“ನಡಿಪಟ್ಣ ಕ್ಕೆ 1 ಕೋ.ರೂ. ವೆಚ್ಚದ ಶಾಶ್ವತ ತಡೆಗೋಡೆ’
Team Udayavani, Jul 10, 2020, 5:13 AM IST
ಪಡುಬಿದ್ರಿ: ನಡಿಪಟ್ಣದ ಲೋಕೇಶ್ ಕರ್ಕೇರ ಮನೆ ಬಳಿಯಿಂದ ಮಹೇಶ್ವರಿ ಡಿಸ್ಕೋ ಫಂಡ್ ಚಪ್ಪರದ ವರೆಗಿನ 130 ಮೀ. ಉದ್ದಕ್ಕೆ 1 ಕೋ.ರೂ. ವೆಚ್ಚದಲ್ಲಿ ಶಾಶ್ವತ ತಡೆಗೋಡೆ ರಚನೆಗೆ ಬಂದರು, ಮೀನುಗಾರಿಕೆ ಇಲಾಖಾ ಮಂಜೂರಾತಿ ದೊರೆತಿದೆ ಎಂದು ಕಾಪು ಶಾಸಕ ಲಾಲಾಜಿ ಮೆಂಡನ್ ಹೇಳಿದರು.
ಅವರು ಜು.9ರಂದು ಪಡುಬಿದ್ರಿ ನಡಿಪಟ್ಣ ಪ್ರದೇಶದ ಕಡಲ್ಕೊರೆತ ಪ್ರದೇಶಕ್ಕೆ ಭೇಟಿ ನೀಡಿ ಸಮುದ್ರಕೊರೆತ ತಡೆ ಕಾಮಗಾರಿ ಕುರಿತು ಮಾಹಿತಿ ನೀಡಿದರು.
ಕೈರಂಪಣಿ ಫಂಡ್ಗಳ ಸ್ಥಳೀಯ ಮೀನುಗಾರರಿಗೆ ಸಮುದ್ರಕ್ಕಿಳಿಯಲು ಬೇಕಾದ ನಿರ್ದಿಷ್ಟ ಪ್ರದೇಶಗಳ ತೆರವು ಬಿಟ್ಟು ಉಳಿದಂತೆ ಇಲ್ಲಿನ 130 ಮೀ. ಪ್ರದೇಶ ವನ್ನು ಶಾಶ್ವತ ತಡೆಗೋಡೆ ನಿರ್ಮಾ ಣದ ಮೂಲಕ ರಕ್ಷಿಸಲಾಗುವುದು. ಈ ಎಲ್ಲ ಮಾಹಿತಿಗಳನ್ನು ಜಿಲ್ಲಾಧಿಕಾರಿ ಅವ ರೊಂದಿಗೆ ನಿನ್ನೆಯಷ್ಟೇ ಚರ್ಚಿಸಲಾಗಿದೆ.
ಮಳೆಗಾಲದಲ್ಲಿ ಸ್ಥಳೀಯರ ಮನೆ, ತೋಟ ರಕ್ಷಿಸಿಕೊಳ್ಳಲು ತುರ್ತು ತಡೆಗೋಡೆ ಕಾಮಗಾರಿ ನಡೆಸಲಾಗುತ್ತಿದೆ. ಮಳೆಗಾಲದ ಬಳಿಕ ಶಾಶ್ವತ ಕಾಮಗಾರಿ ನಡೆಸುತ್ತೇವೆ ಎಂದರು.
ಸ್ಥಳೀಯರು ಹೆಜಮಾಡಿಯಿಂದ ಪಡುಬಿದ್ರಿಯ ಭಾಗಕ್ಕೆ ಸಂಪರ್ಕ ಸೇತುವೆಯ ನಿರ್ಮಾಣಕ್ಕೆ ಒತ್ತು ನೀಡಬೇಕೆಂದು ಶಾಸಕ ಲಾಲಾಜಿ ಅವರಲ್ಲಿ ಮನವಿ ಮಾಡಿದಾಗ ಸಕಾರಾತ್ಮಕವಾಗಿ ಸ್ಪಂದಿಸಿದರು. ಬ್ಲೂ ಫ್ಲ್ಯಾಗ್ ಬೀಚ್ಗೆ ಕೇಂದ್ರ ತಂಡದ ಅನುಮೋದನೆ ದೊರೆತ ಬಳಿಕ ಈ ಸೇತುವೆ ಕುರಿತಾದ ಯೋಜನಾ ಪ್ರಸ್ತಾವವನ್ನು ಸರಕಾರಕ್ಕೆ ರವಾನಿಸಲಾಗುವುದು. ಇದರ ಜತೆಗೆ ಈ ಪ್ರದೇಶದ ಅಭಿವೃದ್ಧಿ ನಡೆಸಲಾಗುವುದು. ಈಗಾಗಲೇ ಶಾಸಕರ ನಿಧಿಯಿಂದ 1 ಕೋ.ರೂ.ಗಳ ನಡಿಪಟ್ಣ – ಬ್ಲೂಫ್ಲ್ಯಾಗ್ ಬೀಚ್ ಸಂಪರ್ಕ ರಸ್ತೆಯನ್ನೂ ಈ ಭಾಗಕ್ಕೆ ನೀಡಲಾಗಿದೆ ಎಂದರು.
ಶಾಸಕರ ಜತೆಗೆ ಮೀನುಗಾರಿಕೆ ಇಲಾಖಾ ಸಹಾಯಕ ಕಾರ್ಯಕಾರಿ ಎಂಜಿನಿಯರ್ ಉದಯ ಕುಮಾರ್, ಸಹಾಯಕ ಎಂಜಿನಿಯರ್ ಜಯರಾಜ್, ಜಿ. ಪಂ. ಸದಸ್ಯ ಶಶಿಕಾಂತ್ ಪಡುಬಿದ್ರಿ, ಮಾಜಿ ಉಡುಪಿ ತಾ. ಪಂ. ಅಧ್ಯಕ್ಷೆ ನೀತಾ ಗುರುರಾಜ್, ಬಿಜೆಪಿ ಮಾಜಿ ಕ್ಷೇತ್ರಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಮಾಜಿ ಗ್ರಾ. ಪಂ. ಸದಸ್ಯ ಅಶೋಕ್ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ