ಉಕ್ರೇನ್ ನ ಬಂಕರ್ ನಲ್ಲಿ ವಾಸವಿರುವ ನಾವಲಗಿ ಗ್ರಾಮದ ಯುವಕ ಕಿರಣ ಸವದಿ
Team Udayavani, Feb 25, 2022, 9:16 PM IST
ರಬಕವಿ-ಬನಹಟ್ಟಿ: ಉಕ್ರೇನ್ ನ ಓಲೆಸ್ಕಿವಿಸ್ಕಾ ನಗರದಲ್ಲಿ ವೈದ್ಯಕೀಯ ಕಾಲೇಜಿನಲ್ಲಿ ಓದುತ್ತಿರುವು ತಾಲ್ಲೂಕಿನ ನಾವಲಗಿ ಗ್ರಾಮದ ಕಿರಣ ಸವದಿ ಸದ್ಯ ಅಲ್ಲಿಯ ಹಾಸ್ಟೆಲ್ ಕೆಳಗಡೆ ಇರುವ ಬಂಕರ್ ನಲ್ಲಿ ವಾಸವಾಗಿದ್ದಾರೆ.
ಭಾರತೀಯ ಕಾಲಮಾನದ ಪ್ರಕಾರ ಮಧ್ಯಹ್ನ 3 ಗಂಟೆಯ ಸುಮಾರಿಗೆ ತಾವು ಇರುವ ಹಾಸ್ಟೆಲ್ನಿಂದ ಐದಾರು ಕಿ.ಮೀ. ದೂರದಲ್ಲಿ ಬಾಂಬ್ ಸ್ಫೋಟಗೊಂಡಿದ್ದು, ಈ ಕುರಿತು ಬಹುದೊಡ್ಡ ಸದ್ದು ಕೇಳಿ ಬಂದಿತು. ಇಲ್ಲಿರುವ ಅಂದಾಜು ಇನ್ನೂರರಷ್ಟು ವಿದ್ಯಾರ್ಥಿಗಳು ಭಯಭೀತರಾಗಿದ್ದಾರೆ ಎಂದು ಪತ್ರಿಕೆಗೆ ತಿಳಿಸಿದರು.
ಮಧ್ಯಾಹ್ನ ಹಾಸ್ಟೆಲ್ ಗೆ ತೆರಳಿ ಐದು ಹತ್ತು ನಿಮಿಷಗಳಲ್ಲಿ ಊಟ ಮಾಡಿ ಮತ್ತೆ ಬಂಕರ್ನಲ್ಲಿ ಇರಬೇಕಾಗಿದೆ. ಆಹಾರ ಮತ್ತು ನೀರು ಕಡಿಮೆಯಾಗುತ್ತಿದೆ. ಇಲ್ಲಿ ಕೆಲವರಿಗೆ ಮಾತ್ರ ಮಲಗಲು ಅವಕಾಶವಿದ್ದು, ಕುಳಿತುಕೊಳ್ಳಲು ಮಾತ್ರ ಅವಕಾಶವಿದೆ.
ಭಾರತೀಯ ರಾಯಭಾರಿಗಳ ಜೊತೆಗೆ ಸಂಪರ್ಕದಲ್ಲಿದ್ದು, ಅವರೆ ವಾಟ್ಸಪ್ ಗ್ರೂಪ್ ಮಾಡಿದ್ದಾರೆ. ಅವುಗಳ ಮೂಲಕ ಮಾಹಿತಿಯನ್ನು ಕಳಹಿಸುತ್ತಿದ್ದಾರೆ. ಭಾರತಕ್ಕೆ ಮರಳುವ ಬಗ್ಗೆ ಯಾವುದೆ ಮಾಹಿತಿ ದೊರೆತಿಲ್ಲ. ಇಲ್ಲಿರುವ ಎಲ್ಲರೂ ಭಯದಲ್ಲಿ ಇದ್ದಾರೆ ಎಂದು ಕಿರಣ ಸವದಿ ಪತ್ರಿಕೆಗೆ ತಿಳಿಸಿದರು.
ಕಿರಣ ಸವದಿಯವರ ಜೊತೆಗೆ ತುಮಕೂರಿನ ನಂದಿನಿ, ಉದಿತ ಮತ್ತು ಯಶಸ್ವಿನಿ ಕೂಡಾ ಚಿತ್ರದಲ್ಲಿದ್ದಾರೆ.
ಇದನ್ನೂ ಓದಿ : ಉಕ್ರೇನ್ʼನಲ್ಲಿ ಸಿಲುಕಿರುವ ಕನ್ನಡಿಗರನ್ನು ಏರ್ಲಿಫ್ಟ್ ಮಾಡಿ : ಸರಕಾರಕ್ಕೆ HDK ಮನವಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Home Minister ಅಮಿತ್ ಶಾಗೆ ವಕೀಲ ದೇವರಾಜೇಗೌಡ ಪತ್ರ: ವೈರಲ್
Karnataka Govt ಎಸ್ಐಟಿಗೆ ಮತ್ತೆ 3 ಎಸಿಪಿ ಸೇರಿ 19 ಸಿಬ್ಬಂದಿ ನೇಮಕ
D. K. Shivakumar ಪೆನ್ಡ್ರೈವ್ನಂತಹ ಚಿಲ್ಲರೆ ಕೆಲಸ ನಾನು ಮಾಡಲ್ಲ
Prajwal Revanna Case ರಾಷ್ಟ್ರೀಯ ಮಹಿಳಾ ಆಯೋಗದಿಂದ ಸುಮೋಟೋ ಕೇಸ್ ದಾಖಲು
Hassan Pen Drive Case; ಕಾರ್ತಿಕ್ ಪೆನ್ಡ್ರೈವ್ ಕೊಟ್ಟಿದ್ದು ನಿಜ: ದೇವರಾಜೇಗೌಡ
MUST WATCH
ಹೊಸ ಸೇರ್ಪಡೆ
Madhya Pradesh; ರಾಹುಲ್ ಗಾಂಧಿ ಭೇಟಿ ನಡುವೆ, ಬಿಜೆಪಿ ಸೇರಿದ ಕಾಂಗ್ರೆಸ್ ಶಾಸಕ!
Kodaikanal – Ooty ಪ್ರವಾಸಕ್ಕೆ ಇ-ಪಾಸ್ ಕಡ್ಡಾಯ: ಹೈಕೋರ್ಟ್
Muslim ಉತ್ತರಾಧಿಕಾರಕ್ಕೆ ಜಾತ್ಯತೀತ ಕಾಯ್ದೆ ಜಾರಿ: ಸುಪ್ರೀಂಕೋರ್ಟ್ ಚರ್ಚೆ
“Siddaramaiah- H.D. Revanna ನಡುವೆ ಒಪ್ಪಂದಕ್ಕೆ ಎಫ್ಐಆರ್ ಹಾಕಲಿಲ್ಲವೇ?’
Fazal ur Rehman; ಭಾರತ ಸೂಪರ್ಪವರ್, ನಾವು ಭಿಕ್ಷೆ ಬೇಡುತ್ತಿದ್ದೇವೆ: ಪಾಕಿಸ್ಥಾನ ಸಂಸದ