ವಿಕಲಚೇತನರಿಗೆ ಪೈಲೆಟ್‌ ಪ್ರೋಗ್ರಾಂ

ವಡ್ಡರಹಟ್ಟಿ ಗ್ರಾಪಂನಲ್ಲಿ ವಿಕಲಚೇತನರ ಗುಂಪಿಗೆ ಕೆಲಸ; ತರಕಾರಿ ಕೈತೋಟ ನಿರ್ಮಿಸಿ ಮಾರಾಟಕ್ಕೆ ವ್ಯವಸ್ಥೆ

Team Udayavani, Aug 4, 2021, 7:20 PM IST

disabled

ಕೊಪ್ಪಳ: ಉದ್ಯೋಗ ಖಾತ್ರಿ ಯೋಜನೆಯಡಿ ವಿಕಲಚೇತನರಿಗೂ ಆದ್ಯತೆ ನೀಡಬೇಕೆನ್ನುವ ಉದ್ದೇಶದಿಂದಲೇ ಪೌಷ್ಟಿಕ ತರಕಾರಿ ಕೈತೋಟ ನಿರ್ಮಿಸಲಾಗಿದ್ದು, ವಿಕಲಚೇತನರ ಗುಂಪು ರಚಿಸಿ ಅವರಿಗೆ ನಿರ್ವಹಣೆ ಮಾಡಿ ಆದಾಯ ಪಡೆಯಲು ತಾಪಂ, ಜಿಪಂ ವಿಶೇಷ ಯೋಜನೆ ರೂಪಿಸಿದೆ. ಇದು ಯಶಸ್ವಿಯಾದರೆ ಜಿಲ್ಲಾದ್ಯಂತ ಇದನ್ನು ವಿಸ್ತರಣೆಗೂ ಚಿಂತನೆ ನಡೆಸಿದೆ.

ಪ್ರತಿ ವರ್ಷವೂ ಜಿಪಂ, ತಾಪಂ, ಗ್ರಾಪಂ ಮೂಲಕ ಗ್ರಾಮೀಣ ಜನರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕೆಲಸ ನೀಡಲಾಗುತ್ತಿದೆ. ಸಾಮೂಹಿಕ ಬಂಡ್‌ ನಿರ್ಮಾಣ, ಬದು ನಿರ್ಮಾಣ, ಕೆರೆ ಹೂಳು ತೆಗೆಯುವುದು, ಚೆಕ್‌ ಡ್ಯಾಂ ಸ್ವತ್ಛಗೊಳಿಸುವುದು, ರೈತರ ಜಮೀನಿನಲ್ಲಿ ವೈಯಕ್ತಿಕ ಕಾಮಗಾರಿ ಜೊತೆಗೆ ಸಮುದಾಯ ಕಾಮಗಾರಿಗಳನ್ನೂ ನೀಡಲಾಗುತ್ತಿದೆ. ಈ ವೇಳೆ ವಿಕಲಚೇತನರು ನರೇಗಾ ಕೆಲಸಕ್ಕೆ ಆಗಮಿಸಿದಾಗ ಅವರಿಗೆ ಕೆಲಸ ಮಾಡುವ ಸಾಮರ್ಥ್ಯ ಕಡಿಮೆ ಇರುತ್ತದೆ. ಶೇ. 100ರಷ್ಟು ಅವರಿಗೆ ಕೆಲಸ ಮಾಡಲು ಆಗುವುದಿಲ್ಲ. ಅದನ್ನರಿತು ಗಂಗಾವತಿ ತಾಲೂಕಿನ ವಡ್ಡರಟ್ಟಿ ಗ್ರಾಪಂನಲ್ಲಿನ ವಿಕಲಚೇತನರಿಗಾಗಿಯೇ ತರಕಾರಿ ಕೈತೋಟ ನಿರ್ಮಿಸಿ ಕೊಡಲಾಗಿದೆ.

ಏನಿದು ಯೋಜನೆ?: ಗಂಗಾವತಿ ತಾಲೂಕಿನ ವಡ್ಡರಹಟ್ಟಿ ಗ್ರಾಪಂನಲ್ಲಿ ನರೇಗಾ ಯೋಜನೆಯಡಿ ವಿಕಲಚೇತನರಿಗೆ ಕೆಲಸದ ಹೊರೆ ಕಡಿಮೆ ಮಾಡಬೇಕೆಂಬ ಉದ್ದೇಶದಿಂದ ಅವರ ಸಾಮರ್ಥ್ಯಕ್ಕೆ ಅನುಗುಣವಾಗಿ ತಾಪಂನಿಂದ ತೋಟಗಾರಿಕೆ ಇಲಾಖೆಯ ವ್ಯಾಪ್ತಿಯಲ್ಲಿನ ಒಂದು ಎಕರೆ ಸರ್ಕಾರಿ ಜಮೀನು ಹದಗೊಳಿಸಿ ತರಕಾರಿ ತೋಟ ನಿರ್ಮಿಸಲಾಗಿದೆ. ಆರಂಭಿಕ ಸಂಪೂರ್ಣ ವೆಚ್ಚವನ್ನು ತಾಪಂ ಭರಿಸಿದೆ. ಆದರೆ ತೋಟದಿಂದ ಬರುವ ಆದಾಯ ವಿಕಲಚೇತನರ ಕೈ ಸೇರಲಿದೆ. ನರೇಗಾದಡಿ ಸಣ್ಣಪುಟ್ಟ ಕೆಲಸ ನಿರ್ವಹಣೆಯನ್ನು ಅವರೇ ಮಾಡಿಕೊಳ್ಳಬೇಕಿದೆ. ಗ್ರಾಮದಲ್ಲೇ 12 ವಿಕಲಚೇತನರನ್ನು ಗುರುತಿಸಿದ್ದು, ಅವರಿಗಾಗಿಯೇ ಈ ಕೈತೋಟ ನಿರ್ಮಿಸಿ ಕೊಟ್ಟಿದೆ. ಅಲ್ಲದೇ, ವಿಚೇತನರಿಗಾಗಿಯೇ ಒಂದು ಸಂಘ ರಚಿಸಿದ್ದು, ಎನ್‌ಆರ್‌ಎಲ್‌ಎಂ ಮೂಲಕವೂ ಸರ್ಕಾರದಿಂದ ಸಾಲ ಸೌಲಭ್ಯ ಕಲ್ಪಿಸಲು ತಾಪಂ ಮುಂದಾಗಿದೆ. ಈಗಾಗಲೇ ವಿಕಲಚೇತನ ಮಹಿಳೆಯರು ಈ ಕೈತೋಟದಲ್ಲಿ ಆಸಕ್ತಿಯಿಂದ ಕೆಲಸ ಮಾಡುತ್ತಿದ್ದಾರೆ. ಪ್ರತಿನಿತ್ಯ ನೀರು ಹರಿಸುವುದು, ಗಿಡಗಳ ರಕ್ಷಣೆ ಮಾಡಿಕೊಳ್ಳುವುದು, ಅವುಗಳಿಗೆ ಬೇಕಾದ ಗೊಬ್ಬರ ಪೂರೈಸುವ ಕೆಲಸವನ್ನೂ ನೋಡಿಕೊಳ್ಳಬೇಕಿದೆ. ಮೇಲುಸ್ತುವಾರಿಯಾಗಿ ಗ್ರಾಪಂ, ತಾಪಂ ನಿಗಾ ವಹಿಸಲಿದೆ. ವಿಕಲಚೇತನರ ಯಾವುದೇ ವೆಚ್ಚವೂ ಇಲ್ಲಿ ಇರುವುದಿಲ್ಲ. ಆದಾಯ ಮಾತ್ರ ಇವರ ಕೈ ಸೇರಲಿದೆ. ಕೈತೋಟದಲ್ಲಿ ಕೆಲಸ ಮಾಡಿದರೆ ಆ ಕೂಲಿ ಹಣವೂ ವಿಕಲಚೇತನರ ಖಾತೆಗೆ ಜಮೆಯಾಗಲಿದೆ.

ಇದೊಂದು ಪೈಲೆಟ್‌ ಪ್ರೋಗ್ರಾಮ್‌: ನರೇಗಾದಡಿ ಈ ರೀತಿ ಸಾಮುದಾಯಿಕ ಗುಂಪಿಗೂ ಕೆಲಸ ನೀಡಲು ಅವಕಾಶವಿದೆ. ಆದರೆ ವಿಕಲಚೇತನ ವ್ಯಕ್ತಿಗಳು ದೂರದ ಸ್ಥಳಕ್ಕೆ ತೆರಳಿ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಸಾಮಾನ್ಯ ಜನರು ದೂರದ ಸ್ಥಳಕ್ಕೆ ಹೋಗಿ ಕೆಲಸ ಮಾಡಲು ಅವಕಾಶವಿರುತ್ತದೆ. ಹಾಗಾಗಿ ಇದೆಲ್ಲವನ್ನು ಅವಲೋಕಿಸಿ ಗಂಗಾವತಿ ತಾಪಂ ವಿಕಲಚೇತನರಿಗೆ ಪ್ರಾಯೋಗಿಕ ಯೋಜನೆ ಆರಂಭಿಸಿದೆ. ಬಹುಪಾಲು ಕೈತೋಟ ನಿರ್ಮಾಣವಾಗಿದೆ. ಅದರಿಂದ ತರಕಾರಿ ಇಳುವರಿ ಬರುವುದು ಬಾಕಿಯಿದೆ. ಆ ಆದಾಯವು ವಿಚೇತನರಿಗೆ ಬರಲಿದೆ. ಈ ಯೋಜನೆ ಯಶಸ್ವಿಯಾದರೆ ಜಿಲ್ಲಾದ್ಯಂತ ವಿವಿಧ ಗ್ರಾಪಂನಲ್ಲಿರುವ ವಿಕಲಚೇನರ ಸಂಖ್ಯೆಗೆ ಅನುಗುಣವಾಗಿ ವಿಸ್ತರಣೆ ಮಾಡಲು ಜಿಪಂ ಚಿಂತನೆ ನಡೆಸಿದೆ.

ವಡ್ಡರಟ್ಟಿ ಗ್ರಾಪಂನಲ್ಲಿ ನರೇಗಾದಡಿ ವಿಚೇತನರಿಗೆ ಸರ್ಕಾರಿ ಜಮೀನಿನಲ್ಲಿ ತರಕಾರಿ ಕೈತೋಟ ನಿರ್ಮಿಸಿಕೊಟ್ಟಿದ್ದೇವೆ. ಆರಂಭಿಕ ವೆಚ್ಚವನ್ನು ನಾವೇ ಭರಿಸಿದ್ದೇವೆ. ತರಕಾರಿ ಮಾರಾಟದಿಂದ ಬರುವ ಆದಾಯವನ್ನು ಅವರಿಗೆ ಸಂಪೂರ್ಣ ಸಿಗಲಿದೆ. ಮುಂದೆ ಬೀಜ ಸೇರಿ ಇತರೆ ವೆಚ್ಚವನ್ನು ಅವರು ನೋಡಿಕೊಳ್ಳಬೇಕಿದೆ. ವಿಚೇತನರ ಗುಂಪು ರಚಿಸಿ ಅವರಿಗೆ ವಿವಿಧ ಯೋಜನೆಗಳಡಿ ಸಾಲ ಸೌಲಭ್ಯ ಕಲ್ಪಿಸಲೂ ಯೋಜಿಸಿದ್ದೇವೆ.
-ಡಾ| ಮೋಹನ್‌, ಗಂಗಾವತಿ ತಾಪಂ ಇಒ

ಜಿಲ್ಲೆಯ ಗಂಗಾವತಿ ತಾಲೂಕಿನ ವಡ್ಡರಹಟ್ಟಿ ಗ್ರಾಪಂನಲ್ಲಿ ನರೇಗಾದಡಿ ವಿಕಲಚೇತನರಿಗಾಗಿಯೇ ವಿಶೇಷ ಯೋಜನೆ ರೂಪಿಸಿ ಅವರಿಗೆ ಪೌಷ್ಟಿಕ ಕೈತೋಟ ನಿರ್ಮಿಸಿ ಕೊಡಲಾಗಿದೆ. ವಿಚೇತನರು ಆಸಕ್ತಿಯಿಂದಲೇ ಕೈತೋಟ ನಿರ್ವಹಣೆ ಮಾಡುತ್ತಿದ್ದಾರೆ. ಅದರಿಂದ ಬರುವ ಆದಾಯವೂ ಅವರಿಗೆ ಸಿಗಲಿದೆ. ನರೇಗಾ ಕೂಲಿ ಹಣವು ಅವರಿಗೆ ಜಮೆಯಾಗಲಿದೆ. ಇದು ಪ್ರಾಯೋಗಿಕ ಯೋಜನೆಯಾಗಿದ್ದು, ಯಶಸ್ವಿಯಾದರೆ ಜಿಲ್ಲಾದ್ಯಂತ ವಿಚೇತನರಿಗೆ ವಿಸ್ತರಣೆ ಮಾಡಲು ಚಿಂತನೆ ನಡೆಸಿದ್ದೇವೆ.
-ಫೌಜಿಯಾ ತರನುಮ್‌, ಜಿಪಂ ಸಿಇಒ

-ದತ್ತು ಕಮ್ಮಾರ

ಟಾಪ್ ನ್ಯೂಸ್

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್‌ ಕಾಸ್ಟಿಂಗ್‌ ಜಾರಿಯಾಗಲಿ

ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್‌ ಕಾಸ್ಟಿಂಗ್‌ ಜಾರಿಯಾಗಲಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.