Shramadana: ಪ್ರಧಾನಿ ಮೋದಿ “ಶ್ರಮದಾನ”ದ ಕರೆಗೆ ದೇಶವಾಸಿಗಳ ಸ್ಪಂದನೆ

ದೇಶಾದ್ಯಂತ ಸ್ವತ್ಛತಾ ಅಭಿಯಾನ; ಸಾವಿರಾರು ಮಂದಿ ಭಾಗಿ

Team Udayavani, Oct 1, 2023, 11:05 PM IST

modi clean

ಹೊಸದಿಲ್ಲಿ: ಮಹಾತ್ಮ ಗಾಂಧಿಯವರ “ಸ್ವಚ್ಛತೆ’ಯ ಆಶಯಕ್ಕೆ ಅನುಗುಣವಾಗಿ ಗಾಂಧಿ ಜಯಂತಿಯ ಮುನ್ನಾ ದಿನವಾದ ಭಾನುವಾರ “ಶ್ರಮದಾನ’ ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿಯವರು ನೀಡಿದ್ದ ಕರೆಗೆ ದೇಶವಾಸಿ ಗಳಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ವಿದ್ಯಾರ್ಥಿಗಳಿಂದ ಹಿಡಿದು ರಾಜಕಾರಣಿಗ ಳವರೆಗೆ ಎಲ್ಲ ಕ್ಷೇತ್ರಗಳ ಜನರೂ “ಸ್ವತ್ಛತೆಯೇ ಸೇವೆ’ ಅಭಿಯಾನದಲ್ಲಿ ಪಾಲ್ಗೊಂಡಿದ್ದು ಕಂಡು ಬಂತು. ಪ್ರಧಾನಿ ಮೋದಿಯವರೇ ಸ್ವತಃ ಕಸಬರಿಕೆ ಹಿಡಿದು ಸ್ವತ್ಛತಾ ಕಾರ್ಯದಲ್ಲಿ ಭಾಗಿಯಾದರು. ಅವರ ನೇತೃತ್ವದಲ್ಲಿ ದೇಶವ್ಯಾಪಿ ಸಾವಿರಾರು ಮಂದಿ ಬೆಳಗ್ಗೆ 10ರಿಂದ ಒಂದು ಗಂಟೆ ಕಾಲ ನಡೆದ ಈ ಅಭಿಯಾನದಲ್ಲಿ ಕೈಜೋಡಿಸಿದರು.
ಮೋದಿಯವರು ದೆಹಲಿಯಲ್ಲಿ ಫಿಟೆ°ಸ್‌ ಇನ್‌ಫ್ಯೂಯೆನ್ಸರ್‌ ಅಂಕಿತ್‌ ಬೈಯಾನ್‌ಪುರಿಯಾ ಅವ ರೊಂದಿಗೆ ಶ್ರಮದಾನ ಮಾಡಿದ್ದು, ಅದರ 4 ನಿಮಿಷಗಳ ವಿಡಿಯೋವನ್ನು ಎಕ್ಸ್‌(ಟ್ವಿಟರ್‌)ನಲ್ಲಿ ಅಪ್‌ಲೋಡ್‌ ಮಾಡಿದ್ದಾರೆ. ಜತೆಗೆ, “ಇಂದು ಭಾರತವು ಸ್ವತ್ಛತೆಯ ಕಡೆಗೆ ಗಮನ ಹರಿಸುತ್ತಿದ್ದರೆ, ನಾನು ಮತ್ತು ಅಂಕಿತ್‌ ಕೂಡ ಅದೇ ಕೆಲಸವನ್ನು ಮಾಡು ತ್ತಿದ್ದೇವೆ. ನೈರ್ಮಲ್ಯದ ಜೊತೆಗೆ ಫಿಟೆ°ಸ್‌ ಮತ್ತು ಕ್ಷೇಮವನ್ನೂ ಸಮ್ಮಿಳಿತಗೊಳಿಸಿದ್ದೇವೆ. ಒಟ್ಟಾರೆಯಾಗಿ ಇದು ಸ್ವತ್ಛ ಮತ್ತು ಸ್ವಸ್ಥ ಭಾರತದ ಸೂಚಕ’ ಎಂದು ಮೋದಿ ಬರೆದುಕೊಂಡಿದ್ದಾರೆ.

ಹಲವು ಸಚಿವರು, ಬಿಜೆಪಿ ನಾಯಕರು ಭಾಗಿ: ಪ್ರಧಾನಿ ಮೋದಿ ಮಾತ್ರವಲ್ಲದೇ ಕೇಂದ್ರದ ಹಲವು ಸಚಿವರು, ಬಿಜೆಪಿ ನಾಯಕರು ಕೂಡ ದೇಶದ ವಿವಿಧ ಭಾಗ ಗಳಲ್ಲಿ ಶ್ರಮದಾನ ಮಾಡುವ ಮೂಲಕ ಅಭಿಯಾನದೊಂದಿಗೆ ಕೈಜೋಡಿಸಿದ್ದಾರೆ. ಗೃಹ ಸಚಿವ ಅಮಿತ್‌ ಶಾ ಅವರು ಅಹಮದಾಬಾದ್‌ನಲ್ಲಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ದೆಹಲಿಯಲ್ಲಿ, ಸಿಎಂಗಳಾದ ಯೋಗಿ ಆದಿತ್ಯನಾಥ್‌, ಹಿಮಾಂತ ಬಿಸ್ವಾ ಶರ್ಮಾ, ಭೂಪೇಂದ್ರ ಪಟೇಲ್‌, ಕೇಂದ್ರ ಸಚಿವರಾದ ಆರ್‌.ಕೆ.ಸಿಂಗ್‌, ಸ್ಮತಿ ಇರಾನಿ, ಹರ್‌ದೀಪ್‌ ಸಿಂಗ್‌ ಪುರಿ, ಅನುರಾಗ್‌ ಠಾಕೂರ್‌, ವಾಯುಪಡೆ ಮುಖ್ಯಸ್ಥ ಏರ್‌ ಚೀಫ್ ಮಾರ್ಷಲ್‌ ವಿ.ಆರ್‌. ಚೌಧರಿ ಸೇರಿದಂತೆ ಅನೇಕ ಗಣ್ಯರು ಸ್ವತಃ ಪೊರಕೆ ಹಿಡಿದು ಸ್ವತ್ಛತಾ ಕಾರ್ಯ ಮಾಡಿದ್ದಾರೆ.

9.20 ಲಕ್ಷ ಕಡೆ ಅಭಿಯಾನ: 22 ಸಾವಿರ ಮಾರುಕಟ್ಟೆಗಳು, 10 ಸಾವಿರ ಜಲ ಮೂಲಗಳು, 7 ಸಾವಿರ ಬಸ್‌ ನಿಲ್ದಾಣಗಳು ಮತ್ತು ಟೋಲ್‌ ಪ್ಲಾಜಾಗಳು, 1 ಸಾವಿರ ಗೋಶಾಲೆಗಳು, 300 ಪ್ರಾಣಿ ಸಂಗ್ರಹಾಲಯಗಳು ಸೇರಿದಂತೆ ದೇಶದ ಮೂಲೆ ಮೂಲೆಗಳಲ್ಲೂ ವಿವಿಧ ಸ್ವಸಹಾಯ ಸಂಘಗಳು, ಎನ್‌ಜಿಒಗಳು, ವ್ಯಾಪಾರಿ ಒಕ್ಕೂಟಗಳು, ಖಾಸಗಿ ಸಂಸ್ಥೆಗಳು, ವಿದ್ಯಾರ್ಥಿಗಳು ಅಭಿಯಾನದಲ್ಲಿ ಪಾಲ್ಗೊಂಡಿದ್ದು, ದೇಶದ 9.20 ಲಕ್ಷಕ್ಕೂ ಅಧಿಕ ಸ್ಥಳಗಳಲ್ಲಿ ಈ ಮೆಗಾ ಅಭಿಯಾನ ನಡೆದಿದೆ ಎಂದು ಕೇಂದ್ರ ಗೃಹ ಮತ್ತು ನಗರಾಭಿವೃದ್ಧಿ ಸಚಿವಾಲಯ ಮಾಹಿತಿ ನೀಡಿದೆ.

ನಿದ್ದೆ, ಆಹಾರದಲ್ಲಿ ನಾನು ಶಿಸ್ತು ಪಾಲಿಸಬೇಕಿದೆ: ಮೋದಿ
“ರಾಮ್‌ ರಾಮ್‌ ಸರೇಯಾ ನೆ’ ಖ್ಯಾತಿಯ ಫಿಟ್ನೆಸ್‌ ಇನ್‌ಫ್ಲೂಯೆನ್ಸರ್‌ ಅಂಕಿತ್‌ ಬೈಯಾನ್‌ಪುರಿಯಾ ಅವರೊಂದಿಗೆ ಶ್ರಮದಾನದಲ್ಲಿ ತೊಡಗುತ್ತಲೇ ಮೋದಿಯವರು ಅಂಕಿತ್‌ರನ್ನು ಮಾತಿಗೆಳೆದರು. “ನೀವು ದೈಹಿಕ ವ್ಯಾಯಾಮಕ್ಕೆ ಎಷ್ಟು ಸಮಯ ಮೀಸಲಿಡುತ್ತೀರಿ’ ಎಂದು ಮೋದಿ ಪ್ರಶ್ನಿಸಿದಾಗ, ಅಂಕಿತ್‌ ಅವರು “ದಿನದಲ್ಲಿ 4-5 ಗಂಟೆ’ ಎಂದು ಉತ್ತರಿಸುತ್ತಾರೆ. ಜತೆಗೆ, ಪ್ರಧಾನಿ ಮೋದಿಯವರ ಫಿಟೆ°ಸ್‌ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಆಗ ಪ್ರತಿಕ್ರಿಯಿಸಿದ ಮೋದಿ, “ನಾನು ಹೆಚ್ಚೇನೂ ವ್ಯಾಯಾಮ ಮಾಡುವುದಿಲ್ಲ. ಆದರೆ, ಶಿಸ್ತು ಪಾಲಿಸುತ್ತೇನೆ’ ಎನ್ನುತ್ತಲೇ, “ಎರಡು ವಿಷಯಗಳಲ್ಲಿ ಮಾತ್ರ ನನಗೆ ಶಿಸ್ತು ಪಾಲಿಸಲು ಆಗುತ್ತಿಲ್ಲ. ಒಂದು ಆಹಾರ ಸೇವನೆಯ ಸಮಯ, ಎರಡನೆಯದ್ದು ನಿದ್ರಿಸುವ ಸಮಯ. ಸ್ವಲ್ಪ ಹೆಚ್ಚು ಸಮಯವನ್ನು ನಿದ್ರೆಗೆ ಮೀಸಲಿಡಬೇಕೆಂದು ಯೋಚಿಸುತ್ತೇನಾದರೂ, ಅದು ಸಾಧ್ಯವಾಗುತ್ತಿಲ್ಲ’ ಎನ್ನುತ್ತಾರೆ.

 

ಟಾಪ್ ನ್ಯೂಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 29  ಮಂದಿಗೆ ಗಾಯ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

1-wqe-qweq

Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

Mahadev Betting App Case; Actor Sahil Khan arrested by Mumbai police

Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

1-weqqeqw

Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 29  ಮಂದಿಗೆ ಗಾಯ

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.