ನಡಂಬೂರು: ಬೆಳಗ್ಗೆ ಬಸ್‌ ಇದೆ; ಸಂಜೆ ಸಂಚರಿಸಲ್ಲ

ಕಾಡ ದಾರಿಯಲ್ಲಿ ನಿತ್ಯ ವಿದ್ಯಾರ್ಥಿಗಳಿಂದ ಐದಾರು ಕಿ.ಮೀ. ನಡಿಗೆ ; ಬಸ್‌ ಸಂಪರ್ಕ ಕಲ್ಪಿಸಲು ಬೇಡಿಕೆ

Team Udayavani, Sep 19, 2022, 11:55 AM IST

9

ಹಾಲಾಡಿ: ಅಮಾಸೆಬೈಲು ಗ್ರಾಮದ ನಡಂಬೂರು, ನರಸೀಪುರ, ಗುಂಡಾಣ ಭಾಗಕ್ಕೆ ಬೆಳಗ್ಗೆ ಬಸ್‌ ಇದೆ. ಆದರೆ ಸಂಜೆ ಸಮಯಕ್ಕೆ ಒಂದೇ ಒಂದು ಬಸ್‌ ಇಲ್ಲ. ಇದರಿಂದ ಬೆಳಗ್ಗೆ ಶಾಲಾ- ಕಾಲೇಜಿಗೆ ತೆರಳಿದ ವಿದ್ಯಾರ್ಥಿಗಳು ಮನೆ ಸೇರಬೇಕಾದರೆ ಐದಾರು ಕಿ.ಮೀ. ಕಾಡ ಹಾದಿಯಲ್ಲಿ ನಡೆದೇ ಸಾಗಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ.

ಅಮಾಸೆಬೈಲಿನಿಂದ ಐದಾರು ಕಿ.ಮೀ. ದೂರದ ನಡಂಬೂರು, ನರಸೀಪುರ, ಗುಂಡಾಣ ಭಾಗಕ್ಕೆ ಬಸ್‌ ಇಲ್ಲದೆ 25ರಿಂದ 30 ಮಕ್ಕಳು ನಿತ್ಯ ಸಂಜೆ ವೇಳೆಗೆ ನಡೆದುಕೊಂಡೇ ಹೋಗಬೇಕಾದ ಸ್ಥಿತಿಯಿದೆ.

ಬೆಳಗ್ಗೆ ಹೋದ ಬಸ್‌ ಮತ್ತೆ ಬರುವುದು ಮರುದಿನ

ಹೆಂಗವಳ್ಳಿಯಿಂದ ನಡಂಬೂರು ಮಾರ್ಗವಾಗಿ ಅಮಾಸೆಬೈಲು ಮೂಲಕ ಕುಂದಾಪುರಕ್ಕೆ ತೆರಳಲು ಬೆಳಗ್ಗಿನ ಅವಧಿಯಲ್ಲಿ ಒಂದು ಖಾಸಗಿ ಬಸ್‌ ಇದೆ. ಈ ಬಸ್‌ ನಡಂಬೂರು, ನರಸೀಪುರ ಪ್ರದೇಶಕ್ಕೆ ಬೆಳಗ್ಗೆ 8 ಗಂಟೆಯ ಸುಮಾರಿಗೆ ಬರುತ್ತದೆ. ಈ ಬಸ್‌ನಲ್ಲಿ ಈ ಭಾಗದ ಸುಮಾರು ಮಕ್ಕಳಿಗೆ ಶಾಲಾ – ಕಾಲೇಜಿಗೆ ತೆರಳಲು, ಅಮಾಸೆಬೈಲು ಪೇಟೆ, ಪಂಚಾಯತ್‌ಗೆ ತೆರಳಲು, ಕುಂದಾಪುರ ಕಡೆಗೆ ತೆರಳಲು ಸಾರ್ವಜನಿಕರಿಗೂ ಅನುಕೂಲವಾಗುತ್ತದೆ. ಆದರೆ ಇದೇ ಜನರಿಗೆ ವಾಪಾಸು ಬರಬೇಕಾದರೆ ಯಾವುದೇ ಬಸ್‌ ಸೌಕರ್ಯವಿಲ್ಲ. ಈ ಊರಿಗೆ ಮತ್ತೆ ಬಸ್‌ ಬರುವುದು ಮರುದಿನ ಬೆಳಗ್ಗೆ. ಇದರಿಂದ ಶಾಲಾ- ಕಾಲೇಜು ಮಕ್ಕಳು, ಕೆಲಸಕ್ಕೆ ತೆರಳಿದ ಜನರು ವಾಪಾಸು ನಡೆದುಕೊಂಡೇ ಬರುವಂತಾಗಿದೆ.

ಎಲ್ಲಿಗೆಲ್ಲ ಸಮಸ್ಯೆ

ನಡಂಬೂರು, ನರಸೀಪುರ, ಗುಂಡಾಣ, ನಿಲ್ಸಿಕಲ್‌, ಮಾವಿನಕಾಡು, ಉಳಿಕಾಡು ಹೀಗೆ ಸುತ್ತಮುತ್ತಲಿನ ಪರಿಸರದ ಅನೇಕ ಕಡೆಗಳ ಮಕ್ಕಳು ಹಾಲಾಡಿ, ಬಿದ್ಕಲ್‌ ಕಟ್ಟೆ, ಕೋಟೇಶ್ವರ, ಕುಂದಾಪುರ ಭಾಗದ ಶಿಕ್ಷಣ ಸಂಸ್ಥೆಗಳಿಗೆ ವ್ಯಾಸಂಗಕ್ಕೆ ಬರುತ್ತಾರೆ.

ಬಸ್‌ ಕಲ್ಪಿಸಲು ಆಗ್ರಹ: ಪ್ರತಿ ನಿತ್ಯ ಮಕ್ಕಳು ಮಾತ್ರವಲ್ಲದೆ ಗ್ರಾಮಸ್ಥರು ಸಹ ಕನಿಷ್ಠ ಗ್ರಾ.ಪಂ. ಕಚೇರಿ ಕೆಲಸಕ್ಕೆ ಬರಬೇಕಾದರೂ 5-6 ಕಿ.ಮೀ. ನಡೆದುಕೊಂಡು ಅಥವಾ ರಿಕ್ಷಾ ಇನ್ನಿತರ ವಾಹನ ಬಾಡಿಗೆ ಮಾಡಿಕೊಂಡು ಬರಬೇಕಾಗಿದೆ. ಗ್ರಾಮೀಣ ಭಾಗವಾದ ಇಲ್ಲಿಗೆ ಈ ಬೆಳಗ್ಗೆ ಇರುವಂತೆಯೇ ಸಂಜೆ ವೇಳೆಯೂ ಒಂದು ಬಸ್‌ ವ್ಯವಸ್ಥೆ ಮಾಡಿದರೆ ಬಹಳಷ್ಟು ಅನುಕೂಲವಾಗಲಿದೆ. – ಕಿರಣ್‌ ಶೆಟ್ಟಿ, ಕೊಟ್ಟಕ್ಕಿ, ಗ್ರಾ.ಪಂ. ಸದಸ್ಯರು

ಪರಿಶೀಲಿಸಲಾಗುವುದು: ಅಮಾಸೆಬೈಲು ಗ್ರಾಮದ ನಡಂಬೂರು ಭಾಗಕ್ಕೆ ಬಸ್‌ ಸೌಕರ್ಯ ಇಲ್ಲದಿರುವ ಬಗ್ಗೆ ಮಾಹಿತಿಯಿಲ್ಲ. ಸಾರ್ವಜನಿಕರಿಂದ ಮನವಿ ಬಂದಲ್ಲಿ ಪರಿಶೀಲಿಸಿ, ಸಂಬಂಧಪಟ್ಟವರಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು. – ರಾಜೇಶ್‌, ಕೆಎಸ್‌ಆರ್‌ಟಿಸಿ ಡಿಪೋ ಮ್ಯಾನೇಜರ್‌ ಕುಂದಾಪುರ

ಟಾಪ್ ನ್ಯೂಸ್

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

Uppunda ಡಿವೈಡರ್‌ಗೆ ಬೊಲೇರೊ ವಾಹನ ಢಿಕ್ಕಿ: ಓರ್ವ ಸಾವು; ಐವರಿಗೆ ಗಾಯ

Uppunda ಡಿವೈಡರ್‌ಗೆ ಬೊಲೇರೊ ವಾಹನ ಢಿಕ್ಕಿ: ಓರ್ವ ಸಾವು; ಐವರಿಗೆ ಗಾಯ

Anegudde Temple: ಭಕ್ತರ ಸಂಖ್ಯೆ ಹೆಚ್ಚಳ; ವಿಶೇಷ ಪಾನಕ ವಿತರಣೆ 

Anegudde Temple: ಭಕ್ತರ ಸಂಖ್ಯೆ ಹೆಚ್ಚಳ; ವಿಶೇಷ ಪಾನಕ ವಿತರಣೆ 

Thekkatte: ಕಾರು ಮರಕ್ಕೆ ಢಿಕ್ಕಿ; ಯುವತಿ ಸ್ಥಳದಲ್ಲೇ ಸಾವು, ನಾಲ್ವರಿಗೆ ಗಂಭೀರ ಗಾಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.