Parliament: ಒಂದೂವರೆ ವರ್ಷದ ಹಿಂದೆ ಮೈಸೂರಲ್ಲೇ ನಡೆದಿತ್ತು ಸಂಚು
ಸಂಸತ್ ಭವನದಲ್ಲಿ ದುಷ್ಕೃತ್ಯವೆಸಗಲು ಆರೋಪಿಗಳಿಂದ ವ್ಯವಸ್ಥಿತ ಯೋಜನೆ
Team Udayavani, Dec 15, 2023, 12:57 AM IST
ಹೊಸದಿಲ್ಲಿ: ಬುಧವಾರ ಇಡೀ ದೇಶವನ್ನು ಬೆಚ್ಚಿಬೀಳಿಸಿದ, ಸಂಸತ್ ಭವನಕ್ಕೆ ಭದ್ರತ ಲೋಪದ ಕಪ್ಪು ಚುಕ್ಕೆ ತಂದಿಟ್ಟ “ದುಷ್ಕೃತ್ಯ”ಕ್ಕೆ ಒಂದೂವರೆ ವರ್ಷದ ಹಿಂದೆಯೇ ತಯಾರಿ ನಡೆದಿತ್ತು. ಅದೂ ಕರ್ನಾಟಕದ ಮೈಸೂರಿನಲ್ಲಿ!
ಹೌದು, ಬಂಧಿತರಾದ ಐವರು ಆರೋಪಿಗಳ ವಿಚಾರಣೆ ವೇಳೆ ಈ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ. ಸದನದೊಳಗೆ ಪ್ರೇಕ್ಷಕರ ಗ್ಯಾಲರಿಯಿಂದ ಜಿಗಿದು, ಸ್ಮೋಕ್ ಬಾಂಬ್ ಸಿಡಿಸಿದ ಪ್ರಕರಣವು ಇಂದು ನಿನ್ನೆ ನಡೆದ ಸಂಚು ಅಲ್ಲ. ಸುಮಾರು ಒಂದೂವರೆ ವರ್ಷದ ಹಿಂದೆಯೇ ಎಲ್ಲ 6 ಆರೋಪಿಗಳೂ ಮೈಸೂರಿನಲ್ಲಿ ಭೇಟಿಯಾಗಿ, ಈ ಕುರಿತು ಚರ್ಚೆ ನಡೆಸಿದ್ದರು. ಇವರೆಲ್ಲರೂ “ಭಗತ್ಸಿಂಗ್ ಫ್ಯಾನ್ ಕ್ಲಬ್’ ಎಂಬ ಫೇಸ್ಬುಕ್ ಪೇಜ್ನ ಭಾಗವಾಗಿದ್ದರು. 9 ತಿಂಗಳ ಹಿಂದೆ ಚಂಡೀಗಢ ವಿಮಾನ ನಿಲ್ದಾಣದಲ್ಲಿ ನಡೆದ ರೈತರ ಪ್ರತಿಭಟನೆ ವೇಳೆ ಮತ್ತೆ ಭೇಟಿಯಾಗಿದ್ದ ಆರೋಪಿ ಗಳು 2ನೇ ಸುತ್ತಿನ ಮಾತುಕತೆ ನಡೆಸಿ, ಯೋಜನೆ ಅಂತಿಮಗೊಳಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮೈಸೂರಿನ ಮನೋರಂಜನ್, ಉ. ಪ್ರದೇಶದ ಸಾಗರ್ ಶರ್ಮ, ಮಹಾರಾಷ್ಟ್ರದ ಅಮೋಲ್ ಶಿಂಧೆ, ಹರಿಯಾಣದ ನೀಲಂ ದೇವಿ ವಿರುದ್ಧ ಪೊಲೀಸರು ಭಯೋತ್ಪಾದನೆ ಆರೋಪ ಹೊರಿಸಿದ್ದಾರೆ.
ವಿಚಾರಣೆಯಿಂದ ತಿಳಿದುಬಂದದ್ದೇನು?
– ಭಗತ್ ಸಿಂಗ್ ಫ್ಯಾನ್ ಕ್ಲಬ್ ಫೇಸ್ಬುಕ್ ಪೇಜ್ ಮೂಲಕ ಆರೋಪಿಗಳು ಪರಸ್ಪರ ಸಂಪರ್ಕ.
– ಒಂದೂವರೆ ವರ್ಷದ ಹಿಂದೆ ಮೈಸೂರಿನಲ್ಲಿ ಆರೋಪಿಗಳ ಮೊದಲ ಭೇಟಿ; ಸಂಚಿನ ಬಗ್ಗೆ ಚರ್ಚೆ.
– 9 ತಿಂಗಳ ಹಿಂದೆ ಚಂಡೀಗಢದ ರೈತರ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮತ್ತೂಂದು ಸುತ್ತಿನ ಮಾತುಕತೆ
– ಈ ವರ್ಷದ ಜುಲೈ ತಿಂಗಳಿನಲ್ಲಿ ಸಂಸತ್ ಪ್ರವೇಶಿಸಲು ಆರೋಪಿ ಸಾಗರ್ ನಡೆಸಿದ ಯತ್ನ ವಿಫಲ.
– ಸಂಸತ್ ಭವನದ ಹೊರಗಿನಿಂದಲೇ ಭದ್ರತ ತಪಾಸಣೆಯನ್ನು ಸೂಕ್ಷ್ಮವಾಗಿ ವೀಕ್ಷಿಸಿದ್ದ ಸಾಗರ್.
– ದಿಲ್ಲಿ ತಲುಪಿ, ಗುರುಗ್ರಾಮದಲ್ಲಿ ತಂಗಿದ್ದ ಆರೋಪಿಗಳು.
– ಇಂಡಿಯಾ ಗೇಟ್ ಸಮೀಪ ಪರಸ್ಪರ ಗ್ಯಾಸ್ ಕ್ಯಾನಿಸ್ಟರ್ಗಳ ಹಂಚಿಕೆ.
– ಮಹಾರಾಷ್ಟ್ರದಿಂದ ಕ್ಯಾನಿಸ್ಟರ್ಗಳನ್ನು ತಂದಿದ್ದ ಅಮೋಲ್ ಶಿಂಧೆ.
– ಸಂಸತ್ತಿನೊಳಗೆ ಪ್ರವೇಶಿಸಿದ್ದ ಸಾಗರ್, ಮನೋರಂಜನ್.
– ಹೊರಗೆ ಉಳಿದು ಪ್ರತಿಭಟನೆಗೆ ನಿರ್ಧರಿಸಿದ ನೀಲಂ, ಶಿಂಧೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ