ಪಟ್ಟಣದ ಸ್ವಚ್ಚತೆ ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ : ಕಾವ್ಯ ರಮೇಶ್
Team Udayavani, Mar 6, 2022, 11:28 AM IST
ಕೊರಟಗೆರೆ : ಪ.ಪಂ ನಗರೋತ್ಥಾನ ಯೋಜನೆಯಡಿಯಲ್ಲಿ 6 ಕೋಟಿ ಮತ್ತು ಎಸ್.ಎಫ್ಸಿ ಯೋಜನೆಯಲ್ಲಿ 5 ಕೋಟಿ ಒಟ್ಟು 11 ಕೋಟಿ ಹಣ ಬಿಡುಗಡೆಯಾಗಿದ್ದು ಇದರ ಉತ್ತಮ ರೀತಿಯ ಸದ್ಬಳಕೆ ಮಾಡಿಕೊಳ್ಳಲು ಸಾಮಾನ್ಯ ಸಭೆ ನಡೆಸುತ್ತಿರುವುದಾಗಿ ಪ.ಪಂ ಅಧ್ಯಕ್ಷೆ ಕಾವ್ಯ ರಮೇಶ್ ತಿಳಿಸಿದರು.
ಪಟ್ಟಣದ ಪ.ಪಂ ಕಚೇರಿಯಲ್ಲಿ ಶನಿವಾರ ಸಾಮಾನ್ಯ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಇರುವಂತಹ ಹಣವನ್ನು ಸದ್ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ ಸ್ಥಳೀಯ ಶಾಸಕ ಡಾ. ಜಿ ಪರಮೇಶ್ವರ್ ಮತ್ತು ಎಲ್ಲಾ ಸದಸ್ಯರೊಂದಿಗೆ ಚರ್ಚಿಸಿ ಈಗ ಹಣದ ಬಳಕೆಗೆ ಕ್ರಿಯಾ ಯೋಜನೆ ತಯಾರು ಮಾಡಿಕೊಂಡು ಪಟ್ಟಣವನ್ನು ಅಭಿವೃದ್ಧಿ ಪಡಿಸಲು ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಮನವಿ: ಪಟ್ಟಣದ ಸ್ವಚ್ಚತೆಯನ್ನು ಕಾಪಾಡುವುದು ಪ್ರತಿಯೊಬ್ಬ ನಾಗರೀಕರ ಕೆಲಸವಾಗಿದ್ದು ಕಸನವನ್ನು ಎಲ್ಲೆಂದರಲ್ಲಿ ಹಾಕದೇ ಪ.ಪಂ ವಾಹನ ಬಂದಾಗ ಕಸವನ್ನು ಅಲ್ಲಿಯೇ ಹಾಕಬೇಕು ಅರ್ನೈಮಲ್ಯ ಹೆಚ್ಚಾದರೆ ಇದರಿಂದ ಸಾಂಕ್ರಾಮಿಕ ರೋಗದ ಜೊತೆಗೆ ಪಟ್ಟಣದ ಸ್ವಚ್ಚತೆ ಹಾಳಾಗುತ್ತದೆ ಎಲ್ಲರೂ ಸಹಕರಿಸಬೇಕು ಎಂದು ಮನವಿ ಎಂದು ಕಾವ್ಯ ರಮೇಶ್ ತಿಳಿಸಿದರು.
ಇದನ್ನೂ ಓದಿ : ಪುಟಿನ್ ಗೆ ಹೇಳಿ ಯುದ್ಧ ನಿಲ್ಲಿಸಿ..: ಭಾರತಕ್ಕೆ ಮತ್ತೆ ಒತ್ತಾಯಿಸಿದ ಉಕ್ರೇನ್
ಪೈಪ್ ಲೈನ್ ಸದ್ದು: ಸುಮಾರು ೮೯, ೨೫, ೯೪ ಸಾವಿರದ ಮೂರು ಬಿಲ್ ಗಳು ಬಿಡುಗಡೆಯಾಗಿದೆ ಪೈಪ್ ಲೈನ್ ಮಾಡಿದ್ದೇವೆ ಎಂದು ಬಿಲ್ಗಳು ಹೇಳುತ್ತವೆ ಆದರೆ ವಾಸ್ತವದಲ್ಲಿ ಪಟ್ಟಣದಲ್ಲಿ ಎಷ್ಟು ಪೈಪ್ ಲೈನ್ ಮಾಡಲಾಗಿದೆ ಎಲ್ಲಿ ಎಲ್ಲಿ ಮಾಡಲಾಗಿದೆ ಇದರ ಯಾವೊಂದು ಪೋಟೋ ಸಹ ಇಲ್ಲದೇ ಮಾಡಲಾಗಿದೆ ಇದು ನಿಲ್ಲಬೇಕು ಎಂದು ಪ.ಪಂ ಸದಸ್ಯ ಎ.ಡಿ ಬಲರಾಮಯ್ಯ ಗುಡುಗಿದರು ಇದಕ್ಕೆ ಪ್ರತಿಕ್ರಿಯಿಸದೆ ಅಧಿಕಾರಿಗಳು ಕಾಮಗಾರಿಯ ಬಗ್ಗೆ ಮಾಹಿತಿ ನೀಡಲು ತಡವರಿಸಿದರು.
ಬ್ಲೀಚಿಂಗ್ ಪೌಡರ್ ದರ್ಶನವೇ ಇಲ್ಲ ಆದರೂ ಬಿಲ್ : ಬ್ಲೀಚಿಂಗ್ ಪೌಡರ್ ಖರೀದಿಸಿದ ಬಿಲ್ ಇದೆ ಆದರೆ ಇದನ್ನು ಒಮ್ಮೆಯೂ ಎಲ್ಲಿಯೂ ಪಟ್ಟಣದ ಯಾವೊಂದು ವಾರ್ಡ್ಗೂ ಸಹ ಹಾಕಿದಂತಹ ಕುರುಹು ಇಲ್ಲ ಸುಮ್ಮನೇ ಹೇಗೆ ಬಿಲ್ ತಯಾರಾಗುತ್ತದೆ ಎಂದು ಎಲ್ಲ ಸದಸ್ಯರೂ ಆರೋಗ್ಯ ಅಧಿಕಾರಿ ರೈಸ್ ಅಹಮದ್ ಮೇಲೆ ಹರಿಹಾಯ್ದರು, ನಾನು ಗೆದ್ದು ೩ ವರ್ಷವಾಗಿದೆ ಒಮ್ಮೆಯೂ ನನ್ನ ವಾರ್ಡ್ಗೆ ಬ್ಲೀಚಿಂಗ್ ಪೌಡರ್ ಹಾಕಿಲ್ಲ ಎಂದರು.
ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎನ್ ನಟರಾಜು ಮಾತನಾಡಿ, ಬ್ಲೀಚಿಂಗ್ ಪೌಡರ್ ಹಾಕುವಂತಹ ಸಂದರ್ಭದಲ್ಲಿ ವಾರ್ಡ್ ಸದಸ್ಯರಿಗೆ ಒಮ್ಮೆ ಮಾಹಿತಿ ಕೊಡಿ ಆಗ ಅವರು ಸ್ಥಳಕ್ಕೆ ಬರುತ್ತಾರೆ ಆಗ ನೀವು ಎಲ್ಲೆಲ್ಲೆ ಬ್ಲೀಚಿಂಗ್ ಪೌಡರ್ ಹಾಕಿದ್ದೀರಾ ಅನ್ನುವ ಮಾಹಿತಿ ಅವರಿಗೂ ಇರುತ್ತದೆ ಇದನ್ನು ಬಿಟ್ಟು ಸುಮ್ಮನೇ ಹಾಕಿದ್ದೇವೆ ಎನ್ನುವ ಮಾಹಿತಿ ಮತ್ತು ಖರೀದಿಗೆ ಬಿಲ್ ತೋರಿಸುವುದು ಬೇಡ ಎಂದು ಕುಟುಕಿದರು.
14 ನೇ ವಾರ್ಡ್ ಸದಸ್ಯರ ಗದ್ದಲ: ಸದಸ್ಯ ಪುಟ್ಟನರಸಪ್ಪ ನಮ್ಮ ವಾರ್ಡ್ ನಲ್ಲಿ ಅಭಿವೃದ್ಧಿ ಕೆಲಸಗಳೇ ನಡೆಯುತ್ತಿಲ್ಲ ಇಲ್ಲಿ ನಮ್ಮ ವಾರ್ಡ್ಗೆ ಮೀಸಲಿರುವ ಹಣವನ್ನೇ ಇತರೆ ವಾರ್ಡ್ಗೆ ಬಳಕೆ ಮಾಡಲಾಗುತ್ತಿದೆ ಹಿಂದುಳಿದ ಬೋವಿ ಕಾಲೋನಿ ನನ್ನ ವಾರ್ಡ್ಲ್ಲಿ ಇದೆ ಇಲ್ಲಿಗೆ ಕುಡಿಯುವ ನೀರಿನ ಪೈಪ್ ಲೈನ್ ಮಾಡುವ ಬಗ್ಗೆ ಹಲವು ಬಾರಿ ತಿಳಿಸಿದರೂ ನಿರ್ಲಕ್ಷ ವಹಿಸಲಾಗುತ್ತೆ ಯಾಗೆ ಈ ದೋರಣೆ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪ.ಪಂ ಮುಖ್ಯಾಧಿಕಾರಿ ಲಕ್ಷ್ಮಣ್ ಕುಮಾರ್ ಈ ಬಾರಿ ಸರಿ ಪಡಿಸುವುದಾಗಿ ಹೇಳಿದರು.
ಖಾತೆ ಬಗ್ಗೆ ಮಾಹಿತಿ ಇಲ್ಲ: ಪಟ್ಟಣ ವ್ಯಾಪ್ತಿಗೆ ಒಳಪಡುವಂತಹ ನೂರಾರು ಖಾತೆಗಳು ಆಗುತ್ತಿದೆ ಇದರ ಬಗ್ಗೆ ಮಾಹಿತಿಯೇ ಇಲ್ಲದೇ ಕಚೇರಿಯಲ್ಲಿ ವ್ಯವಹಾರ ನಡೆಯುತ್ತಿದೆ ಇದರ ಮಾಹಿತಿ ಸದಸ್ಯರಿಗೆ ತಿಳಿಯುತ್ತಿಲ್ಲ ಇದನ್ನು ತಿಳಿಸುವಂತೆ ಸದಸ್ಯ ಕೆ.ಆರ್ ಓಬಳರಾಜು ತಿಳಿಸಿದರು.
ಸಭೆಯಲ್ಲಿ ಪ.ಪಂ ಸದಸ್ಯರಾದ ಎ.ಡಿ ಬಲರಾಮಯ್ಯ, ಕೆ.ಆರ್ ಓಬಳರಾಜು,ಲಕ್ಷ್ಮಿನಾರಾಯಣ್ ,ನಾಗರಾಜು, ಗೋವಿಂದರಾಜು, ರಂಗನಾಥ್,ಪ್ರೇಮಕುಮಾರ್, ಉಸ್ಮಾನಿಯಾ ಫಾರಿಯಾ, ಅನಿತ, ಮಂಜುಳಾ ಸತ್ಯನಾರಾಯಣ್, ಮುಖ್ಯಾಧಿಕಾರಿ ಲಕ್ಷ್ಮಣ್ ಕುಮಾರ್, ಕಂದಾಯ ನಿರೀಕ್ಷಕ ವೀರಭದ್ರಚಾರ್,ಆರೋಗ್ಯ ನಿರೀಕ್ಷಕ ರೈಸ್ ಅಹಮದ್, ಪ್ರದೀಪ್ ಕುಮಾರ್, ನಾಮಿನಿ ಸದಸ್ಯರಾದ ರಂಗನಾಥ್, ಪ್ರೇಮ್ ಕುಮಾರ್ ಸೇರಿದಂತೆ ಇತರೆ ಅಧಿಕಾರಿಗಳು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ
Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ
State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ
MUST WATCH
ಹೊಸ ಸೇರ್ಪಡೆ
Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
IPL; ಮೆಕ್ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ