ಕಾರವಾರ : ಸ್ವರ್ಣ ವಿಜಯ ನಿಮಿತ್ತ 750 ಕಿ.ಮೀ ಮೋಟಾರ್ ಸೈಕಲ್ ಯಾತ್ರೆ ಯಶಸ್ವಿ
Team Udayavani, Dec 21, 2021, 8:50 PM IST
ಕಾರವಾರ: ಕಾರವಾರ ಐ ಎನ್ ಎಸ್ ಕದಂಬ ನೇವಲ್ ಶಿಪ್ ರಿಪೇರಿ ಯಾರ್ಡ್ ನಲ್ಲಿ ಡಿ. 17 ರಿಂದ ಡಿ. 21 ರವರೆಗೆ ವಿಜಯ್ ವರ್ಷ ಸ್ಮರಣಾರ್ಥ ಮೋಟಾರ್ ಸೈಕಲ್ ದಂಡಯಾತ್ರೆಯನ್ನು ಆಯೋಜಿಸಿತ್ತು. ಕಾರವಾರ ನೌಕಾನೆಲೆಯ ಒಟ್ಟು 16 ಸಿಬ್ಬಂದಿ ಬೆಳಗಾವಿ, ಬಿಜಾಪುರ ಮತ್ತು ಹುಬ್ಬಳ್ಳಿಯಾದ್ಯಂತ 750 ಕಿ.ಮೀ ದೂರವನ್ನು ಕ್ರಮಿಸುವ ಯಾತ್ರೆಯನ್ನು ಯಶಸ್ವಿಯಾಗಿ ಪೂರೈಸಿತು.
ಸಂಬಂಧಿಸಿದ ಚಟುವಟಿಕೆಗಳ ಭಾಗವಾಗಿ, ರೈಡರ್ಸ್ ರ್ಯಾಲಿಯು 1971 ರ ಯುದ್ಧದಲ್ಲಿ ಭಾರತೀಯ ಸಶಸ್ತ್ರ ಪಡೆಗಳು ನಿರ್ವಹಿಸಿದ ಮಹತ್ವದ ಬಗ್ಗೆ ಸ್ಥಳೀಯ ಜನರಲ್ಲಿ ಜಾಗೃತಿ ಮೂಡಿಸಿತು. ತಂಡವು ರಾಷ್ಟ್ರೀಯ ಸೈನಿಕ ಶಾಲೆ ಬೆಳಗಾವಿ, ಸೈನಿಕ ಶಾಲೆ ಬಿಜಾಪುರ ಮತ್ತು ಹುಬ್ಬಳ್ಳಿಯ ಎನ್ಸಿಸಿ ಘಟಕಕ್ಕೆ ಭೇಟಿ ನೀಡಿತು. ತಂಡವು ಶಾಲಾ ಮಕ್ಕಳು ಮತ್ತು ಎನ್ಸಿಸಿ ಕೆಡೆಟ್ಗಳೊಂದಿಗೆ ಸಂವಾದ ನಡೆಸಿತು ಮತ್ತು ಸಶಸ್ತ್ರ ಪಡೆಗಳ ನಿವೃತ್ತ ಯೋಧರಿಗೆ ಗೌರವ ಸಲ್ಲಿಸಿತು. ಈ ಮೋಟಾರ ಬೈಕ್ ಯಾತ್ರೆಯು ಭಾಗವಹಿಸಿದ ಸಿಬ್ಬಂದಿಗಳಲ್ಲಿ ಸಾಹಸ ಮತ್ತು ಎಸ್ಪ್ರಿಟ್-ಡಿ-ಕಾರ್ಪ್ಸ್ನ ಮನೋಭಾವವನ್ನು ಹುಟ್ಟುಹಾಕುವ ಗುರಿಯನ್ನು ಹೊಂದಿತ್ತು ಎಂದು ಕಾರವಾರ ನೌಕಾನೆಲೆ ಜನಸಂಪರ್ಕಾಧಿಕಾರಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ
Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ
ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್
Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ
MUST WATCH
ಹೊಸ ಸೇರ್ಪಡೆ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ