಾರದಲ್ಲಿ ಒಂದು ದಿನ ಯೇಸು ಸ್ಮರಣೆಗೆ ಮೀಸಲಿಡುವುದರಿಂದ ಜೀವನದಲ್ಲಿ ಶಾಂತಿ ನೆಮ್ಮದಿ ಹೊಂದಲು ಸಾದ್ಯವಿಲ್ಲ ಎಂದರು.
ಕ್ರೈಸ್ತ ಪಾದ್ರಿ ಎಸ್.ಕೆ.ಜೋಷ್ ಮಾತನಾಡಿ, ಕ್ರೈಸ್ತನ ಧರ್ಮ, ಸತ್ಯ ಪ್ರತಿ ಮಾನವರಲ್ಲಿ ವಾಸವಾಗಲಿ ಎಂದು ಆಶಯ ವ್ಯಕ್ತಪಡಿಸಿದರು. ತಹಶೀಲ್ದಾರ ಎಂ.ಸಿದ್ದೇಶ ಅವರು, ಕ್ರಿಸ್ ಮಸ್ ಶುಭಾಶಯಗಳನ್ನು ತಿಳಿಸಿದರು.ವೇದಿಕೆಯಲ್ಲಿ ಮಹಾಂತೇಶ ಶೆಟ್ಟರ್, ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ಪಿ.ರಾಜು, ಸಂಗಮೇಶ ಹಿರೇಗೌಡ್ರು, ಬಸವರಾಜ ಯರದೊಡ್ಡಿ, ಬಾಬ್ಜಿ, ಶಂಕರ್, ಶಿವಮೂರ್ತಿ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP ಅಧಿಕಾರದ ರಾಜ್ಯಗಳಲ್ಲಿ ಎಸ್ಸಿಪಿ, ಟಿಎಸ್ಪಿ ಕಾಯ್ದೆ ಜಾರಿ ಮಾಡಿಲ್ಲ: ಸಿಎಂ
Koppala; ಸಿಎಂ ಸಿದ್ದರಾಮಯ್ಯ ಎದುರೇ ಸ್ಪೋಟಗೊಂಡ ಗಂಗಾವತಿ ಕಾಂಗ್ರೆಸ್ ಬಣ ಬಡಿದಾಟ
ಬಿಜೆಪಿ ಸುಳ್ಳು ಉತ್ಪಾದನೆ ಮಾಡುವ ಫ್ಯಾಕ್ಟರಿ: ಸಿಎಂ ಸಿದ್ದರಾಮಯ್ಯ
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
MUST WATCH
ಹೊಸ ಸೇರ್ಪಡೆ
Shivamogga; ಮಾಜಿ ಸಿಎಂಗಳ ಕುಟುಂಬ ಕಾಳಗಕ್ಕೆ ಈಶ್ವರಪ್ಪ ರಂಗು!
ಇವರ ಬದುಕಿನ ಬಂಡಿಗೆ ಆತ್ಮವಿಶ್ವಾಸ-ಛಲವೇ ಚಕ್ರಗಳು! ಇರುವುದೊಂದೇ ಕಾಲು, ಇರುವುದೊಂದೇ ಬದುಕು
ವರದಿ, ವೀಡಿಯೋ ಪ್ರಕಟಿಸದಂತೆ ನಿರ್ಬಂಧಕಾಜ್ಞೆ ತಂದ ಈಶ್ವರಪ್ಪ ಪುತ್ರ
Daily Horoscope: ಉದ್ಯೋಗದಲ್ಲಿ ಜವಾಬ್ದಾರಿಗಳ ಸಮರ್ಥ ನಿರ್ವಹಣೆ
Missing Case ಉಪ್ಪಿನಂಗಡಿ: ತಾಯಿ-ಮಗು ನಾಪತ್ತೆ; ಪ್ರಕರಣ ದಾಖಲು