Pakistan: ಹೆಚ್ಚು ಸ್ಥಾನ ಗೆದ್ದರೂ ಇಮ್ರಾನ್ ಪಕ್ಷಕ್ಕಿಲ್ಲ ಸರಕಾರ ರಚನೆ ಭಾಗ್ಯ
ಪಾಕ್ನಲ್ಲಿ ಕೊನೆಗೂ ಮುಗಿದ ಮತ ಎಣಿಕೆ: ಅತಂತ್ರ ಸ್ಥಿತಿ ನಿರ್ಮಾಣ
Team Udayavani, Feb 12, 2024, 12:04 AM IST
ಇಸ್ಲಾಮಾಬಾದ್: ಪಾಕಿಸ್ಥಾನ ಸಂಸತ್ ಚುನಾವಣೆ ಮತ ಎಣಿಕೆ ಪ್ರಕ್ರಿಯೆ ರವಿವಾರ ಕೊನೆಗೂ ಮುಕ್ತಾಯಗೊಂಡಿದೆ. ಆದರೆ ಗೊಂದಲ ಮಾತ್ರ ಇನ್ನೂ ಮುಂದುವರಿದಿದೆ.
ಪಾಕಿಸ್ಥಾನ ನ್ಯಾಶನಲ್ ಅಸೆಂಬ್ಲಿ ಚುನಾವಣೆಯಲ್ಲಿ ಮಾಜಿ ಪಿಎಂ ಇಮ್ರಾನ್ ಖಾನ್ರ ಪಾಕಿಸ್ಥಾನ್ತೆಹ್ರೀಕ್-ಇ-ಇನ್ಸಾಫ್ ಬೆಂಬಲಿತ ಸ್ವತಂತ್ರ ಅಭ್ಯರ್ಥಿ ಗಳು 103 ಸ್ಥಾನಗಳನ್ನು ಗಳಿಸಿದ್ದಾರೆ. ಆದರೆ ಸರಕಾರ ರಚಿಸಲು ಸರಳ ಬಹುಮತಕ್ಕೆ 31 ಸಂಸದರ ಕೊರತೆ ಎದುರಾಗಿದೆ. ಅಲ್ಲದೆ 73 ಸ್ಥಾನಗಳಲ್ಲಿ ಜಯ ಸಾಧಿಸಿರುವ ಮಾಜಿ ಪಿಎಂ ನವಾಜ್ ಶರೀಫ್ ನೇತೃತ್ವದ ಪಾಕಿಸ್ಥಾನ ಮುಸ್ಲಿಂ ಲೀಗ್- ನವಾಜ್ (ಪಿಎಂಎಲ್-ಎನ್) ಪಕ್ಷವು ಈಗಾಗಲೇ 54 ಸ್ಥಾನ ಗಳಲ್ಲಿ ಗೆದ್ದಿರುವ ಬಿಲಾವಲ್ ಭುಟ್ಟೋ ಜರ್ದಾರಿ ನೇತೃತ್ವದ ಪಾಕಿಸ್ಥಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ಹಾಗೂ 17ರಲ್ಲಿ ಜಯ ಸಾಧಿಸಿರುವ ಕರಾಚಿ ಮೂಲದ ಮುತ್ತಾಹಿದಾ ಕ್ವಾಮಿ ಮೂವ್ಮೆಂಟ್- ಪಾಕಿಸ್ಥಾನ (ಎಂಕ್ಯೂಎಂ-ಪಿ) ಪಕ್ಷದೊಂದಿಗೆ ಮೈತ್ರಿ ಮಾತುಕತೆ ನಡೆಸಲಾರಂಭಿಸಿದೆ. ನವಾಜ್ ಶರೀಫ್ ಪಕ್ಷಕ್ಕೆ ಪಾಕ್ನ ಬಲಿಷ್ಠ ಸೇನೆಯ ಬೆಂಬಲವಿರುವ ಕಾರಣ, ಇಮ್ರಾನ್ ಖಾನ್ ಪಕ್ಷ ಸರಕಾರ ರಚಿಸುವ ಸಾಧ್ಯತೆ ಕ್ಷೀಣಿಸಿದೆ. 103 ಸ್ಥಾನಗಳನ್ನು ಗಳಿಸಿದರೂ ಸರಕಾರ ರಚಿಸಲಾಗದ ಇಮ್ರಾನ್ ಪಕ್ಷಕ್ಕೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.
ಇದೇ ವೇಳೆ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ, ಇಮ್ರಾನ್ ನೇತೃತ್ವದ ಪಿಟಿಐ ಪಕ್ಷ ದೇಶಾದ್ಯಂತ ಪ್ರತಿಭಟನೆಗೆ ತೀರ್ಮಾನಿಸಿದೆ. ಮತ್ತೂಂದೆಡೆ ಚುನಾವಣೆ ಅಕ್ರಮಗಳ ವಿರುದ್ಧ ಪಾಕಿಸ್ಥಾನದಾದ್ಯಂತ ಕೋರ್ಟ್ಗಳಿಗೆ ಅರ್ಜಿಗಳ ಮಹಾಪೂರವೇ ಹರಿದುಬರುತ್ತಿವೆ. ಲಾಹೋರ್ ಹೈಕೋರ್ಟ್ಗೆ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ಇಸ್ಲಾಮಾಬಾದ್, ಸಿಂಧ್ ಹೈಕೋರ್ಟ್ಗಳಲ್ಲೂ ದಾವೆಗಳನ್ನು ಹೂಡಲಾಗಿದೆ.
ಪಿಎಂ ಹುದ್ದೆ ಒಪ್ಪಲು ನವಾಜ್ ಹಿಂದೇಟು?: ತಾಂತ್ರಿಕವಾಗಿ ಹೇಳುವುದಿದ್ದರೆ ನವಾಜ್ ಶರೀಫ್ ಪಕ್ಷವೇ ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.
ಪಾಕ್ ಸೇನೆ ಈಗಾಗಲೇ ಮಾಜಿ ಪ್ರಧಾನಿ ನವಾಜ್ ಶರೀಫ್ರನ್ನು ಬೆಂಬಲಿಸುವ ಮಾತುಗಳನ್ನಾಡಿದೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಮಾಜಿ ಪ್ರಧಾನಿ ಶರೀಫ್ ಪ್ರಧಾನಿ ಹುದ್ದೆ ಸ್ವೀಕರಿಸದೆ, ಸಹೋದರ ಶೆಹಬಾಜ್ ಶರೀಫ್ರನ್ನೇ ಪ್ರಧಾನಿ ಹುದ್ದೆಗೆ ಕೂರಿಸಿ, ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಇರಾದೆ ಹೊಂದಿದ್ದಾರೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು