ಸಾಧಕರ ವ್ಯಕ್ತಿತ್ವ ಸಮಾಜಕ್ಕೆ ಮಾದರಿ: ಟಿ.ವಿ. ಮೋಹನ್‌ದಾಸ್‌ ಪೈ

ವಿಶ್ವ ಕೊಂಕಣಿ ಕೇಂದ್ರ: ಸೆಂಟ್ರಲ್‌ ಟವರ್‌ಗೆ ಶಿಲಾನ್ಯಾಸ

Team Udayavani, Feb 9, 2022, 6:00 AM IST

ಸಾಧಕರ ವ್ಯಕ್ತಿತ್ವ ಸಮಾಜಕ್ಕೆ ಮಾದರಿ: ಟಿ.ವಿ. ಮೋಹನ್‌ದಾಸ್‌ ಪೈ

ಮಂಗಳೂರು: ಸಾಧನೆ ಮತ್ತುಸಮಾಜಮುಖಿ ಸ್ಪಂದನೆಯಿಂದ ಜೀವನ ಸಾರ್ಥಕ್ಯ ಪಡೆಯುತ್ತದೆ. ಯಶಸ್ವಿ ಉದ್ಯಮಿ, ಶಿಕ್ಷಣ ಪ್ರೇಮಿ, ಮಾನವತಾವಾದಿ ಹಾಗೂ ಅಸಹಾಯಕರ ಸಂಕಷ್ಟಗಳಿಗೆ ಸದಾ ಸ್ಪಂದಿಸುತ್ತಾ ಬಂದಿರುವ ಅನನ್ಯ ಸಾಧಕ ಪಿ. ದಯಾನಂದ ಪೈ ಇದಕ್ಕೆ ಶ್ರೇಷ್ಠ ನಿದರ್ಶನ ಎಂದು ಮಣಿಪಾಲ್‌ ಗ್ಲೋಬಲ್‌ ಎಜುಕೇಶನ್‌ ಚೇರ್‌ಮನ್‌ ಟಿ.ವಿ. ಮೋಹನದಾಸ್‌ ಪೈ ಹೇಳಿದರು.

ವಿಶ್ವ ಕೊಂಕಣಿ ಕೇಂದ್ರದಲ್ಲಿ ಮಂಗಳವಾರ ಜರಗಿದ ಕೊಂಕಣಿ ಭಾಷೆ ಮತ್ತು ಸಂಸ್ಕೃತಿ ಪ್ರತಿಷ್ಠಾನದ ಚೇರ್‌ಮನ್‌, ಉದ್ಯಮಿ, ದಾನಿ ಪಿ. ದಯಾನಂದ ಪೈ ಅವರ 77ನೇ ಹುಟ್ಟುಹಬ್ಬ ಹಾಗೂ ವಿಶ್ವಕೊಂಕಣಿ ಕೇಂದ್ರದಲ್ಲಿ ಸೆಂಟ್ರಲ್‌ ಟವರ್‌ಗೆ ಶಿಲಾನ್ಯಾಸ ಸಮಾರಂಭದಲ್ಲಿ ಅವರು ಅಭಿನಂದನ ಭಾಷಣ ಮಾಡಿದರು. ವಿಶ್ವ ಕೊಂಕಣಿ ಕೇಂದ್ರಕ್ಕೆ ಪೈಗಳ ಕೊಡುಗೆ ಮಹತ್ತರವಾದುದು ಎಂದರು.

ವಿಶ್ವ ಕೊಂಕಣಿ ಕೇಂದ್ರದ ಕೀರ್ತಿ ಮಂದಿರದಲ್ಲಿ ಡಾ| ಪಿ. ದಯಾನಂದ ಪೈ ಅವರ ಭಾವಚಿತ್ರ ಅನಾವರಣ ಗೊಳಿಸಿದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ| ಪಿ.ಎಸ್‌. ಯಡಪಡಿತ್ತಾಯ ಮಾತನಾಡಿ, ಎಲ್ಲವನ್ನೂ ಸಕಾರಾತ್ಮಕವಾಗಿ ಸ್ವೀಕರಿ ಸುವ, ಸಹೃದಯಿ ಡಾ| ಪಿ. ದಯಾನಂದ ಪೈ ಎಲ್ಲರಿಗೂ ಪ್ರೇರಣೆ ಯಾಗಿ ದ್ದಾರೆ ಎಂದರು.

ಪೈಗಳ ಕೊಡುಗೆ ಮಹತ್ತರ
ವಿಶ್ವ ಕೊಂಕಣಿ ಕೇಂದ್ರ ವಿದ್ಯಾರ್ಥಿ ನಿಧಿಯ ಸಂಚಾಲಕರಾದ ಪ್ರದೀಪ್‌ ಜಿ. ಪೈ ಮಾತನಾಡಿ, ವಿಶ್ವ ಕೊಂಕಣಿ ಕೇಂದ್ರ ಸಾಕಾರಗೊಳ್ಳುವಲ್ಲಿ ದಯಾ ನಂದ ಪೈಗಳ ಕೊಡುಗೆ ಮಹತ್ತರ ಎಂದರು.

ಸಾರ್ಥಕ್ಯದ ಬದುಕು
ನಮ್ಮದಾಗಬೇಕು
ಸಮಾಜದಲ್ಲಿ ಸಂಕಷ್ಟದಲ್ಲಿರುವ, ಅಸಹಾಯಕರಿಗೆ ಸ್ಪಂದಿಸಿ ಅವರ ಕಣ್ಣೀರು ಒರೆಸಿದಾಗ ಅವರ‌ ಸಂಭ್ರಮ ಕ್ಷಣಗಳಲ್ಲಿ ನಮ್ಮ ಬದುಕಿನ ಸಾರ್ಥಕತೆ ಆಡಗಿದೆ ಎಂದು ಸಮ್ಮಾನ ಸ್ವೀಕರಿಸಿದ ಡಾ| ಪಿ. ದಯಾನಂದ ಪೈ ಹೇಳಿದರು. ವಿಶ್ವಕೊಂಕಣಿ ಕೇಂದ್ರದ ಸಮಾಜ ಮುಖೀ ಕಾರ್ಯಗಳಿಗೆ ಅವ ರು 1 ಕೋ.ರೂ. ನೆರವು ಘೋಷಿಸಿದರು.

ಸಮ್ಮಾನ
ಡಾ| ಪಿ. ದಯಾನಂದ ಪೈ ಹಾಗೂ ಮೋಹಿನಿ ಡಿ. ಪೈ ಅವರನ್ನು ಶಾಲು ಹೊದೆಸಿ, ಹಾರಾರ್ಪಣೆಗೈದು, ಸ್ಮರಣಿಕೆ
ನೀಡಿ ಡಾ| ಪಿ.ಎಸ್‌. ಯಡಪಡಿ ತ್ತಾಯ, ವಿಶ್ವಕೊಂಕಣಿ ಕೇಂದ್ರ ಅಧ್ಯಕ್ಷ ನಂದಗೋಪಾಲ ಶೆಣೈ, ಉಪಾಧ್ಯಕ್ಷರಾದ ಗಿಲ್ಬರ್ಟ್‌ ಡಿ’ಸೋಜಾ, ಕುಡಿ³ ಜಗದೀಶ ಶೆಣೈ ಹಾಗೂ ಮೆಲ್ವಿನ್‌ ರೊಡ್ರಿಗಸ್‌, ಡಾ| ಕೆ. ಮೋಹನ ಪೈ, ಬಿ.ಆರ್‌. ಭಟ್‌, ಶಕುಂತಳಾ ಆರ್‌. ಕಿಣಿ ಸಮ್ಮಾನಿಸಿದರು. ಸಂಸದ ನಳಿನ್‌ ಕುಮಾರ್‌ ಕಟೀಲು, ಕ್ಷಮತಾ ಯು ಗೆಟ್‌ಇನ್‌ ಮುಖ್ಯಸœ ಕೆ. ಉಲ್ಲಾಸ್‌ ಕಾಮತ್‌ ಅವರು ವರ್ಚುವಲ್‌ ಮೂಲಕ ಶುಭ ಹಾರೈಸಿದರು. ಕೇಂದ್ರದ ಕಾರ್ಯದರ್ಶಿ ಗಿರಿಧರ್‌ ಕಾಮತ್‌ ಅಭಿನಂದನಾ ನಿರ್ಣಯ ವಾಚಿಸಿದರು.ವಿಶ್ವ ಕೊಂಕಣಿ ಸೋಶಿಯಲ್‌ ಸಪೋರ್ಟ್‌ ಪೋರ್ಟಲ್‌ ಅನ್ನು ಪಿ. ಸತೀಶ್‌ ಪೈ ಬಿಡುಗಡೆಗೊಳಿಸಿದರು.

ಸತೀಶ್‌ ಪೈ ಹಾಗೂ ಪಿ. ಸಬಿತಾ ಎಸ್‌. ಪೈ ಅವರನ್ನು ಸಮ್ಮಾನಿಸಲಾಯಿತು. ಪಿ. ರವೀಂದ್ರ ಪೈ ಹಾಗೂ ಪಿ. ಅಶ್ವಿ‌ನಿ ಪೈ ಉಪಸ್ಥಿತರಿದ್ದರು. ಸಮಾರಂಭ ಆರಂಭಕ್ಕೆ ಮೊದಲು ವಿಶ್ವ ಕೊಂಕಣಿ ಕೇಂದ್ರದಲ್ಲಿ ಬಸ್ತಿ ವಾಮನ ಶೆಣೈ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಲಾಯಿತು.ಕೇಂದ್ರದ ಅಧ್ಯಕ್ಷ ನಂದಗೋಪಾಲ ಶೆಣೈ ಸ್ವಾಗತಿಸಿ, ಗುರುದತ್ತ ಬಂಟ್ವಾಳ ವಂದಿಸಿದರು.

ಬಸ್ತಿ ಪುತ್ಥಳಿ ಸ್ಥಾಪನೆಗೆ ಮನವಿ
ನಾನು ಎಂದೂ ಹುಟ್ಟು ಹಬ್ಬ ಆಚರಿಸಿದವನಲ್ಲ. ಆದರೆ ನನ್ನ 77ನೇ ಹುಟ್ಟುಹಬ್ಬದ ಸಮಯದಲ್ಲಿ ನನ್ನ ಪ್ರತಿಜ್ಞೆಗೆ ಭಂಗವಾಗಿದೆ ಎಂದು ಡಾ| ಪಿ. ದಯಾನಂದ ಪೈ ಹೇಳಿದರು. ವಿಶ್ವಕೊಂಕಣಿ ಕೇಂದ್ರದ ಪ್ರಮುಖ ರೂವಾರಿ, ಕೊಂಕಣಿ ಭಾಷೆ,ಸಾಹಿತ್ಯ, ಸಂಸ್ಕೃತಿಗಾಗಿ ಶ್ರಮಿಸಿದ ಬಸ್ತಿ ವಾಮನ ಶೆಣೈ ಅವರ ಅಳೆದೆತ್ತರದ ಪುತ್ಥಳಿಯನ್ನು ಸ್ಥಾಪಿಸುವಂತೆ ಸಲಹೆ ಮಾಡಿದರು.

ಪ್ರಶಸ್ತಿ ಘೋಷಣೆ
ದಯಾನಂದ ಪೈ ಅವರ 77ನೇ ಹುಟ್ಟುಹಬ್ಬದ ಸಂದರ್ಭದ ಪ್ರಯುಕ್ತ ಪ್ರತೀವರ್ಷ ಡಾ| ಪಿ. ದಯಾನಂದ ಪೈ ವಿಶ್ವಕೊಂಕಣಿ ಸಾಹಿತ್ಯ ಅನುವಾದ ಪ್ರಶಸ್ತಿ ಹಾಗೂ ಡಾ| ಪಿ. ದಯಾನಂದ ಪೈ ರಂಗಶ್ರೇಷ್ಠ ಪ್ರಶಸ್ತಿ ನೀಡಲಾಗುವುದು ಹಾಗೂ ಪ್ರಶಸ್ತಿ ತಲಾ 1 ಲಕ್ಷ ರೂ. ಮೊತ್ತವನ್ನು ಹೊಂದಿದೆ ಎಂದು ನಂದಗೋಪಾಲ ಶೆಣೈ ಘೋಷಿಸಿದರು.

ಟಾಪ್ ನ್ಯೂಸ್

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

5-vitla

Vitla Palace: ಶತಮಾನಗಳ ಇತಿಹಾಸದ ವಿಟ್ಲ ಅರಮನೆ

4

ವಿಚ್ಛೇದನ ನೀಡದಿದ್ದರೆ ತಲೆಯನ್ನು ಕಡಿದು ಕುಕ್ಕರ್‌ನಲ್ಲಿ ಬೇಯಿಸುವೆ ಎಂದ ಪತಿ ವಿರುದ್ಧ FIR

Bangalore: ಕೇಸರಿ ಶರ್ಟ್‌ ಧರಿಸಿದ್ದಕ್ಕೆ ಯುವಕನಿಗೆ ಹಲ್ಲೆ; ಆರೋಪ

Bangalore: ಕೇಸರಿ ಶರ್ಟ್‌ ಧರಿಸಿದ್ದಕ್ಕೆ ಯುವಕನಿಗೆ ಹಲ್ಲೆ; ಆರೋಪ

4-uv-fusion

UV Fusion: ಬಿರು ಬೇಸಿಗೆಯ ಸ್ವಾಭಾವಿಕ ಚಪ್ಪರ ಈ ಹೊಂಗೆ ಮರ

Voting: ರಾಜಧಾನಿಯಲ್ಲಿ ಶಾಂತಿಯುತ ಮತದಾನ; ಬಿ.ದಯಾನಂದ್‌

Voting: ರಾಜಧಾನಿಯಲ್ಲಿ ಶಾಂತಿಯುತ ಮತದಾನ; ಬಿ.ದಯಾನಂದ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.