ಇನ್ನು ಜಾತಿ ಗಣತಿ ವರದಿ ಆಧಾರದಲ್ಲಿ ಮೀಸಲಾತಿ ಪ್ರಕ್ರಿಯೆ?

ಜಿ.ಪಂ./ತಾ.ಪಂ.ನಲ್ಲಿ ಸುದೀರ್ಘ‌ ಕಾಲ ಚುನಾಯಿತ ಆಡಳಿತವಿಲ್ಲದೆ ದಾಖಲೆ

Team Udayavani, Mar 21, 2024, 7:40 AM IST

ಇನ್ನು ಜಾತಿ ಗಣತಿ ವರದಿ ಆಧಾರದಲ್ಲಿ ಮೀಸಲಾತಿ ಪ್ರಕ್ರಿಯೆ?

ಮಂಗಳೂರು: 2021ರಲ್ಲಿ ಆಗಬೇಕಿತ್ತು. 2022ರಲ್ಲಿ ಸಾಧ್ಯವಾಗಲಿಲ್ಲ, 2023ರಲ್ಲಿ ವಿಧಾನಸಭಾ ಚುನಾವಣೆ ಬಂತು… ಈಗ 2024… ಈಗ ಲೋಕಸಭಾ ಚುನಾವಣೆ ಸಮಯ. ಇನ್ಯಾವಾಗಲೋ ಗೊತ್ತಿಲ್ಲ!

ಇದು ರಾಜ್ಯದಲ್ಲಿ ನಡೆಯಬೇಕಿರುವ ಜಿಲ್ಲಾ ಪಂಚಾಯತ್‌, ತಾಲೂಕು ಪಂಚಾಯತ್‌ ಚುನಾವಣೆಯ ವಿಧಿ.

ಇದರ ಮಧ್ಯೆಯೇ ಹಿಂದುಳಿದ ವರ್ಗಗಳ ಆಯೋಗದ ಜಾತಿ ಗಣತಿ ವರದಿ ಆಧರಿಸಿಯೇ ಮೀಸಲು ನಿಗದಿಪಡಿಸುತ್ತದೆ ಎಂಬ ಮಾತೂ ಕೇಳಿಬರುತ್ತಿದೆ. ವಿಕೇಂದ್ರೀಕೃತ ಆಡಳಿತ ವ್ಯವಸ್ಥೆಯಲ್ಲಿ ಅತಿ ಮುಖ್ಯ ಪಾತ್ರ ವಹಿಸಿರುವ ಜಿ.ಪಂ. ಹಾಗೂ ತಾ.ಪಂ.ಗಳಲ್ಲಿ ಚುನಾಯಿತ ಆಡಳಿತವಿಲ್ಲದೆ ಮೂರು ವರ್ಷ ಕಳೆದಿವೆ. ಪಂಚಾಯತ್‌ರಾಜ್‌ ವ್ಯವಸ್ಥೆಯಲ್ಲಿ ಇದು ದಾಖಲೆ. 3 ವರ್ಷಗಳಿಂದ ಅಧಿಕಾರಶಾಹಿಗಳದ್ದೇ ಆಡಳಿತ. ಜನರ ಆಶೋತ್ತರಗಳಿಗೆ ಸ್ಪಂದಿಸುವ, ನಿಯಮಿತವಾಗಿ ಯೋಜನೆಗಳ ಪ್ರಗತಿ ಪರಿಶೀಲಿಸುವ ಜನಪ್ರತಿನಿಧಿಗಳಿಲ್ಲ. ಇದರಿಂದ ಒಟ್ಟೂ ವ್ಯವಸ್ಥೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿಲ್ಲ. ಯಾವುದೋ ಒಂದು ನಿಯಮದಡಿ ಒಂದಷ್ಟು ಅನುದಾನ ಬರುತ್ತದೆ, ಹೇಗೋ ಆಡಳಿತ ಅದರ ಪಾಡಿಗೆ ನಡೆಯುತ್ತಿದೆ ಎಂಬಂತಾಗಿದೆ.

ಮೀಸಲಾತಿ ಕಗ್ಗಂಟು
ಜಿ.ಪಂ. ಹಾಗೂ ತಾ.ಪಂ. ಕ್ಷೇತ್ರಗಳ ಪುನರ್‌ ವಿಂಗಡಣೆ ಹಾಗೂ ಮೀಸಲಾತಿ ನಿಗದಿ ವಿಷಯ ಬಹಳ ವರ್ಷಗಳಿಂದ ಅಂತಿಮಗೊಂಡಿಲ್ಲ. ಹಲವು ಬಾರಿ ಸರಕಾರವನ್ನು ಹೈಕೋರ್ಟ್‌ ಸಹ ತರಾಟೆಗೆ ತೆಗೆದುಕೊಂಡಿದೆ. ಕಳೆದ ಡಿಸೆಂಬರ್‌ನಲ್ಲಿ ಸರಕಾರವು ಆದಷ್ಟು ಬೇಗ ಜಿ.ಪಂ./ತಾ.ಪಂ. ಚುನಾವಣೆ ಪೂರ್ವಭಾವಿ ಕೆಲಸಗಳನ್ನು ಮುಗಿಸುತ್ತೇವೆ ಎಂದು ಹೈಕೋರ್ಟ್‌ಗೆ ತಿಳಿಸಿತ್ತು. ಹಾಗಾಗಿ ಜನವರಿ-ಫೆಬ್ರವರಿಯಲ್ಲೇ ಚುನಾವಣೆ ನಡೆಯಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಲಭ್ಯ ಮಾಹಿತಿ ಪ್ರಕಾರ ಕ್ಷೇತ್ರ ಪುನರ್‌ವಿಂಗಡಣೆ ಪ್ರಕ್ರಿಯೆ ಮುಗಿದಿದ್ದರೂ ಮೀಸಲಾತಿ ಅಂತಿಮಗೊಂಡಿಲ್ಲ. ಇದೇವೇಳೆ ಲೋಕಸಭಾ ಚುನಾವಣೆ ಪ್ರಕಟವಾಗಿದೆ. ಇನ್ನು ಈ ಚುನಾವಣೆ ಮುಗಿದ ಮೇಲೆಯೇ ಪಂಚಾಯತ್‌ ಚುನಾವಣೆಗೆ ಸಾಧ್ಯ.

15ನೇ ಹಣಕಾಸು
ಆಯೋಗದ ಹಣ ಬಾಕಿ
ಜಿ.ಪಂ.ಗೆ ಬರುವ ಅನುದಾ ನದಲ್ಲಿ ದೊಡ್ಡ ಪ್ರಮಾಣದ್ದು ಎಂದರೆ 15ನೇ ಹಣಕಾಸು ಆಯೋಗದ್ದು. ಜಿ.ಪಂ.ನಲ್ಲಿ ಚುನಾಯಿತ ಆಡಳಿತ ಇದ್ದರೆ ಮಾತ್ರ ಈ ಅನುದಾನ ಲಭ್ಯವಾಗಲಿದೆ. ದ.ಕ. ಜಿ.ಪಂ.ನಲ್ಲಿ 202-21ರಲ್ಲಿ ಕೇಂದ್ರದ ಪಾಲು 412 ಕೋಟಿ ರೂ. ಬಂದಿದೆ. 2021-22ಲ್ಲಿ 284 ಕೋಟಿ ರೂ. ಮಾತ್ರ ಬಂದಿದೆ. 2022-23ರಲ್ಲಿ ಅನುದಾನ ಶೂನ್ಯ. ಇದು ಹಲವು ರೀತಿಯ ಕುಡಿಯುವ ನೀರು, ರಸ್ತೆ ಇತ್ಯಾದಿ ಕಾಮಗಾರಿಗಳಿಗೆ ಅಗತ್ಯವಾದ ಅನುದಾನ. ಈಗ ಇದರ ಕೊರತೆ ಕಾಡುತ್ತಿದೆ ಎನ್ನುತ್ತಾರೆ ಜಿ.ಪಂ. ಮಾಜಿ ಸದಸ್ಯರಾದ ಜನಾರ್ದನ ಗೌಡ.

ಮೀಸಲಾತಿ ನಿಗದಿಗೆ ಜಾತಿ
ಗಣತಿ ವರದಿ ಪರಿಗಣನೆ?
ಜಿ.ಪಂ/ತಾ.ಪಂ. ಚುನಾವಣೆಗೆ ಇನ್ನೂ ಮೀಸಲು ನಿಗದಿಪಡಿಸಿಲ್ಲ. ಅದನ್ನು ಹಿಂದುಳಿದ ವರ್ಗಗಳ ಆಯೋಗದ ಜಾತಿ ಗಣತಿ ವರದಿಯ ಆಧಾರದಲ್ಲಿ ನಿಗದಿ ಪಡಿಸುವ ಬಗ್ಗೆ ಸರಕಾರ ಚಿಂತನೆ ನಡೆಸುತ್ತಿದೆ ಎನ್ನುತ್ತಾರೆ ವಿಧಾನ ಪರಿಷತ್‌ ಸದಸ್ಯ ಡಾ| ಮಂಜುನಾಥ ಭಂಡಾರಿ. ಹಿಂದಿನ ಸರಕಾರಗಳ ನಿಲುವಿನಂತೆ ಕೇವಲ ಪರಿಶಿಷ್ಟರಿಗೆ ಮಾತ್ರವೇ ಮೀಸಲಾತಿ ಇದ್ದು ಒಬಿಸಿ ಕೆಟಗರಿಯವರು ಸಾಮಾನ್ಯ ವರ್ಗಕ್ಕೇ ಮೀಸಲಾತಿ ಪಡೆಯುವಂತಾಗುತ್ತಿತ್ತು. ಇದರಿಂದ ಒಬಿಸಿಯವರಿಗೆ ಅನ್ಯಾಯವಾಗುತ್ತದೆ ಎಂಬ ಕಾರಣಕ್ಕಾಗಿ ಮೀಸಲಾತಿ ವೇಳೆ ಅವರನ್ನೂ ಪರಿಗಣಿಸುವ ಬಗ್ಗೆ ವೈಜ್ಞಾನಿಕ ವರದಿಯಾಗಿರುವ ಜಯಪ್ರಕಾಶ್‌ ಹೆಗ್ಡೆ ಸಮಿತಿ ವರದಿಯನ್ನು ಸರಕಾರ ಪರಿಗಣಿಸುವ ಸಾಧ್ಯತೆಗಳಿವೆ.

ರಾಜ್ಯ ಸರಕಾರ ಇನ್ನೂ ಜಿ.ಪಂ./ತಾ.ಪಂ. ಮೀಸಲಾತಿ ಪ್ರಕ್ರಿಯೆ ಪೂರ್ಣಗೊಳಿಸಿಲ್ಲ, ಲೋಕಸಭೆ
ಚುನಾವಣೆ ಮುಗಿಯದೆ ಜಿ.ಪಂ.ಚುನಾವಣೆ ನಡೆಸುವುದು ಸಾಧ್ಯವಾಗದು.
– ಶಶಿಕಿರಣ್‌ ಶೆಟ್ಟಿ , ಅಡ್ವೊಕೇಟ್‌ ಜನರಲ್‌

-ವೇಣುವಿನೋದ್‌ ಕೆ.ಎಸ್‌.

ಟಾಪ್ ನ್ಯೂಸ್

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.