ಮೋದಿ OBC ಅಲ್ಲ ಎಂದು ರಾಹುಲ್‌ ವಾಗ್ಧಾಳಿ- OBC ಗೆ ಸೇರಿಸಿದ್ದೇ ಕಾಂಗ್ರೆಸ್‌ ಎಂದ ಬಿಜೆಪಿ

ಮೋದಿ ಸುಳ್ಳು ಹೇಳಿದ್ದಾರೆ, ಅವರು ಜನ್ಮತಃ ಸಾಮಾನ್ಯ ವರ್ಗಕ್ಕೆ ಸೇರಿದವರು: ರಾಹುಲ್‌

Team Udayavani, Feb 8, 2024, 11:28 PM IST

rahul gandhi

ಝರ್ಸುಗುಡ/ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಇತರೆ ಹಿಂದುಳಿದ ವರ್ಗ ದಲ್ಲಿ (ಒಬಿಸಿ) ಹುಟ್ಟಿಲ್ಲ, ಅವರು ತಮ್ಮ ಜಾತಿಯ ವಿಚಾರದಲ್ಲಿ ಸುಳ್ಳು ಹೇಳುತ್ತಿದ್ದಾರೆ ಎಂದು ಭಾರತ್‌ ಜೋಡೋ ನ್ಯಾಯಯಾತ್ರೆಯಲ್ಲಿ ರಾಹುಲ್‌ ಗಾಂಧಿ ಆರೋಪಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ರಾಹುಲ್‌ ವಿರುದ್ಧ ದಾಳಿ ನಡೆಸಿರುವ ಕೇಂದ್ರ ಸರಕಾರ, ಮೋದಿಯವರ ಮೋಧ್‌ ಘಾಂಚಿ ಜಾತಿಯನ್ನು ಹಿಂದುಳಿದ ವರ್ಗಕ್ಕೆ ಸೇರಿಸಿ, ಅಧಿಸೂಚನೆ ಹೊರಡಿಸಿದ್ದೇ ಅಂದು ಗುಜರಾತ್‌ನಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್‌ ಸರಕಾರ ಎಂದು ಹೇಳಿದೆ.

ಗುರುವಾರ ಎರಡೂ ಪಕ್ಷಗಳ ನಡುವೆ ದೇಶದ ಪ್ರಧಾನಿಯ ಜಾತಿ ಯಾವುದೆ ನ್ನುವು ದರ ಕುರಿತು ಪರಸ್ಪರ ವಾಗ್ವಾದ ನಡೆದಿದೆ. ನ್ಯಾಯಯಾತ್ರೆಯಲ್ಲಿ ಮೋದಿ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದ ರಾಹುಲ್‌, ಮೋದಿಯ ಜಾತಿಯನ್ನೇ ಆಧರಿಸಿ ಹರಿಹಾಯ್ದರು.

ರಾಹುಲ್‌ ಹೇಳಿದ್ದೇನು?: ಒಡಿಶಾದ ಝರ್ಸುಗುಡದಲ್ಲಿ ನಡೆದ ನ್ಯಾಯ ಯಾತ್ರೆಯಲ್ಲಿ ಮಾತನಾಡಿದ ರಾಹುಲ್‌, ಮೋದಿ ಅವರು ಹಿಂದುಳಿದ ವರ್ಗದಲ್ಲಿ ಹುಟ್ಟ ಲಿಲ್ಲ, ಜನ್ಮತಃ ಅವರು ಸಾಮಾನ್ಯ ವರ್ಗಕ್ಕೆ ಸೇರಿದ್ದಾರೆ. ಅವರ ಘಾಂಚಿ ಸಮುದಾಯಕ್ಕೆ 2000ರಲ್ಲಿ ಬಿಜೆಪಿ ಸರಕಾರ ಒಬಿಸಿ ಸ್ಥಾನಮಾನ ನೀಡಿತು. ಮೋದಿ ಗುಜರಾತ್‌ ಮುಖ್ಯಮಂತ್ರಿಯಾದಾಗ ತಮ್ಮ ಜಾತಿಯನ್ನು ಒಬಿಸಿಗೆ ಬದಲಿಸಿಕೊಂಡರು ಎಂದು ರಾಹುಲ್‌ ಆರೋಪಿಸಿದರು. ಆರಂಭದಲ್ಲಿ ಮೋದಿ ಜಾತಿಯನ್ನು ತೆಲಿ ಎಂದು ರಾಹುಲ್‌ ಹೇಳಿದರೂ, ನಂತರ ಅದನ್ನು ಬದಲಿಸಿ ಘಾಂಚಿ ಎಂದು ಸರಿಮಾಡಿಕೊಂಡರು.

“ಬಿಜೆಪಿ ಮತ್ತು ನರೇಂದ್ರ ಮೋದಿಗೆ ಜಾತಿಗಣತಿ ಬಗ್ಗೆ ಆಸಕ್ತಿ ಇಲ್ಲ. ಮೋದಿ ತಮ್ಮ ಜೀವನಪರ್ಯಂತ ಜಾತಿಗಣತಿಗೆ ಅವಕಾ ಶವನ್ನೇ ನೀಡುವುದಿಲ್ಲ. ಏಕೆಂದರೆ ಅವರು ಒಬಿಸಿಯೇ ಅಲ್ಲ” ಎಂದು ಹರಿಹಾಯ್ದರು. “ಭಾರತ್‌ ಜೋಡೋ ಯಾತ್ರೆಯಲ್ಲಿ ಜಾತಿಗಣತಿ ಬಗ್ಗೆ ಏಕೆ ಪ್ರಸ್ತಾಪಿಸುತ್ತಿದ್ದೀರಿ ಎಂದು ವರದಿಗಾರರೊಬ್ಬರು ಪ್ರಶ್ನೆ ಕೇಳಿದ್ದರು. ದೇಶದಲ್ಲಿ ಎಷ್ಟು ಮಂದಿ ಆದಿವಾಸಿಗಳು ಇದ್ದಾರೆ ಎಂದು ನಿಮಗೆ ತಿಳಿದಿದೆಯೇ ಎಂದು ನಾನು ಕೇಳಿದೆ. ಶೇ.8ರಷ್ಟು ಆದಿವಾಸಿಗಳು, ಶೇ. 15ರಷ್ಟು ದಲಿತರು ಹಾಗೂ ಶೇ.55ರಷ್ಟು ಮಂದಿ ಹಿಂದುಳಿದ ವರ್ಗದವರು ಇದ್ದಾರೆ. ಆದರೆ ನಿಮ್ಮ ಸುತ್ತಮುತ್ತ ಎಷ್ಟು ಮಂದಿ ಇದ್ದಾರೆ ಎಂದು ನೋಡಿಕೊಳ್ಳಿ’ ಎಂದು ಮಾಧ್ಯಮದವರನ್ನು ಕೇಳಿದೆ ಎಂದರು.

“ದೇಶದ ಅಗ್ರ 200 ಕಂಪೆನಿಗಳಲ್ಲಿ ಎಷ್ಟು ದಲಿತರು ಇದ್ದಾರೆ? ಕಂಪೆನಿಗಳು ಹೋಗಲಿ, ಸರಕಾರದ ಉನ್ನತ ಹುದ್ದೆಗಳಲ್ಲಿ ಎಷ್ಟು ಮಂದಿ ದಲಿತರಿದ್ದಾರೆ’ ಎಂದು ಪ್ರಶ್ನಿಸಿದರು.

“1994ರಲ್ಲೇ ಗುಜರಾತ್‌ಸರಕಾರದ ಅಧಿಸೂಚನೆ”
ಮೋದಿ ಜಾತಿಯ ಕುರಿತ ರಾಹುಲ್‌ ವಾಗ್ಧಾಳಿಗೆ ಕೇಂದ್ರ ಸರಕಾರ ಉತ್ತರ ನೀಡಿದೆ. ಮೋಧ್‌ ಘಾಂಚಿಯನ್ನು ಒಬಿಸಿಗೆ ಸೇರಿಸಿದ್ದು ಅಂದಿನ ಗುಜರಾತ್‌ ಕಾಂಗ್ರೆಸ್‌ ಸರಕಾರವೇ ಹೊರತು ಬಿಜೆಪಿಯಲ್ಲ ಎಂದು ಸ್ಪಷ್ಟಪಡಿಸಿದೆ.

“ಮೋಧ್‌ ಘಾಂಚಿ” ಸಮುದಾಯ ಗುಜರಾತ್‌ನಲ್ಲಿ ಒಬಿಸಿ ಪಟ್ಟಿಯಲ್ಲಿದೆ. ಗುಜರಾತ್‌ನಲ್ಲಿ ಸಮೀಕ್ಷೆ ನಡೆಸಿದ ನಂತರ ಮಂಡಲ್‌ ಆಯೋಗ, 91(ಎ) ಸೂಚ್ಯಂಕದಡಿ ಒಬಿಸಿ ಸಮುದಾಯಗಳ ಪಟ್ಟಿ ಸಿದ್ಧ ಮಾಡಿತು. ಅದರಲ್ಲಿ ಮೋಧ್‌ ಘಾಂಚಿಯನ್ನು ಒಬಿಸಿಗೆ ಸೇರ್ಪಡೆ ಮಾಡಲಾಯಿತು. ಗುಜರಾತ್‌ನಲ್ಲಿನ 105 ಒಬಿಸಿ ಸಮುದಾಯಗಳ ಪಟ್ಟಿಯಲ್ಲೂ ಮೋಧ್‌ ಘಾಂಚಿ ಹೆಸರು ಇದೆ’ ಎಂದು ಕೇಂದ್ರ ಹೇಳಿದೆ.

“ಮೋಧ್‌ ಘಾಂಚಿ ಉಪಜಾತಿಯನ್ನು ಒಬಿಸಿಗೆ ಸೇರಿಸಲು, 1994 ಜು.25ರಂದು ಗುಜರಾತ್‌ ಸರಕಾರ ಅಧಿಸೂಚನೆ ಹೊರಡಿಸಿತು. ಆಗ ಅಲ್ಲಿ ಅಧಿಕಾರದಲ್ಲಿದ್ದದ್ದು ಕಾಂಗ್ರೆಸ್‌ ಸರಕಾರ. ಅದೇ ಸಮುದಾಯವನ್ನು ಒಬಿಸಿಗೆ ಸೇರಿಸಿ ಕೇಂದ್ರ ಸರಕಾರ 2000, ಏ.4ರಲ್ಲಿ ಅಧಿಸೂಚನೆ ಹೊರಡಿಸಿತು. ಈ ಎರಡೂ ಸಂದರ್ಭದಲ್ಲಿ ಮೋದಿ ಅಧಿಕಾರದಲ್ಲಿರಲಿಲ್ಲ’ ಎಂದು ಕೇಂದ್ರ ಸರಕಾರ ಹೇಳಿದೆ.

ಟಾಪ್ ನ್ಯೂಸ್

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

Mahadev Betting App Case; Actor Sahil Khan arrested by Mumbai police

Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qeeqwewqwqe

Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.