“ವಿದ್ಯುತ್ ಸೆಲ್ಗಳು ದೇಶೀಯವಾಗಿ ತಯಾರಾಗಲಿ’
ನೀತಿ ಆಯೋಗದ ಸದಸ್ಯ, ವಿಜ್ಞಾನಿ ವಿ.ಕೆ. ಸರಸ್ವತ್ ಪ್ರತಿಪಾದನೆ
Team Udayavani, May 10, 2022, 5:00 AM IST
ನವದೆಹಲಿ: “ದೇಶದಲ್ಲಿ ಬಳಕೆಯಾಗುತ್ತಿರುವ ವಿದ್ಯುತ್ ಚಾಲಿತ ವಾಹನಗಳಲ್ಲಿನ ಬ್ಯಾಟರಿಗಳಲ್ಲಿ ಬಳಸಲಾಗುವ ವಿದ್ಯುತ್ ಸೆಲ್ಗಳು ವಿದೇಶಗಳಲ್ಲಿ ತಯಾರಾಗುತ್ತಿರುವುದರಿಂದ ಭಾರತದ ಉಷ್ಣ ಹವಾಮಾನಕ್ಕೆ ಅವು ಹೊಂದಾಣಿಕೆಯಾಗುತ್ತಿಲ್ಲ.
ಹಾಗಾಗಿಯೇ, ಹಲವೆಡೆ ಇ-ಸ್ಕೂಟರ್ಗಳ ಬ್ಯಾಟರಿ ಸ್ಫೋಟದ ಪ್ರಕರಣಗಳು ಜರುಗಿವೆ ಎಂದು ನೀತಿ ಆಯೋಗದ ಸದಸ್ಯರೂ ಆಗಿರುವ ವಿಜ್ಞಾನಿ ವಿ.ಕೆ. ಸಾರಸ್ವತ್ ಹೇಳಿದ್ದಾರೆ.
ಅಲ್ಲದೆ, ಈ ಸಮಸ್ಯೆ ನೀಗಬೇಕೆಂದರೆ, ಭಾರತದ ಹವಾಮಾನಕ್ಕೆ ಒಗ್ಗುವಂಥ ವಿದ್ಯುತ್ ಸೆಲ್ಗಳು ನಮ್ಮಲ್ಲೇ ತಯಾರಾಗಬೇಕು. ಆಗ ಮಾತ್ರ ಇಂಥ ಸಮಸ್ಯೆಗಳಿಗೆ ನಿವಾರಣೆ ಕಂಡುಕೊಳ್ಳಲು ಸಾಧ್ಯ ಎಂದು ಅವರು ಸಲಹೆ ನೀಡಿದ್ದಾರೆ.
ಇತ್ತೀಚೆಗೆ, ದೇಶದ ನಾನಾ ಭಾಗಗಳಲ್ಲಿ ಇ-ಸ್ಕೂಟರ್ಗಳು, ಬ್ಯಾಟರಿಗಳ ಅಗ್ನಿ ಅವಘಡಗಳು ಸಂಭವಿಸಿ ಕೆಲವರು ಸಾವನ್ನಪ್ಪಿದ್ದರು. ಮತ್ತೂ ಕೆಲವರು ಗಂಭೀರವಾಗಿ ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ, ನಿತಿನ್ ಗಡ್ಕರಿ ಅವರು, ಈ ಅವಘಡಗಳ ತನಿಖೆ ನಡೆಸಲು ತಜ್ಞರ ಸಮಿತಿಯನ್ನು ನೇಮಿಸುವುದಾಗಿ ಹೇಳಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು