34ನೇ ನೆಕ್ಕಿಲಾಡಿ: ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಮೋರಿ
ಅನಾಹುತ ಸಂಭವಿಸುವ ಮುನ್ನ ಎಚ್ಚೆತ್ತುಕೊಳ್ಳಲು ಸ್ಥಳೀಯರ ಆಗ್ರಹ
Team Udayavani, Aug 6, 2021, 9:54 PM IST
ಉಪ್ಪಿನಂಗಡಿ: 34ನೇ ನೆಕ್ಕಿಲಾಡಿ ಗ್ರಾ.ಪಂ.ನ ಬೊಳಂತಿಲ ಹೊಸ ಕಾಲನಿಗೆ ಹೋಗುವ ರಸ್ತೆಗಡ್ಡಲಾಗಿ ಹಾಕಿರುವ ಮೋರಿಯು ಸಂಪೂರ್ಣ ಶಿಥಿಲಗೊಂಡು ಬಿರುಕು ಬಿಟ್ಟು ಅದರಲ್ಲಿ ರಂಧ್ರಗಳಾಗಿವೆ. ಇದರಿಂದಾಗಿ ಈ ಮೋರಿಯ ಮೇಲಿನ ಓಡಾಟವು ಅಪಾಯಕ್ಕೆ ಆಹ್ವಾನ ನೀಡುವಂತಿದೆ.
ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಪುತ್ತೂರಿಗೆ ಹೋಗುವ ರಾಜ್ಯ ಹೆದ್ದಾರಿಯಿಂದ ಅಡ್ಡಕ್ಕೆ ಬೊಳಂತಿಲ ಹೊಸ ಕಾಲನಿಗೆ ಸಂಪರ್ಕ ರಸ್ತೆಯಿದ್ದು, ಈ ರಸ್ತೆಯ ಆರಂಭದಲ್ಲೇ ಚರಂಡಿಗೆ ಮೋರಿಯನ್ನು ಅಳವಡಿಸಲಾಗಿದೆ. ಮೋರಿ ಹಾಕಿರುವ ಸ್ಥಳದಲ್ಲಿ ಮಣ್ಣಿನ ಕಚ್ಚಾ ರಸ್ತೆಯಿದೆ. ಹಲವು ವರ್ಷಗಳ ಹಿಂದಿನ ಮೋರಿ ಇದಾಗಿರುವುದರಿಂದ ಮೋರಿಯು ಇದೀಗ ಸಂಪೂರ್ಣ ಶಿಥಿಲಾವಸ್ಥೆಯನ್ನು ತಲುಪಿದ್ದು, ಮೋರಿಯ ಮೇಲ್ಭಾಗದಲ್ಲಿ ಎರಡು ಕಡೆ ದೊಡ್ಡ ದೊಡ್ಡ ರಂಧ್ರಗಳು ನಿರ್ಮಾಣವಾಗಿವೆ. ಈ ರಂಧ್ರಗಳಲ್ಲಿ ಒಂದು ರಸ್ತೆಯ ಮಧ್ಯಭಾಗದಲ್ಲಿದ್ದರೆ, ಇನ್ನೊಂದು ರಸ್ತೆಯ ಬದಿಯಲ್ಲಿದೆ. ಇನ್ನೊಂದೆಡೆ ಇದು ಮಣ್ಣಿನ ರಸ್ತೆಯಾಗಿರುವುದರಿಂದ ಈ ಪ್ರದೇಶವು ಮಳೆಗಾಲದಲ್ಲಿ ಸಂಪೂರ್ಣ ಕೆಸರಿನಿಂದ ಕೂಡಿರುತ್ತದೆ.
ಅಪಾಯಕ್ಕೆ ಆಹ್ವಾನ
ಈ ಮೋರಿಯು ಎರಡು ಕಡೆ ಬಾಯ್ಬಿಟ್ಟು ಅದರೊಳಗಿನ ಕಬ್ಬಿಣದ ಸಣ್ಣ ಸರಳುಗಳು ಎದ್ದು ಬಂದಿವೆ. ಈ ಕಾಲನಿಯಲ್ಲಿ ಹಲವು ಮನೆಗಳಿದ್ದು, ಮಕ್ಕಳು ಸೇರಿದಂತೆ ಪಾದಾಚಾರಿಗಳ ನಿತ್ಯ ಓಡಾಡುತ್ತಾರೆ. ಎಲ್ಲಿಯಾದರೂ ತಪ್ಪಿ ಇದರೊಳಗೆ ಬಿದ್ದರೆ ಕಾಲು ಮುರಿತಕ್ಕೊಳಗಾಗುವುದರಲ್ಲಿ ಸಂಶಯವಿಲ್ಲ. ಸಣ್ಣ ಟೈರ್ನ ವಾಹನಗಳು ಈ ರಂಧ್ರದೊಳಗೆ ಸಿಲುಕಿಕೊಳ್ಳುವ ಅಪಾಯವಿದೆ.ದೊಡ್ಡ ವಾಹನಗಳನ್ನು ಇದರ ಮೇಲಿಂದ ಚಲಾಯಿಸಿಕೊಂಡು ಹೋದರೆ ಮೋರಿಯೇ ಕುಸಿದು ಬೀಳುವ ಸಾಧ್ಯತೆ ಇದೆ. ಆದ್ದರಿಂದ ಗ್ರಾ.ಪಂ. ಶೀಘ್ರ ಎಚ್ಚೆತ್ತುಕೊಂಡು ಇಲ್ಲಿಗೆ ಬದಲಿ ವ್ಯವಸ್ಥೆ ಕಲ್ಪಿಸಬೇಕೆನ್ನುವುದು ಸಾರ್ವಜನಿಕರ ಆಗ್ರಹ.
ಹೊಸ ಮೋರಿ ಅಗತ್ಯ
ಇಲ್ಲಿಯ ಮೋರಿಯು ಬಿರುಕು ಬಿಟ್ಟು ಅದರಲ್ಲಿ ಎರಡು ಕಡೆ ರಂಧ್ರಗಳಾಗಿದೆ. ಆಕಸ್ಮಾತ್ ಇಲ್ಲಿ ಸಂಚರಿಸುವವರು ಇದರೊಳಗೆ ಕಾಲು ಹಾಕಿದರೆ ಅನಾಹುತ ಸಂಭವಿಸುವ ಸಾಧ್ಯತೆ ಇದೆ. ಆದ್ದರಿಂದ ಕೂಡಲೇ ಗ್ರಾ.ಪಂ. ಈ ಮೋರಿಯನ್ನು ತೆಗೆದು ಮತ್ತೂಂದು ಮೋರಿ ಅಳವಡಿಸಬೇಕು.
– ಖಲಂದರ್ ಶಾಫಿ,
ಕಾರ್ಯದರ್ಶಿ, ನಮ್ಮೂರು- ನೆಕ್ಕಿಲಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು
Road Mishap;ಅರಂತೋಡು: ಕಾರು – ಬೈಕ್ ಢಿಕ್ಕಿ: ಸವಾರ ಸಾವು
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು