ಶ್ರೀ ಕೃಷ್ಣ ಶರ್ಮ ಅವರ ವಿನೂತನ ಪ್ರಯತ್ನ ಪುಟ್ಟಣ್ಣ


Team Udayavani, Jul 9, 2020, 3:26 PM IST

ಶ್ರೀ ಕೃಷ್ಣ ಶರ್ಮ ಅವರ ವಿನೂತನ ಪ್ರಯತ್ನ ಪುಟ್ಟಣ್ಣ

“ಪುಟ್ಟಣ್ಣ”; ಪ್ರಯೋಗಾತ್ಮಕ ಮತ್ತು ಅಸಂಗತ ವಿಷಯವನ್ನು ಆದರಿಸಿ ನಿರ್ಮಿಸಲ್ಪಟ್ಟ ಚಿತ್ರ. ಇನ್ನೊಂದು ಆಯಾಮದಲ್ಲಿ ಹೇಳುವುದಾದರೆ “ಕಂಡದ್ದು ಸತ್ಯ”, ಎನ್ನುವ ತರ್ಕದ ಮೇಲೆ ನಿಂತಿರುವ ಕಿರು ಚಿತ್ರವು ಹೌದು.

ಈ ಕಿರು ಚಲನಚಿತ್ರದ ನಿರ್ಮಾಣ ಹಾಗು ನಿರ್ದೇಶನವನ್ನು ಶ್ರೀಕೃಷ್ಣ ಶರ್ಮಾ ಅವರು ಮಾಡಿದ್ದಾರೆ; ಇವರು “ಒಂದಲ್ಲ ಎರಡಲ್ಲ” ಹಾಗೂ “ಬಡವ ರಾಸ್ಕಲ್” ಚಲಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಹಾಗೂ ನಟನಾಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ.

ಇನ್ನು ಅಭಿನಯಕ್ಕೆ ಬರುವುದಾದರೆ; ತುಳು ಚಲಚಿತ್ರಗಳಾದ “ಎನ್ನಾ”, “ರಂಬಾರೊಟ್ಟಿ” ಮತ್ತು ಕನ್ನಡ ಚಿತ್ರಗಳಾದ “ಒಂದು ಮೊಟ್ಟೆಯ ಕಥೆ” , “ಬೀರ್ ಬಲ್” ಮುಂತಾದ ಉತ್ತಮ ಚಲನಚಿತ್ರಗಳಲ್ಲಿ ಅತ್ಯತ್ತಮ ರೀತಿಯಲ್ಲಿ ಅಭಿನಯಿಸಿದ
ವಿ ಜೆ ವಿನೀತ್ ಅವರು ಈ ಚಿತ್ರದಲ್ಲಿ ಮುಖ್ಯ ಪಾತ್ರವನ್ನು ನಿರ್ವಹಿಸಿರುವುದು ಈ ಕಿರುಚಿತ್ರದ ಮತ್ತೊಂದು ವಿಶೇಷ.

ಈ ಕಿರುಚಿತ್ರದ ಆಡಿಯೋ ಹಕ್ಕನ್ನು ಕನ್ನಡದ ಪ್ರಖ್ಯಾತ ಆಡಿಯೋ ಕಂಪೆನಿ “ಆನಂದ್ ಆಡಿಯೋಸ್” ನವರು ಈಗಾಗಲೇ ಖರೀದಿಸಿದ್ದು, ಇದರ ರಿಮೇಕ್ ಹಕ್ಕನ್ನು ಕೊಳ್ಳಲು ಮಲಯಾಳಂ ನ ಕೆಲ ಚಿತ್ರ ನಿರ್ದೇಶಕರು ಕೊಂಡುಕೊಳ್ಳಲು ಕಾತರರಾಗಿರುವುದು ಈ ಕಿರುಚಿತ್ರದ ಇನ್ನೊಂದು ವಿಶೇಷ. ಹಾಗೂ ಈ ಚಿತ್ರದ ಮುಂದುವರಿದ ಭಾಗದೊಂದಿಗೆ ಮಳೆಯಾಳಂ ನಲ್ಲಿ ಬರುವ ಸಾಧ್ಯತೆ ಇದೆ.

ಇನ್ನು ಹಲವಾರು ತುಳು ಚಿತ್ರಗಳಿಗೆ ಸಂಗೀತ ನಿರ್ದೇಶಕರಾಗಿ ಕಾರ್ಯನಿರ್ವಹಿಸಿರುವ ಕಿಶೋರ್ ಶೆಟ್ಟಿ ಯವರು ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ ಮತ್ತು ಎಡಿಟಿಂಗ್ ಕಾರ್ಯವನ್ನು ಅನ್ನು ನವೀನ್ ಶೆಟ್ಟಿ ಯವರು ನಿರ್ವಹಿಸಿದ್ದಾರೆ. ಇಷ್ಟೇ ಅಲ್ಲದೆ ” ವಿ.ಎಫ್.ಏಕ್ಸ್ ” ನಲ್ಲಿ ವಿಜೇತ್ ಕುಮಾರ್ ಮತ್ತು ಸೌಂಡ್ ಎಫೆಕ್ಟ್ ಹಾಗು ಮಿಕ್ಸಿಂಗ್ ನಲ್ಲಿ ಸುಹಿತ್ ಬಂಗೇರ ಹಾಗು ಡ್ಯಾನಿಯಲ್ ಕಾರ್ಯ ನಿರ್ವಹಿಸಿದ್ದಾರೆ. ಇನ್ನು ಪೋಸ್ಟರ್ ಡಿಸೈನಿಂಗ್ ಅನ್ನು GOD company ಅವರು ಮಾಡಿದ್ದಾರೆ.

ಇನ್ನು ಚಿತ್ರದ ಕಥೆ ಹಾಗು ಸಂಭಾಷಣೆಯನ್ನು; ರಂಗಾಯಣದಲ್ಲಿ ನಾಟಕ ಕಲೆ ವಿಷಯದಲ್ಲಿ ಪದವಿ ಪಡೆದಿರುವ ಹಾಗು ಪ್ರಸ್ತತ ಪ್ರಯೋಗಾತ್ಮಕ ಬರಹದಲ್ಲಿ ತೊಡಗಿಸಿಕೊಂಡಿರುವ ಉದಯಪ್ರಸಾದ್.ಎನ್.ಜೆ ಅವರು ಬರೆದಿದ್ದಾರೆ.

ಇನ್ನು ನಟನೆಯ ವಿಭಾಗದಲ್ಲಿ ವಿ.ಜೆ ವಿನೀತ್ ಅವರೊಂದಿಗೆ “ಸಾ.ಹಿ.ಪ್ರಾ.ಕಾಸರಗೋಡು”, “ಒಂದು ಮೊಟ್ಟೆಯ ಕಥೆ” ಮೊದಲಾದ ಚಲನ ಚಿತ್ರಗಳಲ್ಲಿ ಅಭಿನಯಿಸಿರುವ ” ವಿಶ್ವನಾಥ್ ಅಸೈಗೊಳಿ” ಅವರು ಸಹ ಈ ಕಿರುಚಿತ್ರದಲ್ಲಿ ತಮ್ಮ ಪಾತ್ರ ನಿರ್ವಹಿಸಿದ್ದಾರೆ. ಇನ್ನುಳಿದಂತೆ ಉದಯಪ್ರಸಾದ್, ಆತ್ಮಿಕ್ ಕೃಷ್ಣ, ಶಶಿಪ್ರಭ, ವಿವೇಕಾನಂದ ಅವರುಗಳು ಸಹ ತಮ್ಮ ಪಾತ್ರವನ್ನು ಉತ್ತಮ ರೀತಿಯಿಂದ ನಿರ್ವಹಿಸಿದ್ದಾರೆ.

ಇನ್ನುಳಿದಂತೆ ಛಾಯಾಗ್ರಹಣ ವಿಭಾಗದಲ್ಲಿ ಮನು ಹೊಳ್ಳ, ವರುಣ್ ಕೃಷ್ಣ, ಪವನ್ ಭಟ್ ಹಾಗು ಧೀರಜ್ ಇವರುಗಳು ಸಹ ಉತ್ತಮ ರೀತಿಯಿಂದ ಕಾರ್ಯನಿರ್ವಹಿಸಿದ್ದಾರೆ.

ಒಟ್ಟಿನಲ್ಲಿ ಹೇಳುವುದಾದರೆ “ಪುಟ್ಟಣ್ಣ” ಈ ಒಂದು ಅದ್ಬುತ ತಂಡದಿಂದ ಮೂಡಿ ಬಂದ ಒಂದು ವಿಶಿಷ್ಟ ಚಿತ್ರ. ಈ ಕಿರುಚಿತ್ರ ನೋಡುಗರನ್ನು ರಂಜಿಸಲು ಶೀಘ್ರವಾಗಿ ಎಲ್ಲರ ಮುಂದೆ ಬರಲಿದೆ. ಈಗಾಗಲೇ ಇದರ ಮೊದಲ ಪೋಸ್ಟರ್ ಬಿಡುಗಡೆಯಾಗಿದ್ದು, ಕನ್ನಡ ಚಿತ್ರರಂಗದ ಹೆಸರಾಂತ ಸಂಗೀತ ನಿರ್ದೇಶಕರಾದ ವಾಸುಕಿ ವೈಭವ್ ‘ರವರು ಬಿಡುಗಡೆಗೊಳಿಸಿದರು . ಶೀಘ್ರದಲ್ಲೇ ಬಿಡುಗಡೆ ದಿನಾಂಕ ಶೀಘ್ರದಲ್ಲೇ ಪ್ರಕಟ ಗೊಳ್ಳಲಿದೆ .

ಟಾಪ್ ನ್ಯೂಸ್

Haveri; ಕಾಗಿನೆಲೆ ಗುರುಪೀಠಕ್ಕೆ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಭೇಟಿ

Haveri; ಕಾಗಿನೆಲೆ ಗುರುಪೀಠಕ್ಕೆ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಭೇಟಿ

T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್20

T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್

Kollywood: ಕಮಲ್‌ ಹಾಸನ್‌ ʼಥಗ್‌ ಲೈಫ್‌ʼ ಅಖಾಡಕ್ಕೆ ಬಾಲಿವುಡ್‌ನ ಖ್ಯಾತ ನಟರು ಎಂಟ್ರಿ?

Kollywood: ಕಮಲ್‌ ಹಾಸನ್‌ ʼಥಗ್‌ ಲೈಫ್‌ʼ ಅಖಾಡಕ್ಕೆ ಬಾಲಿವುಡ್‌ನ ಖ್ಯಾತ ನಟರು ಎಂಟ್ರಿ?

Hubli; ಕುಮಾರಸ್ವಾಮಿ ಎದುರೇ ಕಾಂಗ್ರೆಸ್ – ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ

Hubli; ಕುಮಾರಸ್ವಾಮಿ ಎದುರೇ ಕಾಂಗ್ರೆಸ್ – ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ

Mangaluru ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿನ್ನು ಮೌನ! ಇಲ್ಲಿದೆ ಕಾರಣ

Mangaluru ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿನ್ನು ಮೌನ! ಇಲ್ಲಿದೆ ಕಾರಣ

T20 ವಿಶ್ವಕಪ್‌ ಇಂಗ್ಲೆಂಡ್‌ ತಂಡ ಪ್ರಕಟ: ವರ್ಷದ ಬಳಿಕ ಸ್ಟಾರ್‌ ಬೌಲರ್‌ ತಂಡಕ್ಕೆ ಕಂಬ್ಯಾಕ್

T20 ವಿಶ್ವಕಪ್‌ ಇಂಗ್ಲೆಂಡ್‌ ತಂಡ ಪ್ರಕಟ: ವರ್ಷದ ಬಳಿಕ ಸ್ಟಾರ್‌ ಬೌಲರ್‌ ತಂಡಕ್ಕೆ ಕಂಬ್ಯಾಕ್

ಜಗತ್ತಿಗಿಂತ ಮೊದಲು ಪಾಕ್‌ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್‌ ದಾಳಿ ಬಗ್ಗೆ ಪ್ರಧಾನಿ

ಜಗತ್ತಿಗಿಂತ ಮೊದಲು ಪಾಕ್‌ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್‌ ದಾಳಿ ಬಗ್ಗೆ ಪ್ರಧಾನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Puneeth Rajkumar: ಮರು ಬಿಡುಗಡೆಯತ್ತ ಅಂಜನಿಪುತ್ರ

Puneeth Rajkumar: ಮರು ಬಿಡುಗಡೆಯತ್ತ ಅಂಜನಿಪುತ್ರ

Ramana Avatara: ಇದು ಮಾಡರ್ನ್ ರಾಮನ ಕಥೆ: ‘ರಾಮನ ಅವತಾರ’ ಮೇಲೆ ರಿಷಿ ನಿರೀಕ್ಷೆ

Ramana Avatara: ಇದು ಮಾಡರ್ನ್ ರಾಮನ ಕಥೆ: ‘ರಾಮನ ಅವತಾರ’ ಮೇಲೆ ರಿಷಿ ನಿರೀಕ್ಷೆ

ಈ ಪೆನ್‌ಡ್ರೈವ್‌ನಲ್ಲಿರುವ ವಿಡಿಯೋ ನಿಜ: ನಾನು, ಹೀರೊಯಿನ್ ಸೇರಿ ಮಾಡಿದ ವಿಡಿಯೋ ಇದು; ಪ್ರಥಮ್

ಈ ಪೆನ್‌ಡ್ರೈವ್‌ನಲ್ಲಿರುವ ವಿಡಿಯೋ ನಿಜ: ನಾನು, ಹೀರೊಯಿನ್ ಸೇರಿ ಮಾಡಿದ ವಿಡಿಯೋ ಇದು; ಪ್ರಥಮ್

Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!

Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!

Sandalwood: ಧೀರೇನ್‌ ರೀ ಇಂಟ್ರೊಡಕ್ಷನ್‌

Sandalwood: ಧೀರೇನ್‌ ರೀ ಇಂಟ್ರೊಡಕ್ಷನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Haveri; ಕಾಗಿನೆಲೆ ಗುರುಪೀಠಕ್ಕೆ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಭೇಟಿ

Haveri; ಕಾಗಿನೆಲೆ ಗುರುಪೀಠಕ್ಕೆ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಭೇಟಿ

Puneeth Rajkumar: ಮರು ಬಿಡುಗಡೆಯತ್ತ ಅಂಜನಿಪುತ್ರ

Puneeth Rajkumar: ಮರು ಬಿಡುಗಡೆಯತ್ತ ಅಂಜನಿಪುತ್ರ

T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್20

T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್

ಮಹಾತ್ಮರ ಸಮಾಜಮುಖಿ ಸಂದೇಶ ಸಾರ್ವಕಾಲಿಕ: ಗುರುಮೂರ್ತಿ ಶ್ರೀ

ಮಹಾತ್ಮರ ಸಮಾಜಮುಖಿ ಸಂದೇಶ ಸಾರ್ವಕಾಲಿಕ: ಗುರುಮೂರ್ತಿ ಶ್ರೀ

Kollywood: ಕಮಲ್‌ ಹಾಸನ್‌ ʼಥಗ್‌ ಲೈಫ್‌ʼ ಅಖಾಡಕ್ಕೆ ಬಾಲಿವುಡ್‌ನ ಖ್ಯಾತ ನಟರು ಎಂಟ್ರಿ?

Kollywood: ಕಮಲ್‌ ಹಾಸನ್‌ ʼಥಗ್‌ ಲೈಫ್‌ʼ ಅಖಾಡಕ್ಕೆ ಬಾಲಿವುಡ್‌ನ ಖ್ಯಾತ ನಟರು ಎಂಟ್ರಿ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.