ಕೊರಟಗೆರೆ: ಹಲವೆಡೆ ಜಪ್ತಿ ಮಾಡಿದ್ದ ಮದ್ಯ ಅಧಿಕಾರಿಗಳಿಂದ ನಾಶ
Team Udayavani, Mar 23, 2022, 6:14 PM IST
ಕೊರಟಗೆರೆ: ತಾಲ್ಲೂಕಿನ ವಿವಿಧೆಡೆ ಜಪ್ತಿ ಮಾಡಿದ್ದ ಮದ್ಯವನ್ನು 211.680 ಲೀಟರ್ ಮದ್ಯ, 5.580 ಲೀಟರ್ ಬಿಯರ್ ಮತ್ತು 16.400 ಲೀಟರ್ ಸೇಂದಿಯನ್ನು ಅಬಕಾರಿ ಅಧಿಕಾರಿ ಶ್ರೀಲತಾ ಮತ್ತು ತಂಡದ ಸಿಬ್ಬಂದಿಗಳು ಬುಧವಾರ ನಾಶ ಮಾಡಿದ್ದಾರೆ.
ತುಮಕೂರು ಜಿಲ್ಲೆಯ ಮಾನ್ಯ ಅಬಕಾರಿ ಉಪ ಆಯುಕ್ತರ ಆದೇಶದ ಮೇರೆಗೆ ಹಾಗೂ ಮಧುಗಿರಿ ವಿಭಾಗದ ಮಾನ್ಯ ಉಪ ಅಧೀಕ್ಷಕರ ನೇತೃತ್ವದಲ್ಲಿ ಉಪ ತಹಶಿಲ್ದಾರ್, ಕೆ ಎಸ್ ಬಿಸಿಎಲ್ ಡಿಪೋ ತುಮಕೂರು,ಮತ್ತು ಸ್ಥಳೀಯ ಪಂಚರ ಸಮಕ್ಷಮದಲ್ಲಿ ಪರಿಸರಕ್ಕೆ ಯಾವುದೇ ಹಾನಿ ಉಂಟಾಗದಂತೆ ಪಟ್ಟಣ ಪಂಚಾಯತಿ ಕಸ ತ್ಯಾಜ್ಯ ವಿಲೇವಾರಿ ಘಟಕ ಬೋಡ ಬಂಡೇನಹಳ್ಳಿ ರಸ್ತೆ ಕೊರಟಗೆರೆ ಟೌನ್ ಇಲ್ಲಿ ಅಧಿಕಾರಿಗಳ ಸಮಕ್ಷಮದಲ್ಲಿ ಮದ್ಯವನ್ನು ನಾಶಪಡಿಸಲಾಗಿದೆ.
ನಾಶ ಪಡಿಸುವ ಸಮಯದಲ್ಲಿ ಮಧುಗಿರಿಯ ಅಬಕಾರಿ ಉಪ ಅಧೀಕ್ಷಕರಾದ ಸುರೇಶ್.ಆರ್ ಕೆಎಸ್ ಬಿಸಿಎಲ್ ಘಟಕ ತುಮಕೂರು ಉಪ ವಿಭಾಗದ ಕೆ.ನಾರಾಯಣ್, ಉಪ ತಹಶಿಲ್ದಾರ್ ಹೆಚ್ ಕೆ. ಚಂದ್ರಪ್ಪ, ಕೊರಟಗೆರೆಯ ಅಬಕಾರಿ ನಿರೀಕ್ಷಕರಾದ ಶ್ರೀ ಲತಾ, ಉಪ ನಿರೀಕ್ಷಕರಾದ ವೈಷ್ಣವಿ ಕುಲಕರ್ಣಿ,ಹೆಚ್.ಜಿ ಲೀಲಾ ವೆಂಕಟೇಶ್,ಸಿಬ್ಬಂದಿಗಳಾದ ಹಮೀದ್ ಬುಡಕಿ,ಮಲ್ಲಿಕಾರ್ಜುನ್, ಮಂಜುಳಾ, ಕಿರಣ್ ಕುಮಾರ್ ಇತರರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
IPL; ಮೆಕ್ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ