Kundapura ಕಣ್ತಪ್ಪಿನಿಂದ ಹಣ ಕಳೆದುಕೊಂಡು ದೂರು ನೀಡಿ ವಂಚನೆಗೀಡಾದ!
Team Udayavani, Mar 18, 2024, 12:33 AM IST
ಕುಂದಾಪುರ: ದೇವಲ್ಕುಂದ ಗ್ರಾಮದ ಪ್ರದೀಪ (33) ಅವರು ಕಣ್ತಪ್ಪಿನಿಂದ ಅನ್ಯಖಾತೆಗೆ ಗೂಗಲ್ ಪೇ ಮೂಲಕ ಹಣ ರವಾನಿಸಿ ಮರಳಿ ಪಡೆಯಲು ಇನ್ಯಾವುದೋ ನಂಬರ್ಗೆ ದೂರು ನೀಡಿದಾಗ ಆತನೂ ವಂಚಿಸಿದ ಕುರಿತು ದೂರು ದಾಖಲಾಗಿದೆ.
ಪ್ರದೀಪ ಅವರು ತನ್ನ ಖಾತೆಯಿಂದ ಅಕºರ್ ಅಲಿ ಅವರಿಗೆ ಗೂಗಲ್ ಪೇ ಮೂಲಕ 25,700 ರೂ. ಪಾವತಿ ಮಾಡಿದ್ದು, ಅದು ಅಕºರ್ ಅಲಿ ಅವರ ಸಾಲ ಖಾತೆಗೆ ಹೋದ ಕಾರಣ ಅದನ್ನು ಹಿಂಪಡೆಯಲು ಬಯಸಿದ್ದರು. ಬ್ಯಾಂಕ್ ರಜೆ ಇದ್ದುದರಿಂದ ಗೂಗಲ್ನಲ್ಲಿ ಸರ್ಚ್ ಮಾಡಿ ಗೂಗಲ್ ಪೇ ಕಸ್ಟಮರ್ ಕೇರ್ ನಂಬರ್ ಎಂದು ದೊರಕಿದ ನಂಬರಿಗೆ ಕರೆ ಮಾಡಿದ್ದರು.
ಸ್ಪಂದಿಸಿದ ಅಪರಿಚಿತ ವ್ಯಕ್ತಿ 24 ಗಂಟೆಯೊಳಗೆ ಹಣ ಕೊಡಿಸುವುದಾಗಿ ಹೇಳಿದ್ದು, ಮರುದಿನ ಅದೇ ನಂಬರಿನಿಂದ ಪ್ರದೀಪ್ ಅವರಿಗೆ ಕರೆ ಮಾಡಿ ಗೂಗಲ್ ಪೇ ತೆರೆದು ಅಮೌಂಟ್ ಕಾಲಂನಲ್ಲಿ ಮೊಬೈಲ್ ನಂಬ್ರದ ಮೊದಲ 5 ನಂಬರ್ ನಮೂದಿಸಲು ತಿಳಿಸಿದ್ದ. ಆಗ ಪ್ರದೀಪ ಅವರ ಬ್ಯಾಂಕ್ ಖಾತೆಯಿಂದ 76,195 ರೂ. ಹಣ ಒಮ್ಮೆಲೇ ಕಡಿತವಾಗಿ ಮೊಬೈಲ್ 30 ನಿಮಿಷ ಸಂಪೂರ್ಣ ಸ್ತಬ್ಧವಾಯಿತು. ಸ್ನೇಹಿತನ ಮೊಬೈಲ್ನಿಂದ ಅಪರಿಚಿತನ ಮೊಬೈಲ್ ಸಂಪರ್ಕಿಸಲು ಮಾಡಿದ ಪ್ರಯತ್ನ ವಿಫಲವಾಯಿತು. ಈ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
D.K,Udupi ಸಿಎನ್ಜಿ ಇಂಧನ ಕೊರತೆ: ಬಂಕ್ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು
Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ
Kundapura ಕಾರು ಡಿವೈಡರ್ ಏರಿ ಪಲ್ಟಿ; ಮೂವರಿಗೆ ಗಾಯ
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ