ಬಿಸ್ವಾ, ಮಿಲಿಂದ್ನಂಥವರು ಪಕ್ಷ ತೊರೆಯಲಿ: ರಾಹುಲ್
ನಿಲುವು ಹೊಂದಾಣಿಕೆಯಾಗದು: ಕೈ ನಾಯಕ
Team Udayavani, Feb 3, 2024, 12:42 AM IST
ಬಹರಂಪುರ್: ಹಿಮಂತ ಬಿಸ್ವಾ ಶರ್ಮಾ ಮತ್ತು ಮಿಲಿಂದ್ ದೇವೊರಾರಂಥ ನಾಯಕರು ಪಕ್ಷ ತೊರೆಯಲಿ ಎಂದೇ ನಾನು ಬಯಸುತ್ತೇನೆ. ಯಾಕೆಂದರೆ ಅವರ ನಿಲುವು, ಸಿದ್ಧಾಂತಗಳು ಪಕ್ಷದ ಸಿದ್ಧಾಂತಕ್ಕೆ ಹೊಂದಾಣಿಕೆಯಾಗುವುದಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಯುವ ನಾಯಕರ ರಾಜೀನಾಮೆ ಸರಣಿ ಮುಂದುವರಿದಿರುವಂತೆಯೇ ರಾಹುಲ್ ಈ ಹೇಳಿಕೆ ಅಚ್ಚರಿ ಮೂಡಿಸಿ ದೆ. ಪ.ಬಂಗಾಲದಲ್ಲಿ ನ್ಯಾಯ ಯಾತ್ರೆ ವೇಳೆ ಅವರು ಈ ಹೇಳಿಕೆ ನೀಡಿದ್ದಾರೆ. ಬಿಸ್ವಾ ಸದ್ಯ ಅಸ್ಸಾಂನ ಸಿಎಂ ಆಗಿದ್ದಾರೆ. ಮಿಲಿಂದ್ ಶಿವಸೇನೆ ಶಿಂಧೆ ಬಣ ಸೇರಿ ದ್ದಾರೆ. ಈ ನಡುವೆ, ಇಂಡಿಯಾ ಒಕ್ಕೂಟವನ್ನು ಲೋಕಸಭೆ ಚುನಾವಣೆಗೆ ರಚಿಸಿದ್ದೇ ಹೊರತು ಅಸೆಂಬ್ಲಿ ಚುನಾವಣೆಗಲ್ಲ ಎಂದು ಜೈರಾಂ ರಮೇಶ್ ಹೇಳಿದ್ದಾರೆ.
ಕೈಗೆ 40 ಸ್ಥಾನವೂ ಅನುಮಾನ: ದೀದಿ
ಲೋಕಸಭಾ ಚುನಾವಣೆಯಲ್ಲಿ ದೇಶದ 300 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದೇ ಆದರೆ, ಕಾಂಗ್ರೆಸ್ 40 ಸ್ಥಾನಗಳನ್ನು ಗೆಲ್ಲೋದು ಕೂಡ ಅನುಮಾನವೆನಿಸಿ ದೆ ಎಂದು ಪ. ಬಂಗಾಲ ಸಿಎಂ, ಮಮತಾ ಹೇಳಿದ್ದಾರೆ. ಮುರ್ಷಿದಾ ಬಾದ್ನಲ್ಲಿ ಶುಕ್ರವಾರ ಮಾತನಾಡಿದ ಅವರು, ಇಂಡಿಯಾ ಮೈತ್ರಿಕೂಟದ ಭಾಗವಾಗಿ ಬಂಗಾಲದಲ್ಲಿ 2 ಕ್ಷೇತ್ರಗಳ ಲ್ಲಿ ಸ್ಪರ್ಧಿಸಲು ನಾನು ಕಾಂಗ್ರೆಸ್ಗೆ ಆಹ್ವಾನ ನೀಡಿದ್ದೆ. ಆದರೆ ಅವರು ಹೆಚ್ಚಿನ ಸ್ಥಾನಗಳನ್ನು ಕೇಳಿ, ಆಹ್ವಾನ ತಿರಸ್ಕರಿಸಿದರು. ಆ ಬಳಿಕ ಟಿಎಂಸಿ ಮತ್ತು ಕಾಂಗ್ರೆಸ್ ಮಧ್ಯೆ ಯಾವುದೇ ಮಾತುಕತೆ ನಡೆದಿಲ್ಲ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dr.Nagareddy Patil: ಮಾಜಿ ಶಾಸಕ ಡಾ.ನಾಗರೆಡ್ಡಿ ಪಾಟೀಲ್ ಇನ್ನಿಲ್ಲ
ಕಾಡಾನೆ ತಡೆಗೆ ಜೋತಾಡುವ ಸೌರ ವಿದ್ಯುತ್ ಬೇಲಿ!
Todays Horoscope: ಈ ರಾಶಿಯವರಿಗೆ ಏಳೂವರೆ ಶನಿಯ ಕೊನೆಯ ಹಂತದ ಕೀಟಲೆಗಳು ಇರಲಿದೆ
8 ಸಂತ್ರಸ್ತೆಯರನ್ನು ಸಂಪರ್ಕಿಸಿದ ಎಸ್ಐಟಿ? ಇನ್ನಷ್ಟು ಎಫ್ಐಆರ್ ಸಾಧ್ಯತೆ
Agumbe ಘಾಟಿಯಲ್ಲಿ ಸುರಂಗ ಮಾರ್ಗ ಯೋಜನೆ ಮುನ್ನೆಲೆಗೆ; ಕರಾವಳಿ-ಮಲೆನಾಡು ಬೆಸೆಯಲು ಸುರಂಗ