Kota: ಅಮೃತೇಶ್ವರೀ ಹಲವು ಮಕ್ಕಳ ತಾಯಿ ಗೆಂಡಸೇವೆ ಸಂಪನ್ನ
Team Udayavani, Jan 12, 2024, 1:13 AM IST
ಕೋಟ: ಇಲ್ಲಿನ ಶ್ರೀ ಅಮೃತೇಶ್ವರೀ ಹಲವು ಮಕ್ಕಳ ತಾಯಿ ದೇಗುಲದಲ್ಲಿ ಗೆಂಡಸೇವೆ ಬುಧವಾರ ಜರಗಿತು.
ಸಾಮೂಹಿಕ ಪ್ರಾರ್ಥನೆ, ಕಲಾತತ್ವ ಹೋಮ ಹಾಗೂ ಪರಿವಾರ ದೇವರಿಗೆ ನವಕ ಪ್ರದಾನ ಕಲಾ ವಾಸ ಹೋಮ ಇತ್ಯಾದಿ ನಡೆಯಿತು. ದೇಗುಲಕ್ಕೆ ವಿಶೇಷ ಹೂವಿನ ಅಲಂಕಾರ ಕೈಗೊಳ್ಳಲಾಗಿತ್ತು. ಸಾವಿರಾರು ಭಕ್ತರು ಗೆಂಡಸೇವೆ ಹರಕೆ ಸಲ್ಲಿಸಿದರು. ಸಾವಿರಾರು ಮಂದಿ ಅನ್ನಪ್ರಸಾದ ಸ್ವೀಕರಿಸಿದರು.
ದೇಗುಲದ ಆಡಳಿತ ಮಂಡಳಿ ಮಾಜಿ ಆನಂದ್ ಸಿ. ಕುಂದರ್, ದೇಗುಲದ ಆಡಳಿತಾ ಧಿಕಾರಿ ಶ್ರೀಕಾಂತ್ ಎಸ್. ಹೆಗ್ಡೆ, ಕಾರ್ಯನಿರ್ವಹಣಾ ಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ, ದೇಗುಲದ ವ್ಯವಸ್ಥಾಪಕ ಗಣೇಶ ಹೊಳ್ಳ, ಅರ್ಚಕ ವೃಂದದವರು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
ಟ್ರಾವೆಲ್ ಲಿಂಕ್ ಫ್ರೆಂಡ್ಸ್ ವತಿಯಿಂದ ಅಮೃತೋತ್ಸವ ಸಂಗೀತ ರಸಮಂಜರಿ ಮತ್ತು ಅಮೃತ ಯುವಕ ಸಂಘ ಕದ್ರಿಕಟ್ಟು ಆಶ್ರಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಮನಸೆಳೆಯಿತು.