ಪೆಸಿಫಿಕ್‌ ದ್ವೀಪಗಳಲ್ಲಿ ಇಲ್ಲ ಕೋವಿಡ್‌ ಕಾಟ


Team Udayavani, May 21, 2020, 5:01 PM IST

ಪೆಸಿಫಿಕ್‌ ದ್ವೀಪಗಳಲ್ಲಿ ಇಲ್ಲ ಕೋವಿಡ್‌ ಕಾಟ

ಮಣಿಪಾಲ : ಕೋವಿಡ್‌ ವೈರಸ್‌ ಜಗತ್ತಿನ ಪ್ರತಿ ಮೂಲೆ ಗೂ ಕ್ಷಿಪ್ರವಾಗಿ ಹರಡಿದೆ. ಆದರೆ ಕೆಲವು ದೇಶಗಳು ಮಾತ್ರ ಆಶ್ಚರ್ಯಕರ ಎಂಬಂತೆ ಕೋವಿಡ್‌ ಕಾಟದಿಂದ ಮುಕ್ತವಾಗಿವೆ. ಫೆಸಿಫಿಕ್‌ ಸಾಗರದಲ್ಲಿರುವ ಕೆಲವು ಪುಟ್ಟ ದ್ವೀಪ ದೇಶಗಳಿಗೆ ಕಾಲಿಡಲು ಕೋವಿಡ್‌ಗೆ ಇನ್ನೂ ಸಾಧ್ಯವಾಗಿಲ್ಲ.

ಹಿಂದಿನ ಕೆಲವು ವೈರಸ್‌ ಹಾವಳಿಯಿಂದ ಪಾಠ ಕಲಿತಿರುವ ಈ ದ್ವೀಪ ರಾಷ್ಟ್ರಗಳು ಜಗತ್ತಿನ ಇತರೆಡೆ ಕೋವಿಡ್‌ ಸೋಂಕು ಹರಡುವುದು ಪ್ರಾರಂಭವಾಗುತ್ತಿದ್ದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡ ಕಾರಣ ಬಚಾವಾಗಿವೆ.

ಈ ದ್ವೀಪ ರಾಷ್ಟ್ರಗಳಿಗೆ ಅವುಗಳ ಭೌಗೋಳಿಕ ಸ್ಥಾನವೇ ಕೋವಿಡ್‌ ವಿರುದ್ಧ ರಕ್ಷಣಾ ಕವಚವಾಗಿ ಕಾರ್ಯವೆಸಗಿವೆ. ಪಾಲವು, ಟುವಲು, ಮಾರ್ಶಲ್‌ ಐಲ್ಯಾಂಡ್ಸ್‌, ಫೆಡರೇಟೆಡ್‌ ಸ್ಟೇಟ್ಸ್‌ ಆಫ್ ಮೈಕ್ರೋನೇಷ್ಯಾ, ಕಿರಿಬಟಿ, ನೌರು, ಸೋಲೊಮನ್‌ ಐಲ್ಯಾಂಡ್ಸ್‌, ಟೋಂಗ, ವನವುಟು ಮುಂತಾದ ದ್ವೀಪಗಳಿಗೆ ಕೋವಿಡ್‌ ಪ್ರವೇಶಿಸಿಲ್ಲ.ಇದಕ್ಕೆ ಹಲವಾರು ಕಾರಣಗಳಿವೆ. ಮುಖ್ಯವಾಗಿ ಅವುಗಳ ನಡುವಿನ ಭೌಗೋಳಿಕ ಅಂತರ. ಮುಖ್ಯ ಭೂಖಂಡಗಳಿಂದ ದೂರವಾಗಿ ಸಾಗರದ ಮಧ್ಯೆ ತಮ್ಮಷ್ಟಕ್ಕೆ ತಾವಿರುವ ಈ ದ್ವೀಪ ದೇಶಗಳಿಗೆ ಒಂದೋ ವಾಯುಮಾರ್ಗವಾಗಿ ಅಥವಾ ಜಲಮಾರ್ಗವಾಗಿ ಮಾತ್ರ ತಲಪಲು ಸಾಧ್ಯ. ವೈರಸ್‌ ಹಾವಳಿ ಶುರುವಾದ ಕೂಡಲೇ ಬಹುತೇಕ ದ್ವೀಪ ದೇಶಗಳು ಈ ಎರಡೂ ಮಾರ್ಗಗಳನ್ನು ಮುಚ್ಚಿದ ಕಾರಣ ಸುರಕ್ಷಿತವಾಗಿ ಉಳಿದಿವೆ ಎನ್ನುತ್ತಾರೆ ಪೆಸಿಫಿಕ್‌ ಸಾಗರದ ದ್ವೀಪಗಳಿಗೆ ಯುನಿಸೆಫ್ ನ ಪ್ರತಿನಿಧಿಯಾಗಿರುವ ಶೆಲ್ಡನ್‌ ಯೆಟ್‌.

ದೊಡ್ಡ ನಗರಗಳಲ್ಲಿ ಏನಾಗುತ್ತಿದೆ ಎಂಬುದನ್ನು ಈ ದ್ವೀಪಗಳು ಟಿವಿ ವಾಹಿನಿಯಲ್ಲಿ ನೋಡುತ್ತಿದ್ದವು. ಜತೆಗೆ ಸಾಂಕ್ರಾಮಿಕ ರೋಗಗಳ ವಿರುದ್ಧ ಹೋರಾಡಿದ ಹಿಂದಿನ ಅನುಭವವೂ ಇಲ್ಲಿನ ಆಡಳಿತಗಳಿಗೆ ಇತ್ತು. ಹೀಗಾಗಿ ಕ್ಷಿಪ್ರ ನಿರ್ಧಾರಗಳನ್ನು ಕೈಗೊಂಡು ಮೊದಲು ಎರಡೂ ಸಾರಿಗೆ ಮಾಧ್ಯಮವನ್ನು ಮುಚ್ಚಿದವು. ಹೀಗಾಗಿ ವೈರಸ್‌ಗೆ ದ್ವೀಪಗಳಿಗೆ ತಲಪಲು ಸಾಧ್ಯವಾಗಿಲ್ಲ ಎಂದು ವಿವರಿಸುತ್ತಾರೆ ಯೆಟ್‌.

ಎಲ್ಲ ದ್ವೀಪಗಳಿಗೆ ವೈರಸನ್ನು ದೂರವಿರಿಸಲು ಸಾಧ್ಯವಾಗಿಲ್ಲ. ಫಿಜಿ ಐಲ್ಯಾಂಡ್‌, ಗ್ವಾಮ್‌ ದ್ವೀಪ ಸೇರಿ ಕೆಲವು ದ್ವೀಪಗಳಲ್ಲಿ ಕೋವಿಡ್‌ ಹಾಟ್‌ಸ್ಪಾಟ್‌ಗಳಿವೆ. ಈ ದ್ವೀಪಗಳಿಗೆ ವೈರಸ್‌ ಬಂದಿರುವುದು ಹೊರದೇಶಗಳಿಂದ. ಪಪುವಾ ನ್ಯೂಗಿನಿಯದಂಥ ಕೆಲವು ದ್ವೀಪ ರಾಷ್ಟ್ರಗಳಿಗೆ ಸಾಂಕ್ರಾಮಿಕ ರೋಗಗಳ ವಿರುದ್ಧ ಹೋರಾಡಿದ ಧಾರಾಳ ಅನುಭವ ಇದೆ. ಪಪುವಾ ನ್ಯೂಗಿನಿಯಾ ಕಳೆದ ವರ್ಷವಷ್ಟೇ ಮಲೇರಿಯದ ವಿರುದ್ಧ ಭಾರೀ ಸೆಣಸಾಟ ನಡೆಸಿತ್ತು. ಸಮೋವ ದ್ವೀಪ ದಡಾರದ ವಿರುದ್ಧ ಯಶಸ್ವಿ ಹೋರಾಟ ನಡೆಸಿದ ಅನುಭವ ಹೊಂದಿದೆ. ಸಾಮಾಜಿಕ ಅಂತರ ಪಾಲನೆ, ಕ್ವಾರಂಟೈನ್‌ ಇವೆಲ್ಲ ಈ ದ್ವೀಪ ವಾಸಿಗಳಿಗೆ ಹೊಸತಲ್ಲ.

ಸಮೋವ ಜ.20ರಂದೇ ಆಸ್ಟ್ರೇಲಿಯ, ನ್ಯೂಜಿಲ್ಯಾಂಡ್‌, ಫಿಜಿ ಮತ್ತು ಅಮೆರಿಕದ ಪ್ರವಾಸಿಗಳಿಗೆ ನಿರ್ಬಂಧ ಹೇರಿತ್ತು. ಸಮೋವ ಸರಕಾರ ಸೋಷಿಯಲ್‌ ಮೀಡಿಯಾ ಮೂಲಕ ಜನರಲ್ಲಿ ಆರಂಭದಲ್ಲೇ ಜಾಗೃತಿ ಮೂಡಿಸಿತು. ಇದಕ್ಕಾಗಿ ಸಮುದಾಯ ಕೇಂದ್ರಗಳು, ಚರ್ಚ್‌ ಸೇರಿದಂತೆ ಲಭ್ಯವಿರುವ ಎಲ್ಲ ಸೌಲಭ್ಯಗಳನ್ನು ಬಳಸಿಕೊಳ್ಳಲಾಯಿತು. ಪರಿಣಾಮವಾಗಿ ಈ ದ್ವೀಪಕ್ಕೆ ವೈರಸ್‌ ಪ್ರವೇಶಿಸಲಿಲ್ಲ.

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.