ಭಾರತದ್ದೇ ಒಂದು ಝೂಮ್‌ ತಯಾರಿಸಿ!

ಕೇಂದ್ರದಿಂದ 10 ಭಾರತೀಯ ಸಾಫ್ಟ್ ವೇರ್ ‌ ಕಂಪನಿಗಳಿಗೆ ಸವಾಲು, ಜೊತೆಗೆ ಆರ್ಥಿಕ ನೆರವು

Team Udayavani, May 26, 2020, 11:50 AM IST

ಭಾರತದ್ದೇ ಒಂದು ಝೂಮ್‌ ತಯಾರಿಸಿ!

ಕೋವಿಡ್ ಕಾಲಿಟ್ಟಿದ್ದೇ ಕಾಲಿಟ್ಟಿದ್ದು ಜಗತ್ತಿನಲ್ಲಿ ಚರ್ಚೆಯ ಕೇಂದ್ರಗಳೇ ಬದಲಾಗಿವೆ. ದೈಹಿಕ ಅಂತರ ಅನಿವಾರ್ಯವಾಗಿರುವುದರಿಂದ ಜನರು ತಂತ್ರಜ್ಞಾನದ ಮೊರೆ ಹೋಗುತ್ತಿದ್ದಾರೆ. ಇದರ ಪರಿಣಾಮವಾಗಿ ಝೂಮ್‌ ಆ್ಯಪ್‌ ವಿಪರೀತ ಚಲಾವಣೆಗೆ ಬಂದಿದೆ. ಆದರೆ ಭಾರತ ಸರ್ಕಾರ ಆತ್ಮನಿರ್ಭರತೆಯ ಬೆನ್ನತ್ತಿರುವುದರಿಂದ, ಝೂಮ್‌ಗೆ ಸೆಡ್ಡು ಹೊಡೆಯುವ ಆ್ಯಪ್‌ ತಯಾರಿಗೆ ಪ್ರೇರಣೆ ನೀಡಿದೆ. ಈ ಸೂಚನೆಯ ಹಲವು ಆಯಾಮಗಳು ಇಲ್ಲಿವೆ.

ಝೂಮ್‌ ಯಾಕೆ ಬೇಕು?
ವಾಸ್ತವವಾಗಿ ಚೀನಾ ಮೂಲದ ಎರಿಕ್‌ ಯುವಾನ್‌ 1997ರಲ್ಲಿಯೇ ಅಮೆರಿಕಕ್ಕೆ ಹೋದರು. ಅಲ್ಲಿಯೇ 2011ರಲ್ಲಿ ಝೂಮ್‌ ಕಮ್ಯುನಿಕೇಷನ್ಸ್‌ ಆರಂಭಿಸಿದರು. 2013ರಲ್ಲಿ ವಿಡಿಯೊ ಸಂವಾದ ಆ್ಯಪ್‌ ಬಿಡುಗಡೆ ಮಾಡಿದರು. ಆರಂಭದಲ್ಲಿ ಇದನ್ನು ನಿರ್ಲಕ್ಷಿಸಿದವರೇ ಜಾಸ್ತಿ. ನಂತರ ಅಸಾಮಾನ್ಯ ವೇಗದಲ್ಲಿ ಬೆಳೆದ ಇದು, ಈಗ ದಿನವೊಂದಕ್ಕೆ 30 ಕೋಟಿ ಬಳಕೆದಾರರನ್ನು ಹೊಂದಿದೆ. ಕೊರೊನಾ ಬಂದ ಮೇಲೆ ಸಭೆಗಳನ್ನು ಆನ್‌ಲೈನ್‌ನಲ್ಲೇ ನಡೆಸಬೇಕಾಗಿರುವುದರಿಂದ ಝೂಮ್‌ಗೆ ಇನ್ನಷ್ಟು ಜನಪ್ರಿಯತೆ ಬಂದಿದೆ. ಈ ಆ್ಯಪ್‌ ಬಳಸಿ 40 ನಿಮಿಷ, 100 ಜನರೊಂದಿಗೆ ಉಚಿತವಾಗಿ ಸಭೆ ನಡೆಸಬಹುದು.

ಗೂಗಲ್‌ನಿಂದ ಮೀಟ್‌ ಉಚಿತ
ಝೂಮ್‌ ಒಂದೇ ಬಾರಿಗೆ ಜನಪ್ರಿಯತೆ ಹೆಚ್ಚಿಸಿಕೊಂಡಿದ್ದನ್ನು ನೋಡಿ ಜಗತ್ತಿನ ಇತರೆ ಸಾಫ್ಟ್ವೇರ್‌ ದೈತ್ಯರಾದ ಗೂಗಲ್‌, ಫೇಸ್‌ಬುಕ್‌ಗಳು ಬೆಚ್ಚಿಬಿದ್ದಿವೆ. ಈ ಪೈಕಿ ಗೂಗಲ್‌ ತನ್ನ ಮೀಟ್‌ ಆ್ಯಪನ್ನು ಉಚಿತವಾಗಿಸಿದೆ. ಅದಕ್ಕೂ ಮುನ್ನ ಮೀಟ್‌ ಅನ್ನು ಹಣ ಕೊಟ್ಟು ಬಳಸಬೇಕಾಗಿತ್ತು. ಇದೇ ದಾರಿಯಲ್ಲಿ ಫೇಸ್‌ಬುಕ್‌ ಕೂಡ ಹೊರಟಿದೆ.

ಭಾರತದ್ದೇ ಆ್ಯಪ್‌ ಸೃಷ್ಟಿಸಲು ಕೇಂದ್ರ ಕರೆ
ಝೂಮ್‌ಗೆ ವಿಪರೀತ ಬೇಡಿಕೆ ಬಂದಿದ್ದರೂ, ಅದರಲ್ಲಿ ಭದ್ರತಾಲೋಪವಿದೆ. ಜನರ ಖಾಸಗಿ ಮಾಹಿತಿಗಳು ಬಯಲಾಗುತ್ತವೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಜೊತೆಗೆ ಭಾರತದಲ್ಲೇ ಝೂಮ್‌ ಮಾದರಿಯ ಆ್ಯಪ್‌ ಸೃಷ್ಟಿಸಲು ಕರೆ ನೀಡಿದೆ. ಪರಿಣಾಮ 10 ಕಂಪನಿಗಳ ಅಂತಿಮ ಪಟ್ಟಿ ತಯಾರಿಸಲಾಗಿದೆ. ಎಚ್‌ಸಿಎಲ್‌ ಟೆಕ್ನಾಲಜೀಸ್‌, ಜೊಹೊ ಕಾರ್ಪ್‌, ಪೀಪಲ್‌ಲಿಂಕ್‌, ಅರಿಯಾ ಟೆಲಿಕಾಮ್‌, ಸೈಬರ್‌ಹಾರಿಜನ್‌ ಕಾರ್ಪ್‌, ಇನ್‌ಸ್ಟ್ರೈವ್‌ ಸಾಫ್ಟ್ಲ್ಯಾಬ್ಸ್, ಡಾಟಾ ಎಂಜಿನಿಯರ್ಸ್‌ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದ ಪ್ರಮುಖ ಕಂಪನಿಗಳು.

ಸರ್ಕಾರದಿಂದ ಆರ್ಥಿಕ ನೆರವು
ಮೊದಲ ಸುತ್ತಲ್ಲೇ ಆಯ್ಕೆಯಾದ ಎಲ್ಲ ಕಂಪನಿಗಳಿಗೂ ತಲಾ 5 ಲಕ್ಷ ರೂ. ನೀಡಲಾಗುತ್ತದೆ. ಎರಡನೇ ಸುತ್ತಿನಲ್ಲಿ ಮೂರು ಅಂತಿಮ ಆ್ಯಪ್‌ಗ್ಳನ್ನು ಆರಿಸಲಾಗುತ್ತದೆ. ಅವಕ್ಕೆ ತಲಾ 20 ಲಕ್ಷ ರೂ. ನೀಡಲಾಗುತ್ತದೆ. ಅಂತಿಮವಾಗಿ ಆಯ್ಕೆಯಾದ ಒಂದು ಕಂಪನಿಗೆ ತಮ್ಮ ಆ್ಯಪನ್ನು ಕೇಂದ್ರ ಹಾಗೂ ರಾಜ್ಯ
ಸರ್ಕಾರಿ ಕಂಪನಿಗಳಲ್ಲಿ ಅಳವಡಿಸಲು ಅನುಮತಿ ನೀಡಲಾಗುತ್ತದೆ. ಜೊತೆಗೆ ಒಂದು ಕೋಟಿ ರೂ.ಗಳನ್ನು 4 ವರ್ಷಗಳ ಮಟ್ಟಿಗೆ ನೀಡಲಾಗುತ್ತದೆ. 2ನೇ ವರ್ಷದಿಂದ ಮತ್ತೆ ತಲಾ 10 ಲಕ್ಷ ರೂ. ನೀಡಲಾಗುತ್ತದೆ.

ದೇಶದ್ದೇ ಯಾಕೆ ಬೇಕು?
ಡಾಟಾ ಎಂಜಿನಿಯರ್ಸ್‌ ಮುಖ್ಯಸ್ಥ ಅಜಯ್‌ ಪ್ರಕಾರ ದೇಶದ ಸಾಫ್ಟ್ವೇರ್‌ ಹೊಂದುವುದರಿಂದ ಹಲವು ಅನುಕೂಲಗಳಿವೆ. ಮುಖ್ಯವಾಗಿ, ಈ ಆ್ಯಪನ್ನು ಎಲ್ಲ ಭಾರತೀಯ ಭಾಷೆಗಳಿಗೆ ಪೂರಕವಾಗಿ ಅಭಿವೃದ್ಧಿಪಡಿಸಬಹುದು. ಅಂದರೆ ಸಾಫ್ಟ್ವೇರ್‌ಗಳಲ್ಲಿ ಭಾರತೀಯ ಲಿಪಿಗಳಿರಲು ಸಾಧ್ಯ. ಡೊಮೈನ್‌ ನಿಯಂತ್ರಣ ಭಾರತದಲ್ಲೇ ಇರುತ್ತದೆ. ವಿಡಿಯೊವನ್ನು ಕಾನೂನು ರಕ್ಷಣೆ ಕಾರಣದಿಂದ ಮುದ್ರಿಸಿಕೊಳ್ಳಬಹುದು. ಅದರ ಭದ್ರತಾ ಸಂಕೇತಗಳನ್ನೂ ನಮ್ಮಲ್ಲೇ ಇಟ್ಟುಕೊಳ್ಳಬಹುದು. ಆದರೆ ವಿದೇಶಿ ಆ್ಯಪ್‌ಗ್ಳಲ್ಲಿ ಈ ಸೌಲಭ್ಯಗಳು ಸಾಧ್ಯವಿಲ್ಲ.

ಟಾಪ್ ನ್ಯೂಸ್

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ, ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

1-wqeqeqwewq

HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ

9-upi

Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ

Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.