ಪಿವಿಎನ್ ಸ್ಮರಣಾರ್ಥ ಅಂಚೆಚೀಟಿ
Team Udayavani, Jun 30, 2020, 6:35 AM IST
ಹೊಸದಿಲ್ಲಿ: ಮಾಜಿ ಪ್ರಧಾನಿ ದಿವಂಗತ ಪಿ.ವಿ. ನರಸಿಂಹ ರಾವ್ ಸ್ಮರಣಾರ್ಥ ಅಂಚೆಚೀಟಿ ಬಿಡುಗಡೆ ಮಾಡಲು ಕೇಂದ್ರ ಸರಕಾರ ನಿರ್ಧರಿಸಿದೆ.
ರಾವ್ ಅವರ 99ನೇ ಜನ್ಮ ದಿನಾಚರಣೆಯ ಒಂದು ದಿನದ ಅನಂತರ ಸರಕಾರದಿಂದ ಈ ನಿರ್ಧಾರ ಹೊರಬಿದ್ದಿದೆ.
ಪಿವಿಎನ್ 1991ರಿಂದ 1996ರ ವರೆಗೆ ಪ್ರಧಾನಿಯಾಗಿದ್ದರು. ಕಾಂಗ್ರೆಸ್ನಲ್ಲಿ ಗಾಂಧಿ ಮತ್ತು ನೆಹರೂ ಕುಟುಂಬ ಸ್ಥರ ಹೊರ ತಾಗಿ ಪೂರ್ಣಾವಧಿ ಪ್ರಧಾನಿಯಾ ಗಿದ್ದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆ ಅವರದು.