ಶುಕ್ರನಲ್ಲಿ ಪತ್ತೆಯಾಯಿತು ಜೀವಿಗಳ ರಾಸಾಯನಿಕ ಕುರುಹು!


Team Udayavani, Sep 15, 2020, 9:25 PM IST

ಶುಕ್ರ

ಮಣಿಪಾಲ: ಮಾನವನ ಕುತೂಹಲ ಮತ್ತು ಅಧ್ಯಯನದ ಹಸಿವಿಗೆ ಎಲ್ಲೆ ಉಂಟೆ? ಪ್ರತಿಯೊಂದು ವಸ್ತುವಿನ ಮೂಲದ ಕುರಿತು ಒಂದರೆಕ್ಷಣ ಚಿಂತೆ ಮಾಡದ ಜನ ಇರುವುದು ಬಹಳ ಅಪರೂಪ.
ಇದೀಗ ಅನ್ಯಗ್ರಹದಲ್ಲಿ ನಮ್ಮ ನಿಮ್ಮಂತೆ ಜೀವಿಸುವವರು ಇರಬಹುದೇ ಎಂಬ ಅನುಮಾನ ಕುತೂಹಲದ ಸ್ವರೂಪವನ್ನು ಪಡೆದಿದ್ದಾಗಿದೆ. ಉತ್ತರದ ಹುಡುಗಾಟಕ್ಕೆ ವಿಜ್ಞಾನದ ಮೊರೆ ಹೋಗಲಾಗಿದೆ. ಭೂಮಿಯನ್ನು ಹೊರತುಪಡಿಸಿ ಬೇರೆ ಯಾವುದೇ ಗ್ರಹದಲ್ಲಿ ಜೀವಿ ಇದೆಯೇ ಅಥವಾ ಇಲ್ಲವೇ ಎಂಬ ಪ್ರಶ್ನೆಗೆ ಉತ್ತರವನ್ನು ಶತಮಾನಗಳಿಂದ ಪರಿಶೋಧಿಸಲಾಗುತ್ತಿದೆ. ಈ ಕುರಿತಂತೆ ಹಲವಾರು ಅಧ್ಯಯನಗಳು ನಡೆಯುತ್ತಿದ್ದು ಈ ಸರಣಿಯಲ್ಲಿ, ಶುಕ್ರ ವಾತಾವರಣದಲ್ಲಿ ಫಾಸ್ಫೈನ್ ಅನಿಲ ಕಂಡುಬಂದಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಇದು ಜೈವಿಕ ಪ್ರಕ್ರಿಯೆಯಿಂದ ಮಾತ್ರ ಉದ್ಭವಿಸುತ್ತದೆ ಎಂದು ವಿಜ್ಞಾನ ಹೇಳಿದೆ.

ಈ ಆವಿಷ್ಕಾರವು ವಿಶ್ವದಲ್ಲಿ ಅನ್ಯಲೋಕದ ಸಾಧ್ಯತೆಯನ್ನು ಪುನರುಜ್ಜೀವನಗೊಳಿಸಿದೆ. ನಾಸಾ ಮುಖ್ಯಸ್ಥರು ಭೂಮಿಯನ್ನು ಮೀರಿದ ಜೀವಿಗಳ ಹುಡುಕಾಟದಲ್ಲಿ ಈ ಸಂಶೋಧನೆಯನ್ನು “ಇದುವರೆಗಿನ ಪ್ರಮುಖ ಆವಿಷ್ಕಾರ’ ಎಂದು ಬಣ್ಣಿಸಿದ್ದಾರೆ.

ಶುಕ್ರ ಗ್ರಹದಲ್ಲಿ ವಿಜ್ಞಾನಿಗಳು ಏನು ಕಂಡುಕೊಂಡಿದ್ದಾರೆ?
ನೇಚರ್‌ ಆಸ್ಟ್ರೋನಮಿಯಲ್ಲಿ ಪ್ರಕಟವಾದ ಆವಿಷ್ಕಾರದಲ್ಲಿ ಶುಕ್ರ ವಾತಾವರಣದಲ್ಲಿ ಆಮ್ಲೀಯ ಮೋಡಗಳಲ್ಲಿ ಫಾಸ್ಫೈನ್ ಎಂಬ ಅನಿಲ ಕಂಡುಬಂದಿದೆ ಎಂದು ಸಂಶೋಧಕರು ಹೇಳಿದ್ದಾರೆ. ಭೂಮಿಯ ಮೇಲಿನ ಫಾಸ್ಫೈನ್‌ ಆಮ್ಲಜನಕವಿಲ್ಲದೆ ಬದುಕಬಲ್ಲ ಸೂಕ್ಷ್ಮಜೀವಿಗಳಿಂದ ಕೂಡಿದೆ. ಇದು ಕೈಗಾರಿಕಾ ಪ್ರಕ್ರಿಯೆಗಳಲ್ಲಿ ಹುಟ್ಟುವ ಅನಿಲವಾಗಿದೆ.

ಹವಾಯಿಯ ಜೇಮ್ಸ್ ಕ್ಲರ್ಕ್‌ ಮ್ಯಾಕ್ಸ್‌ವೆಲ್‌ ಟೆಲಿಸ್ಕೋಪ್‌ನ ಉಪ ನಿರ್ದೇಶಕಿ ಜೆಸ್ಸಿಕಾ ಡೆಂಪ್ಸೆ ಈ ಅನಿಲವನ್ನು ಕಂಡುಹಿಡಿದಿದ್ದಾರೆ. ಈ ಅನಿಲವು ಜೌಗು ಮತ್ತು ಕೊಳೆಯುವ ವಸ್ತುಗಳ ಮೇಲೆ ಕಂಡುಬರುತ್ತದೆ. ಸೂಕ್ಷ್ಮಜೀವಿಗಳಂತಹ ಆಮ್ಲಜನಕರಹಿತ ಜೀವನವು ನಮ್ಮ ಗಾಳಿಯಿಂದ ಹೊರಬಂದು ಮೋಡಗಳ ಮೇಲೆ ಹೆಪ್ಪುಗಟ್ಟುತ್ತದೆ ಎಂದು ಅವರು ಹೇಳಿದರು.

ಗುರು ಮತ್ತು ಶನಿ ಗ್ರಹಗಳ ವಾಯು ಮಂಡಲದಲ್ಲಿಯೂ ಫಾಸ್ಫೈನ್ಫಾ ಕಂಡುಬರುತ್ತದೆ. ಆದರೆ ಅವುಗಳಿಗೆ ಕಾರಣವಾಗುವ ಕೆಲವು ರಾಸಾಯನಿಕ ಪ್ರಕ್ರಿಯೆಗಳಿವೆ. ಈ ಪ್ರಕ್ರಿಯೆಗಳು ಭೂಮಿಯ ಮೇಲೆ ಅಥವಾ ಶುಕ್ರದಲ್ಲಿ ಸಾಮಾನ್ಯವಾಗಿ ಕಂಡು ಬರಲು ಸಾಧ್ಯವಿಲ್ಲ. ಈ ಕಾರಣಕ್ಕಾಗಿ ಇದು ಜೀವನದ ಸಂಕೇತವಾಗಬಹುದು ಎಂದು ವಿಜ್ಞಾನಿಗಳು ಭಾವಿಸುತ್ತಾರೆ.

ಇಂತಹ ರಾಸಾಯನಿಕ ಕ್ರಿಯೆ ಕಂಡುಬರಲು ಸ್ಪಷ್ಟವಾದ ಕಾರಣಗಳನ್ನು ನೀಡುವುದು ಕಷ್ಟವಾಗಿದೆ. ಅಲ್ಲಿ ಜೀವಂತ ಸೂಕ್ಷ¾ಜೀವಿಗಳು ಇರಬಹುದು. ಆದರೆ ಅದು ಶುಕ್ರ ಗ್ರಹದಲ್ಲಿರಲು ಸಾಧ್ಯವಿಲ್ಲ. ಬದಲಾಗಿ ಅಲ್ಲಿರುವ ಮೋಡಗಳ ಮೇಲಿರುವ ಸಾಧ್ಯತೆ ಇದೆ. ಈ ವರೆಗಿನ ಅಧ್ಯಯನದಲ್ಲಿ ಕಂಡುಕೊಳ್ಳಲಾದ ಅಂಶದಂತೆ ಶುಕ್ರನ ಮೇಲ್ಮೆ„ ಯಾವುದೇ ಜೀವಕ್ಕೆ ಅನುಕೂಲಕರವಾಗಿಲ್ಲ. ಈ ಅನಿಲ ಕಂಡುಬಂದ ಮೋಡಗಳಲ್ಲಿನ ತಾಪಮಾನವು 30 ಡಿಗ್ರಿ ಸೆಲ್ಸಿಯಸ್‌ ಆಗಿತ್ತು.

ರಿವರ್ಸೆçಡ್‌ನ‌ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಪ್ಲೆನರಿ ವಿಜ್ಞಾನಿ ಸ್ಟೀಫ‌ನ್‌ ಕೇನ್‌, ಭೂಮಿಯ ಮೇಲಿನ ಜೈವಿಕ ಪ್ರಕ್ರಿಯೆಗಳಿಂದ ಫಾಸ್ಫೈನ್‌ ರೂಪುಗೊಳ್ಳುವುದನ್ನು ನಾವು ನೋಡಿಲ್ಲ. ನಮಗೆ ಭೌಗೋಳಿಕ ಕಾರಣವೂ ತಿಳಿದಿಲ್ಲ. ಆದರೆ ಇದು ಎಲ್ಲೆಡೆ ನಡೆಯುತ್ತದೆ ಎಂದು ಹೇಳಲಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಫಾಸ್ಫೈನ್‌ ಅನಿಲ ಇದ್ದಾಗ ಜೀವನ ಹೇಗಿರುತ್ತದೆ?
ಶುಕ್ರ ಗ್ರಹದಲ್ಲಿ ಜೀವರಾಶಿ ಕಂಡುಬರದಿದ್ದರೆ, ಫಾಸ್ಫೈನ್‌ ಅನಿಲವು ಇರಲು ಸಂಪೂರ್ಣವಾಗಿ ವಿಭಿನ್ನ ಕಾರಣವಿರುತ್ತದೆ. ಭೂಮಿಯಂತೆ ಅಲ್ಲ. ಆದಾಗ್ಯೂ ಅಲ್ಲಿ ಕಂಡುಬರುವ ಸೂಕ್ಷ್ಮ ಜೀವಿಗಳು ಭೂಮಿಯ ಮೇಲಿನ ವಿಪರೀತ ಪರಿಸ್ಥಿತಿಗಳಲ್ಲಿ ಕಂಡುಬರುತ್ತವೆ.
ಶುಕ್ರದಲ್ಲಿನ ಮೋಡಗಳು 90 ಪ್ರತಿಶತ ಆಮ್ಲೀಯವಾಗಿವೆ. ಅಂತಾರಾಷ್ಟ್ರೀಯ ಸಂಶೋಧನ ತಂಡದ ನೇತೃತ್ವ ವಹಿಸಿದ್ದ ಪ್ರೊಫೆಸರ್‌ ಜೀನ್‌ ಗ್ರೀವ್ಸ್‌, ಅಲ್ಲಿ ಒಂದು ಜೀವನ ಅಸ್ತಿತ್ವದಲ್ಲಿದ್ದರೆ, ಅದರ ಮೇಲೆ ಪ್ರಯೋಗ ಮಾಡಲು ಸುಲಭವಾದ ಮಾರ್ಗವಿಲ್ಲ ಎಂದು ಹೇಳಿದರು.

ಆವಿಷ್ಕಾರದ ಬಗ್ಗೆ ಉತ್ಸುಕರಾಗಲು ಕಾರಣವೇನು?
ನಾಸಾ ಮುಖ್ಯಸ್ಥರು ಈ ಆವಿಷ್ಕಾರವನ್ನು ಭೂಮಿಯ ಆಚೆಗಿನ ಜೀವನದ ಹುಡುಕಾಟದಲ್ಲಿ ದೊಡ್ಡ ಸಾಧನೆ ಎಂದು ಬಣ್ಣಿಸಿದ್ದಾರೆ. ಫಾಸ್ಫೈನ್  ಶುಕ್ರ ವಾತಾವರಣದಲ್ಲಿ ಕಂಡುಬರುವುದು ಮತ್ತು ಅದರಿಂದ ಜೀವನದ ಚಿಹ್ನೆಗಳನ್ನು ಪಡೆಯುವುದು ಬಹಳ ಸಂಕೀರ್ಣವಾದ ಪ್ರಕರಣವಾಗಿದೆ. ಇದು ಜೀವನದ ಲಕ್ಷಣವಾಗಿದ್ದರೆ, ಅದರ ಸುತ್ತಲಿನ ಜೀವನದ ಅಸ್ತಿತ್ವವನ್ನು ಸೂಚಿಸುವ ಇತರ ರಾಸಾಯನಿಕಗಳ ಚಿಹ್ನೆಗಳು ಇರಬೇಕು. ಇದೀಗ ಅದಕ್ಕಾಗಿ ಹುಡುಗಾಟ ನಡೆಸಲಾಗುತ್ತದೆ.

ಇಲ್ಲಿಯವರೆಗೆ ಯಾರೂ ಇಂತಹ ಫ‌ಲಿತಾಂಶವನ್ನು ಪಡೆಯಲು ಸಾಧ್ಯವಾಗಿಲ್ಲ. ಇದಕ್ಕಾಗಿ ನಾವು ಬಾಹ್ಯಾಕಾಶ ನೌಕೆಯನ್ನು ಕಳುಹಿಸಬೇಕಾಗಿದೆ. ಮಾದರಿಗಳನ್ನು ಸಂಗ್ರಹಿಸಬೇಕಾಗುತ್ತದೆ. ಆಗ ಮಾತ್ರ ಜೀವಿ ಯಾವುದೇ ರೂಪದಲ್ಲಿ ಅಸ್ತಿತ್ವದಲ್ಲಿದೆಯೋ ಇಲ್ಲವೋ ಎಂಬುದನ್ನು ತಿಳಿಯಬಹುದಾಗಿದೆ.

ಮುಂದಿನ ದಶಕದಲ್ಲಿ ಎರಡು ಆವಿಷ್ಕಾರ ಕಾರ್ಯಾಚರಣೆಗಳು ಮತ್ತು ಶುಕ್ರ ಗ್ರಹಕ್ಕೆ ಕಳುಹಿಸಬೇಕಾದ ಪ್ರಮುಖ ಮಿಷನ್‌ ಪ್ರಸ್ತಾವಗಳನ್ನು ನಾಸಾ ಅನುಮೋದಿಸಿದೆ. ಪ್ರಮುಖ ಕಾರ್ಯಾಚರಣೆಯಲ್ಲಿ ಆರ್ಬಿಟರ್‌ ಬಳಸಿ ಶುಕ್ರದಲ್ಲಿ ಶೋಧ ನಡೆಯಲಿದೆ. ಈ ಆರ್ಬಿಟರ್‌ ಟೆಫ್ಲಾನ್‌-ಲೇಪಿತ ಬಲೂನ್‌,  ಗ್ಲೆçಡರ್‌ ಮತ್ತು ಲ್ಯಾಂಡರ್‌ ಆಗಿರುತ್ತದೆ. ಎರಡೂ ಕಾರ್ಯಾಚರಣೆಗಳಲ್ಲಿ, ಫಾಸ್ಫೈನ್‌ ಮತ್ತು ರಂಜಕದ ಆಮ್ಲವನ್ನು ಸಹ ಹುಡುಕಲಾಗುತ್ತದೆ. ಇದು ಅನಿಲವು ಜೈವಿಕೇತರ ಪ್ರಕ್ರಿಯೆಯಿಂದ ಹುಟ್ಟಿಕೊಂಡಿದೆ ಎಂಬುದನ್ನು ತೋರಿಸುತ್ತದೆ.

ಟಾಪ್ ನ್ಯೂಸ್

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ

Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.