Karnataka: ದಂಡ, ಶುಲ್ಕ ಮೊತ್ತ ಪರಿಷ್ಕರಣೆೆ ಶಿಫಾರಸು


Team Udayavani, Nov 25, 2023, 11:22 PM IST

LAW

ಬೆಂಗಳೂರು: ವಿವಿಧ ಇಲಾಖೆಗಳಲ್ಲಿ ಜಾರಿಯಲ್ಲಿರುವ ದಂಡ ಹಾಗೂ ಶುಲ್ಕದ ಮೊತ್ತವನ್ನು ಪರಿಷ್ಕರಿಸುವಂತೆ ಸರಕಾರಕ್ಕೆ ಕರ್ನಾಟಕ ಆಡಳಿತ ಸುಧಾರಣ ಆಯೋಗ-2 ಶಿಫಾರಸು ಮಾಡಿದೆ.
ಶನಿವಾರದಂದು ಗೃಹಕಚೇರಿ “ಕೃಷ್ಣಾ’ದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತನ್ನ 6ನೇ ವರದಿ ಸಲ್ಲಿಸಿದ ಟಿ.ಎಂ. ವಿಜಯಭಾಸ್ಕರ್‌ ಅಧ್ಯಕ್ಷತೆಯ ಆಯೋಗವು, ವಸತಿ, ಅರಣ್ಯ, ಜಲಸಂಪನ್ಮೂಲ, ಲೋಕೋಪಯೋಗಿ, ಕೈಗಾರಿಕೆ, ಬಂದರು, ಒಳನಾಡು ಸಹಿತ ವಿವಿಧ ಇಲಾಖೆಗಳಿಗೆ ಸಂಬಂಧಿಸಿ 278 ಪುಟಗಳ 882 ಶಿಫಾರಸುಗಳನ್ನು ಮಾಡಿದೆ.

ಪ್ರಮುಖವಾಗಿ ಕರ್ನಾಟಕ ಗೃಹ ಮಂಡಳಿಯು ಮನೆಗಿಂತ ನಿವೇಶನ ನಿರ್ಮಾಣಕ್ಕೆ ಆದ್ಯತೆ ನೀಡುತ್ತಿದ್ದು, ಈ ನಿವೇಶನಗಳು ನಿಗದಿತ ಅವಧಿಯಲ್ಲಿ ಮನೆ ಕಟ್ಟುವ ಬದಲು ಹೂಡಿಕೆಗಷ್ಟೇ ಬಳಕೆಯಾಗುತ್ತಿದೆ. ಖಾಲಿ ನಿವೇಶನಗಳ ಸಂಪೂರ್ಣ ಮಾರಾಟ ಪತ್ರವನ್ನು ನೋಂದಾಯಿಸಲು ನಿವೇಶನದ ಮಾರ್ಗಸೂಚಿ ಬೆಲೆಯ ಶೇ.25ರಷ್ಟು ದಂಡ ವಿಧಿಸಬಹುದು. ನಿರ್ಮಿತ ಮನೆಗಳ ಮೇಲೆ ವಿಧಿಸುವ ನಿರ್ವಹಣೆ ಶುಲ್ಕದ ಎರಡುಪಟ್ಟು ನಿರ್ವಹಣೆ ಶುಲ್ಕವನ್ನು ಖಾಲಿ ನಿವೇಶನಗಳ ಮೇಲೆ ವಿಧಿಸಬಹುದು. ಕರ್ನಾಟಕ ಕೊಳೆಗೇರಿ ಪ್ರದೇಶಗಳು (ಸುಧಾರಣೆ ಮತ್ತು ತೆರವು) ಕಾಯ್ದೆ 1973ಕ್ಕೆ ತಿದ್ದುಪಡಿ ತಂದು, ಘೋಷಿತ ಜಮೀನುಗಳ ಅತಿಕ್ರಮ ತೆರವಿಗಾಗಿ ಮಾರ್ಗಸೂಚಿ ಮೌಲ್ಯದ ಶೇಕಡಾವಾರು ದಂಡ ನಿಗದಿಪಡಿಸಬೇಕು. ಅನಧಿಕೃತ ಸಾಗುವಳಿ ಮಾಡಿದರೆ ಮೊದಲ ಬಾರಿಗೆ 500 ರೂ. ಇರುವ ದಂಡದ ಮೊತ್ತವನ್ನು 5 ಸಾವಿರ ರೂ.ಗೆ, ಅನಂತರದ ಅಪರಾಧಕ್ಕೆ 1,000 ರೂ. ಇರುವ ದಂಡವನ್ನು 10 ಸಾವಿರ ರೂ.ವರೆಗೆ ಹಾಗೂ ಗರಿಷ್ಠ 48 ಸಾವಿರ ರೂ.ವರೆಗೆ ಹೆಚ್ಚಿಸಬಹುದು ಎಂದು ಶಿಫಾರಸು ಮಾಡಿದೆ.

ಹೆದ್ದಾರಿಗೆ ಹಾನಿ ಮಾಡಿದರೆ ಲಕ್ಷ ರೂ. ದಂಡ
ನೀರಾವರಿ ಯೋಜನೆಗಳಿಗೆ ಹಾನಿ ಮಾಡುವವರ ಅಪರಾಧ ಸಾಬೀತಾದರೆ 1 ಲಕ್ಷ ರೂ., ಜಲಾಗಾರ, ಜಲಾಶಯಗಳ ಅತಿಕ್ರಮ ಪ್ರವೇಶ ಮಾಡಿದರೆ, 25 ಸಾವಿರ ರೂ., ಕಾನೂನುಬಾಹಿರವಾಗಿ ನೀರು ಬಳಕೆ ಮಾಡಿದರೆ, ಬೆಳೆ ಬೆಳೆದರೆ 1.50 ಲಕ್ಷ ರೂ., ರಾಜ್ಯ ಹೆದ್ದಾರಿ ಅತಿಕ್ರಮ ಮಾಡಿದರೆ 25 ಸಾವಿರ ರೂ.ಗಳಿಂದ 50 ಸಾವಿರ ರೂ.ವರೆಗೆ ದಂಡ ವಿಧಿಸಲು ಅವಕಾಶ ನೀಡಬಹುದು. ಹೆದ್ದಾರಿಗೆ ಹಾನಿಯುಂಟು ಮಾಡಿದರೆ 1 ಲಕ್ಷ ರೂ., ಸುಂಕ ಪಾವತಿಸದೆ ಸೇತುವೆ ಪ್ರವೇಶಿಸಿದರೆ 2ರಿಂದ 5 ಸಾವಿರ ರೂ.ಗಳವರೆಗೆ ದಂಡ, ಸರಕಾರಿ ಭೂಮಿಯಲ್ಲಿ ಕಟ್ಟಡ ಕಲ್ಲಿನ ಗುತ್ತಿಗೆಗಳು ಅನುಮೋದಿತ ವಾರ್ಷಿಕ ಉತ್ಪಾದನ ಸಾಮರ್ಥ್ಯದ ಕನಿಷ್ಠ ಶೇ.50ರಷ್ಟನ್ನು ಉತ್ಪಾದಿಸಬೇಕು. ಇಲ್ಲದಿದ್ದರೆ, ಉತ್ಪಾದನೆ ಕೊರತೆಗೆ ರಾಜಧನವನ್ನು ದಂಡದ ರೂಪದಲ್ಲಿ ವಸೂಲಿ ಮಾಡಬಹುದು. ಇದನ್ನು ಮರಳು ಗಣಿಗಾರಿಕೆಗೂ ಅನ್ವಯಿಸಬಹುದು. ಉಪಖನಿಜ ರಿಯಾಯಿತಿ ಪರವಾನಗಿ ಹೊಂದಿದವರ ಹೆಸರು, ರಾಷ್ಟ್ರೀಯತೆ ಇತ್ಯಾದಿ ಒದಗಿಸಲು ವಿಫ‌ಲರಾದರೆ 1.22 ಲಕ್ಷ ರೂ. ದಂಡ ವಸೂಲಿ ಮಾಡಬಹುದು ಎಂದು ಸಲಹೆ ನೀಡಿದೆ.

ಪ್ರವೇಶ ಶುಲ್ಕ ಹೆಚ್ಚಿಸಲೂ ಸಲಹೆ
ಸಂರಕ್ಷಿತ ವನ್ಯಜೀವಿ ವಲಯದ ಪ್ರವೇಶ ಶುಲ್ಕವನ್ನೂ ಪರಿಷ್ಕರಿಸಲು ಶಿಫಾರಸು ಮಾಡಿದ್ದು, ಭಾರತೀಯ ವ್ಯಕ್ತಿಗೆ 50 ರೂ. ವಿದೇಶಿಗರಿಗೆ 150 ರೂ., ಮೋಟಾರು ಕಾರು, ಜೀಪು ಇತ್ಯಾದಿ ವಾಹನಗಳಿಗೆ 400 ರೂ. ಹಾಗೂ ಭಾರೀ ವಾಹನಗಳಿಗೆ 500 ರೂ. ಪ್ರವೇಶ ಶುಲ್ಕ ವಿಧಿಸಲೂ ಶಿಫಾರಸು ಮಾಡಿದೆ.

ಮೀಸಲು ಅಥವಾ ಗ್ರಾಮ ಅರಣ್ಯದಲ್ಲಿ ಜಾನುವಾರು ಅತಿಕ್ರಮ ಪ್ರವೇಶಿಸಿದರೆ ಅಂತಹ ಪ್ರಾಣಿಗಳ ಮಾಲಕರಿಗೆ ದಂಡ ವಿಧಿಸಲಾಗುತ್ತದೆ. ಆನೆಗೆ 20 ರೂ. ಇರುವ ದಂಡವನ್ನು 1,500 ರೂ.ಗೆ ಹೆಚ್ಚಿಸಲು ಶಿಫಾರಸು ಮಾಡಿದೆ. ಎಮ್ಮೆ, ಒಂಟೆಗೆ 4 ರೂ.ಗಳಿಂದ 300 ರೂ., ಕುದುರೆ, ಮೇರ್‌ ಇತ್ಯಾದಿಗಳಿಗೆ 2 ರೂ.ಗಳಿಂದ 150 ರೂ., ಕರು, ಕತ್ತೆ, ಹಂದಿ ಇತ್ಯಾದಿ ಪ್ರಾಣಿಗಳು ಅತಿಕ್ರಮಿಸಿದರೆ 1 ರೂ.ಗಳಿಂದ 100 ರೂ.ಗೆ ದಂಡದ ಪ್ರಮಾಣ ಹೆಚ್ಚಿಸಲು ಶಿಫಾರಸು ಮಾಡಿದೆ.

ಟಾಪ್ ನ್ಯೂಸ್

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

1-wqe-qweq

Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qeeqwewqwqe

Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.