Bharath Jodo: ಜೋಡೋ ನಡಿಗೆಗೆ ಸಿಎಂ, ಡಿಸಿಎಂ ನೇತೃತ್ವ
Team Udayavani, Sep 8, 2023, 1:36 AM IST
ರಾಮನಗರ: ಕಾಂಗ್ರೆಸ್ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಕಳೆದ ವರ್ಷ ಕೈಗೊಂಡಿದ್ದ “ಭಾರತ್ ಜೋಡೋ’ ಯಾತ್ರೆಗೆ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆ ಯಲ್ಲಿ ರಾಮನಗರದಲ್ಲಿ ಗುರುವಾರ ಕೆಪಿಸಿಸಿ ವತಿಯಿಂದ ಜೋಡೋ ನಡಿಗೆ ನಡೆಯಿತು. ಮುಖ್ಯ ಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಮತ್ತಿತರ ಪ್ರಮುಖರು ಪಾಲ್ಗೊಂಡಿ ದ್ದರು.
ನಡಿಗೆ ಒಂದು ತಾಸು ನಡೆ ಯಿತು. ಸಂಜೆ 6.45ಕ್ಕೆ ಆರಂಭ ಗೊಂಡ ಯಾತ್ರೆ 7.45ಕ್ಕೆ ಮುಕ್ತಾಯಗೊಂಡಿತು.
ಬಿಜೆಪಿ ವಿರುದ್ಧ ಆಕ್ರೋಶ
ಈ ಸಂದರ್ಭ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ದೇಶದ ಏಕತೆಯನ್ನು ಪ್ರತಿಪಾದಿ ಸಿದ ಮಹಾತ್ಮಾ ಗಾಂಧೀಜಿಯವ ರನ್ನು ಕೊಂದು ಹಾಕಿದ ಬಿಜೆಪಿ ಯವರು ದೇಶವನ್ನು ಮತ್ತೆ ಒಡೆ ಯಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು. ರಾಹುಲ್ ಗಾಂಧಿ ಪಾದಯಾತ್ರೆ ಮಾಡಿದ ಕ್ಷೇತ್ರಗಳ ಪೈಕಿ ತುರುವೆ ಕೆರೆ ಬಿಟ್ಟು ಎಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಪ್ರಧಾನಿ ಮೋದಿ ರ್ಯಾಲಿಮಾಡಿದ ಕ್ಷೇತ್ರಗಳಲ್ಲೆಲ್ಲ ಬಿಜೆಪಿ ಸೋತಿದೆ ಎಂದು ಲೇವಡಿ ಮಾಡಿದರು.
ಮುಂದಿನ ಚುನಾವಣೆಯನ್ನು ಗಮನದಲ್ಲಿ ಇರಿಸಿಕೊಂಡು ಕೇಂದ್ರ ಸರಕಾರ ದೇಶದ ಹೆಸರು ಬದಲಿಸಲು ಮುಂದಾಗಿದೆ ಎಂದು ಡಿಸಿಎಂ ಡಿ.ಕೆ. ಶಿವ ಕುಮಾರ್ ಆರೋಪಿಸಿದರು.
ಕೆಂಗಲ್ ಪ್ರತಿಮೆಗೆ ಪುಷ್ಪಾರ್ಚನೆ
ಜೋಡೋ ನಡಿಗೆಗೆ ಮುನ್ನ ಸಿಎಂ ಮತ್ತು ಡಿಸಿಎಂ ಡಿ.ಕೆ. ಶಿವ ಕುಮಾರ್ ರಾಮನಗರದಲ್ಲಿರುವ ಕೆಂಗಲ್ ಹನುಮಂತಯ್ಯ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದರು.