ಕೋವಿಡ್-19 ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿದ ರಾಜ್ಯಪಾಲ ವಜುಭಾಯಿ ವಾಲಾ
Team Udayavani, Apr 7, 2020, 4:11 PM IST
ಬೆಂಗಳೂರು: ಕೊವಿಡ್-19 ವಿರುದ್ಧದ ಹೋರಾಟಕ್ಕೆ ರಾಜ್ಯದ ರಾಜ್ಯಪಾಲ ವಜುಭಾಯಿ ವಾಲಾ ಅವರು ತನ್ನ ವೇತನದ ಶೇ. 30ರಷ್ಟನ್ನು ಪ್ರಧಾನ ಮಂತ್ರಿ ನಿಧಿಗೆ ನೀಡಿದ್ದಾರೆ.
ರಾಜ್ಯಪಾಲ ವುಜುಭಾಯಿ ವಾಲಾ ಅವರು ತನ್ನ ವೇತನದ ಶೇ.30ರಷ್ಟು ಭಾಗವನ್ನು ಪ್ರಧಾನಮಂತ್ರಿ ಆರೈಕೆ ನಿಧಿಗೆ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಮಂಗಳವಾರ ನೀಡಿದ್ದಾರೆ. ಕೋವಿಡ್-19 ವಿರುದ್ಧ ಹೋರಾಟಕ್ಕಾಗಿ ಒಂದು ವರ್ಷಗಳ ಕಾಲ ರಾಜ್ಯಪಾಲರು ತನ್ನ ವೇತನ ಶೇ. 30ರಷ್ಟನ್ನು ನೀಡಲಿದ್ದಾರೆ ಎಂದು ರಾಜ ಭವನದ ಪತ್ರಿಕಾ ಪ್ರಕಟಣೆ ತಿಳಿಸಿದೆ.
ಒಂದು ವರ್ಷಗಳ ಕಾಲ ಸಂಸದರ ವೇತನದ ಶೇಕಡಾ 30ರಷ್ಟನ್ನು ಕಡಿತ ಮಾಡಿ, ಆ ಹಣವನ್ನು ಕೋವಿಡ್-19 ಸೋಂಕು ವಿರುದ್ಧ ಹೋರಾಟಕ್ಕೆ ಬಳಸಿಕೊಳ್ಳಲು ಕೇಂದ್ರ ಸಂಪುಟ ಸಭೆಯಲ್ಲಿ ಸೋಮವಾರ ನಿರ್ಣಯಿಸಲಾಗಿತ್ತು.