Kadaba: ಬಾಲಾಪರಾಧಿಯಿಂದ ಕಳವು; ರಾಜಿ
Team Udayavani, Feb 8, 2024, 11:54 PM IST
ಕಡಬ: ಆಲಂಕಾರು ಪೇಟೆಯಲ್ಲಿನ ಸಾನಿಧ್ಯ ಮೊಬೈಲ್ ಅಂಗಡಿಯ ಬೀಗ ಮುರಿದು ಮೊಬೈಲ್ ಸೆಟ್ಗಳನ್ನು ಕದ್ದೊಯ್ದಿದ್ದ ಆರೋಪಿಯನ್ನು ವಶಕ್ಕೆ ಪಡೆದಿದ್ದ ಪೊಲೀಸರು ಆತ ಬಾಲಾಪರಾಧಿ ಎನ್ನುವ ಕಾರಣದಿಂದ ಪ್ರಕರಣ ದಾಖಲಿಸದೆ ಬಿಟ್ಟಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಫೆ. 5ರಂದು ರಾತ್ರಿ ಸುಮಾರು 1.30ರ ವೇಳೆಗೆ ಯುವಕನೋರ್ವ ಅಂಗಡಿಯ ಬೀಗ ಮುರಿದು ಮೊಬೈಲ್ ಕಳ್ಳತನ ನಡೆಸಿರುವ ಘಟನೆ ಸಿಸಿ ಟಿವಿಯಲ್ಲಿ ಸೆರೆಯಾಗಿತ್ತು. ಆ ಯುವಕನನ್ನು ವಶಕ್ಕೆ ಪಡೆದುಕೊಂಡ ಕಡಬ ಪೊಲೀಸರು ಕದ್ದಿರುವ ಮೊಬೈಲ್ ಸೆಟ್ಗಳನ್ನು ವಶಕ್ಕೆ ಪಡೆದು ಅಂಗಡಿ ಮಾಲಕರಿಗೆ ಹಿಂದಿರುಗಿಸಿದ್ದಾರೆ. ಬಳಿಕ ಈತ ಬಾಲಪರಾಧಿ ಎಂದು ಪ್ರಕರಣ ದಾಖಲಿಸದೆ ಪ್ರಕರಣವನ್ನು ರಾಜಿಯಲ್ಲಿ ಮುಗಿಸಿದ್ದಾರೆ. ಆರೋಪಿ ಬಾಲಾಪರಾಧಿ. ಅಲ್ಲದೇ ಅಂಗಡಿ ಮಾಲಕರು ದೂರನ್ನು ಕೂಡ ನೀಡಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಪ್ರಕರಣನ್ನು ರಾಜಿಯಲ್ಲಿ ಮುಗಿಸಲಾಗಿದೆ ಎಂದು ಕಡಬ ಪೊಲೀಸ್ ಠಾಣಾ ಉಪನಿರೀಕ್ಷಕ ಅಭಿನಂದನ್ ಅವರು ತಿಳಿಸಿದ್ದಾರೆ.