ಕೇರಳ ರಸ್ತೆ ಬಂದ್: ಅತಂತ್ರರಾದ ಗ್ರಾಮಸ್ಥರು,ಬಂದ್ ತೆರವಿಗೆ ಜಿಲ್ಲಾಧಿಕಾರಿಗಳಿಗೆ ಮನವಿ
Team Udayavani, Aug 20, 2020, 4:43 PM IST
ಈಶ್ವರಮಂಗಲ: ಕರ್ನಾಟಕದ ಪ್ರದೇಶದಲ್ಲಿ ಹಾದು ಹೋಗುತ್ತಿರುವ ಕೇರಳ ಲೋಕೋಪಯೋಗಿ ರಸ್ತೆಯನ್ನು ಕೇರಳ ಸರಕಾರ ಬಂದ್ ಮಾಡಿರುವುದರಿಂದ ನೆಟ್ಟಣಿಗೆ ಮುಡ್ನೂರು ಗ್ರಾಮದ ಕೊಟ್ಯಾಡಿ ಪ್ರದೇಶದ ಜನರು ಅತಂತ್ರರಾಗಿದ್ದು ಈ ವಿಷಯ ಮನಗಂಡು ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ಅಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ರಸ್ತೆ ತೆರವು ಮಾಡುವಂತೆ ಮನವಿ ಮಾಡಿದ್ದಾರೆ.
ಕೇರಳ ಕರ್ನಾಟಕ ಗಡಿಭಾಗದಲ್ಲಿ ಕೊಟ್ಯಾಡಿ ಪ್ರದೇಶವು ಕರ್ನಾಟಕ ಪ್ರದೇಶಕ್ಕೆ ಸೇರಿದಾಗಿದೆ. ಈ ಪ್ರದೇಶದಲ್ಲಿ ಕೇರಳ ಲೋಕೋಪಯೋಗಿ ರಸ್ತೆ ಹಾದು ಹೋಗುತ್ತಿದೆ. ಪಳ್ಳತ್ತೂರು ಮತ್ತು ಕೊಟ್ಯಾಡಿ ಎಂಬಲ್ಲಿ ರಸ್ತೆಗಳನ್ನು ಬಂದ್ ಮಾಡಿರುವುದರಿಂದ ಇಲ್ಲಿನ ನೆಟ್ಟಣಿಗೆ ಮುಟ್ನೂರು ಗ್ರಾಮದವರು ರಾಜ್ಯದ ಸಂಪರ್ಕವನ್ನು ಕಳೆದುಕೊಂಡಿದ್ದಾರೆ. ರಿಯಾಯಿತಿ ನೀಡುತ್ತಿರುವ ಪೊಲೀಸರ ಕಟ್ಟುನಿಟ್ಟು ಕ್ರಮ ಗ್ರಾಮಸ್ಥರನ್ನು ತೊಂದರೆಗೆ ಸಿಲುಕಿಸಿದೆ, ನೆಟ್ಟಣಿಗೆ ಮುಟ್ನೂರು ಗ್ರಾಮಕ್ಕೆ ಸಂಬಂಧಿಸಿದ ಪ್ರದೇಶಗಳಾದ ಕೊಟ್ಯಾಡಿ, ಗಾಳಿಮುಖ, ಕಟ್ಟಪುಣಿ, ಗೋಳಿತ್ತಡಿ, ಸರೋಳಿ, ಪುದಿಯವಪ್ಪು ಇತ್ಯಾದಿ ಭಾಗಗಳಿಗೆ ಪಳ್ಳತ್ತೂರು ಮುಖಾಂತರ ಕೇರಳ ಲೋಕೋಪಯೋಗಿ ರಸ್ತೆಯಲ್ಲಿ ಸಂಚರಿಸಬೇಕು. ಜನರಿಗೆ ಪಂಚಾಯತ್ ಕಛೇರಿ, ಸರಕಾರಿ ಆಸ್ಪತ್ರೆ, ಪಶು ಆಸ್ಪತ್ರೆ, ಅಂಚೆ ಕಛೇರಿ, ಮೆಸ್ಕಾಂ ಕಚೇರಿಗೆ ಈಶ್ವರಮಂಗಲವನ್ನೇ ಅವಲಂಬಿಸಿದ್ದಾರೆ. ಆದರೆ ಕೇರಳ ರಾಜ್ಯದ ಪೊಲೀಸ್ ಇಲಾಖೆಯಿಂದ ಗಾಳಿಮುಖ, ಕೊಟ್ಯಾಡಿ ಎಂಬಲ್ಲಿ ಗ್ರಾಮಸ್ಥರನ್ನು ತಡೆ ಹಿಡಿಯಲಾಗಿದೆ. ಆದರೆ ಕೇರಳ ರಾಜ್ಯ ದೇಲಂಪಾಡಿ ಗ್ರಾಮದವರು ನಮ್ಮ ರಾಜ್ಯದ ರಸ್ತೆಯ ಮೂಲಕ ಸಂಚರಿಸುತ್ತಿದ್ದಾರೆ. ಅದರಿಂದ ಗ್ರಾಮದ ಜನರಿಗೆ ಕೊಟ್ಯಾಡಿಯಿಂದ ಲೋಕೋಪಯೋಗಿ ರಸ್ತೆಯಲ್ಲಿ ಸಂಚರಿಸಲು ಅನುಕೂಲವಾಗುವಂತೆ ಕ್ರಮ ಕೈಗೊಳ್ಳುವಂತೆ ಪಂಚಾಯತ್ ಅಡಳಿತ ಅಧಿಕಾರಿಗಳಲ್ಲಿ ವಿನಂತಿ ಮಾಡಿಕೊಳ್ಳಲಾಗಿದೆ.ಒಂದುವೇಳೆ ಕ್ರಮಕೈಗೊಳ್ಳದಿದ್ದರೆ ಗಡಿಭಾಗವನ್ನು ಬಂದ್ ಮಾಡುವಂತೆ ಗ್ರಾಮಸ್ಥರು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್ ಹೇಳಿಕೆ
ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…
Kollywood: ದಳಪತಿ ವಿಜಯ್ ʼGOATʼ ಸಿನಿಮಾದಲ್ಲಿ ಧೋನಿ, ರುತ್ ರಾಜ್ ನಟನೆ?
Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ
ಮುಸ್ಲಿಮರು ಮೋದಿ ಬೆಂಬಲಿಸಲಿ: ರಮೇಶ ಜಾರಕಿಹೊಳಿ