Mangaluru: ಉತ್ತರ ದಕ್ಕೆ ಫೆರಿ ಕಚೇರಿ ಬಳಿ ಬೈಕ್ ಕಳವು
Team Udayavani, Sep 5, 2023, 12:22 AM IST
ಮಂಗಳೂರು: ಉತ್ತರ ದಕ್ಕೆಯ ಫೆರಿ ಕಚೇರಿ ಬಳಿ ನಿಲ್ಲಿಸಿಟ್ಟ ಬೈಕ್ ಕಳವಾಗಿರುವ ಬಗ್ಗೆ ಹಮೀದ್ ನಝೀರ್ ಅಹಮ್ಮದ್ ಬಂದರು ಠಾಣಾ ಪೊಲೀಸರಿಗೆ ದೂರು ನೀಡಿದ್ದಾರೆ.
ಆ. 9ರ ರಾತ್ರಿ 9.30ಕ್ಕೆ ಬೈಕ್ ನಿಲ್ಲಿಸಿ ಬೋಟ್ ಮೂಲಕ ಬೆಂಗ್ರೆ ಮನೆಗೆ ಹೋಗಿದ್ದು, ಮರುದಿನ ಬೆಳಗ್ಗೆ 10 ಗಂಟೆಗೆ ಬಂದು ನೋಡಿದಾಗ ಅಂದಾಜು 40,000 ರೂ. ಮೌಲ್ಯದ ಬೈಕ್ ಕಳವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.