Road Mishap; ಪಿಕಪ್ ಢಿಕ್ಕಿ; ಪಾದಚಾರಿಗೆ ಗಾಯ
Team Udayavani, Sep 20, 2023, 5:26 PM IST
ಕುಂದಾಪುರ: ಕರ್ಕುಂಜೆ ಗ್ರಾಮದ ಹೆದ್ದಾರಿ ಕಡುವಿನ ಅಸೋಡು – ಬಿಜ್ರಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ರಾಜು (53) ಅವರ ಕಾಲಿನ ಪಾದದ ಮೇಲೆ ಗಣಪತಿ ವಿಸರ್ಜನೆಗೆ ಗಣಪತಿ ಹೊತ್ತು ಸಾಗುತ್ತಿದ್ದ ಪಿಕಪ್ ವಾಹನ ಸಂಚರಿಸಿ, ಗಾಯಗೊಂಡ ಘಟನೆ ಸಂಭವಿಸಿದೆ.
ಗಾಯಗೊಂಡ ರಾಜು ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪಿಕಪ್ ಚಾಲಕ ಬಾಲಕೃಷ್ಣ ಆಚಾರ್ಯ ವಿರುದ್ಧ ಕುಂದಾಪುರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.