Pakistan: ನುಸುಳುಕೋರರ ಪೈಕಿ ಪಾಕ್ ನಿವೃತ್ತ ಸೈನಿಕರು!
Team Udayavani, Nov 24, 2023, 11:36 PM IST
ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಭಾರ ತದ ಒಳನುಸುಳಲು ಯತ್ನಿಸಿ ಭದ್ರತಾ ಪಡೆ ಗಳಿಂದ ಹತರಾಗುತ್ತಿರುವ ಉಗ್ರರ ಪೈಕಿ ಪಾಕಿಸ್ಥಾನದ ನಿವೃತ್ತ ಸೈನಿಕರೂ ಸೇರಿದ್ದಾರೆ ಎನ್ನುವ ಆತಂಕಕಾರಿ ಮಾಹಿತಿ ಶುಕ್ರವಾರ ಬಹಿರಂಗೊಂಡಿದೆ. ಈ ಮೂಲಕ ಭಯೋತ್ಪಾದನೆಗೆ ಪಾಕ್ ಸೇನೆ ಕುಮ್ಮಕ್ಕು ನೀಡುತ್ತದೆ ಎನ್ನುವ ವಾದಕ್ಕೆ ಪುಷ್ಟಿ ಸಿಕ್ಕಂತಾಗಿದೆ.
ಈ ಕುರಿತು ಮಾಧ್ಯಮಗಳಿಗೆ ಲೆಫ್ಟಿ ನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಮಾಹಿತಿ ನೀಡಿದ್ದು, ಗಡಿ ನುಸುಳಲು ಯತ್ನಿಸುತ್ತಿರುವ ಭಯೋತ್ಪಾದಕರು ಪಾಕಿಸ್ಥಾನ ಮತ್ತು ಅಫ^ನ್ನಿಂದ ತರ ಬೇತಿ ಪಡದು ಬರುತ್ತಿದ್ದಾರೆ. ಅಂಥವರ ಪೈಕಿ ಪಾಕ್ನ ನಿವೃತ್ತ ಸೈನಿಕರೂ ಸೇರಿ ದ್ದಾರೆ. ಆದರೆ, ನಮ್ಮ ಯೋಧರ ತ್ಯಾಗ, ಬಲಿದಾನಗಳು ಅವರ ಸಂಚುಗಳನ್ನು ವಿಫಲಗೊಳಿಸಿ ರಾಷ್ಟ್ರರಕ್ಷಣೆಯಲ್ಲಿನ ಶೌರ್ಯ ಪ್ರದರ್ಶಿಸುತ್ತಿವೆ ಎಂದಿದ್ದಾರೆ.
ರಜೌರಿಯಲ್ಲಿ ಹುತಾತ್ಮರಾದ ಯೋಧರ ಪಾರ್ಥೀವ ಶರೀರಗಳಿಗೆ ಶುಕ್ರವಾರ ಅಂತಿಮ ನಮನ ಸಲ್ಲಿಸಲಾ ಯಿತು. ಜಮ್ಮು- ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ಲೆ|ಜ| ದ್ವಿವೇದಿ ಸೇರಿ ಸೇನಾಧಿಕಾರಿ ಗಳು ಹುತಾತ್ಮರಿಗೆ ಪುಷ್ಪ ನಮನ ಸಲ್ಲಿಸಿದರು.
ವರ್ಷದೊಳಗೆ ಉಗ್ರರ ನಿರ್ನಾಮ: ಭದ್ರತಾಪಡೆಗಳ ಕಾರ್ಯಾಚರಣೆ ಯಗಳ ಹೊರತಾಗಿಯೂ ರಜೌರಿಯಲ್ಲಿ ಇನ್ನೂ 20ರಿಂದ 25 ಉಗ್ರರು ಸಕ್ರಿಯ ರಾಗಿದ್ದಾರೆ. ಸ್ಥಳೀಯರು ಸಹಕರಿಸಿದರೆ ಮುಂದಿನ 1 ವರ್ಷದ ಒಳಗೆ ಎಲ್ಲ ಉಗ್ರರನ್ನೂ ಸೇನೆ ಹೆಡೆಮುರಿ ಕಟ್ಟಲಿದೆ ಎಂದು ಲೆ|ಜ| ದ್ವಿವೇದಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
MUST WATCH
ಹೊಸ ಸೇರ್ಪಡೆ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ