Australian Open Women’s Singles: ಸಬಲೆಂಕಾಗೆ ಸತತ 2ನೇ ಪ್ರಶಸ್ತಿ ಸಂಭ್ರಮ
Team Udayavani, Jan 27, 2024, 11:37 PM IST
ಮೆಲ್ಬರ್ನ್: ಬೆಲರೂಸ್ನ ಅರಿನಾ ಸಬಲೆಂಕಾ ಆಸ್ಟ್ರೇಲಿಯನ್ ಓಪನ್ ವನಿತಾ ಸಿಂಗಲ್ಸ್ ಪ್ರಶಸ್ತಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಶನಿವಾರದ ಫೈನಲ್ನಲ್ಲಿ ಅವರು ಚೀನದ ಜೆಂಗ್ ಕ್ವಿನ್ವೆನ್ ವಿರುದ್ಧ 6-3, 6-2 ಅಂತರದ ಸುಲಭ ಜಯ ಸಾಧಿಸಿದರು. ಮೊದಲ ಸಲ ಗ್ರ್ಯಾನ್ಸ್ಲಾಮ್ ಪ್ರಶಸ್ತಿ ಸುತ್ತಿಗೆ ನೆಗೆದ ಜೆಂಗ್ ಇತಿಹಾಸ ನಿರ್ಮಿಸುವ ಅವಕಾಶದಿಂದ ವಂಚಿತರಾದರು.
ದ್ವಿತೀಯ ಶ್ರೇಯಾಂಕದ, 25 ವರ್ಷದ ಅರಿನಾ ಸಬಲೆಂಕಾ 13 ತಿಂಗಳ ಅವಧಿಯ 3 ಗ್ರ್ಯಾನ್ಸ್ಲಾಮ್ ಫೈನಲ್ಗಳಲ್ಲಿ ಎರಡನ್ನು ಗೆದ್ದ ಸಾಧನೆಗೈದರು. ಇದು ಅವರಿಗೆ ಒಲಿದ 2ನೇ ಗ್ರ್ಯಾನ್ಸ್ಲಾಮ್ ಕಿರೀಟ. ಎರಡೂ “ಮೆಲ್ಬರ್ನ್ ಪಾರ್ಕ್’ನಲ್ಲೇ ಒಲಿದದ್ದು ವಿಶೇಷ.
ಅರಿನಾ ಸಬಲೆಂಕಾ 2023ರ ಯುಎಸ್ ಓಪನ್ ಕ್ವಾರ್ಟರ್ ಫೈನಲ್ನಲ್ಲೂ ಜೆಂಗ್ ಕ್ವಿನ್ವೆನ್ ವಿರುದ್ಧ ಜಯ ಸಾಧಿಸಿದ್ದರು. ಫೈನಲ್ನಲ್ಲಿ ಕೊಕೊ ಗಾಫ್ಗೆ ಶರಣಾಗಿ ಪ್ರಶಸ್ತಿ ವಂಚಿತ ರಾಗಬೇಕಾಯಿತು. ಇನ್ನೊಂದೆಡೆ, 2023ರ ಯುಎಸ್ ಓಪನ್ ಕ್ವಾರ್ಟರ್ ಫೈನಲ್ ತಲುಪಿದ್ದೇ ಜೆಂಗ್ ಅವರ ಈವರೆಗಿನ ಅತ್ಯುತ್ತಮ ಗ್ರ್ಯಾನ್ಸ್ಲಾಮ್ ಸಾಧನೆ ಆಗಿತ್ತು.
ಒಂದೂ ಸೆಟ್ ಸೋಲಲಿಲ್ಲ!
ಅರಿನಾ ಸಬಲೆಂಕಾ 2012- 2013ರ ಬಳಿಕ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಉಳಿಸಿಕೊಂಡ ಮೊದಲ ಆಟಗಾರ್ತಿ. ಅಂದು ವಿಕ್ಟೋರಿಯಾ ಅಜರೆಂಕಾ ಈ ಸಾಧನೆಗೈದಿದ್ದರು. ಅಜರೆಂಕಾ ಕೂಡ ಬೆಲರೂಸ್ನವರೇ ಎಂಬುದು ವಿಶೇಷ.
ಹಾಗೆಯೇ, ಸಬಲೆಂಕಾ ಒಂದೂ ಸೆಟ್ ಕಳೆದುಕೊಳ್ಳದೆ ಆಸ್ಟ್ರೇಲಿಯನ್ ಓಪನ್ ಕಿರೀಟ ಏರಿಸಿಕೊಂಡ ಅಪ ರೂಪದ ಸಾಧಕಿ ಎನಿಸಿದರು. ಲಿಂಡ್ಸೆ ಡ್ಯಾವನ್ಪೋರ್ಟ್, ಮರಿಯಾ ಶರಪೋವಾ, ಸೆರೆನಾ ವಿಲಿಯಮ್ಸ್ ಮತ್ತು ಆ್ಯಶ್ಲಿ ಬಾರ್ಟಿ ಈ ಯಾದಿಯ ಇತರ ಆಟಗಾರ್ತಿಯರು.
ಸತತ 14 ಜಯದ ಸಾಧನೆ
ಇದು “ಮೆಲ್ಬರ್ನ್ ಪಾರ್ಕ್’ನಲ್ಲಿ ಸಬಲೆಂಕಾ ಅವರ ಸತತ 14ನೇ ಗೆಲುವಿನ ಸಂಭ್ರಮ. “ಕಳೆದ ಎರಡು ವಾರಗಳು ನನ್ನ ಪಾಲಿನ ಅತ್ಯಂತ ಸಂಭ್ರಮದ ದಿನಗಳಾಗಿದ್ದವು. ನಾನಿಲ್ಲಿ ಮತ್ತೂಮ್ಮೆ ಟ್ರೋಫಿ ಗೆಲ್ಲುತ್ತೇನೆಂದು ಭಾವಿಸಿರಲೇ ಇಲ್ಲ. ಈ ಸಂದರ್ಭದಲ್ಲಿ ನಾನು ಜೆಂಗ್ ಕ್ವಿನ್ವೆನ್ಗೆ ಅಭಿನಂದನೆ ಹೇಳಲು ಬಯಸುತ್ತೇನೆ. ಅವರ ಆಟವೂ ಅತ್ಯುತ್ತಮ ಮಟ್ಟದಲ್ಲಿತ್ತು. ಆದರೆ ಫೈನಲ್ನಲ್ಲಿ ಸೋಲುವುದನ್ನು ನಿಜಕ್ಕೂ ಸಹಿಸಿಕೊಳ್ಳಲಾಗದು. ಆದರೆ ಜೆಂಗ್ ಯುವ ಆಟಗಾರ್ತಿ. ಅವರ ಪಾಲಿಗೆ ಇನ್ನಷ್ಟು ಫೈನಲ್ಗಳು ಎದುರಾಗಲಿ, ಗೆಲುವು ಒಲಿಯಲಿ’ ಎಂದು ಹಾರೈಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್
T20 ವಿಶ್ವಕಪ್ ಇಂಗ್ಲೆಂಡ್ ತಂಡ ಪ್ರಕಟ: ವರ್ಷದ ಬಳಿಕ ಸ್ಟಾರ್ ಬೌಲರ್ ತಂಡಕ್ಕೆ ಕಂಬ್ಯಾಕ್
ಬ್ಯಾಟಿಂಗ್ – ಬೌಲಿಂಗ್ ಎರಡರಲ್ಲೂ ಬಲಿಷ್ಠ: T20 ವಿಶ್ವಕಪ್ಗೆ ದಕ್ಷಿಣ ಆಫ್ರಿಕಾ ಪ್ರಕಟ
Mumbai Indians ವಿರುದ್ಧ ತವರಿನ ಅಂಗಳ: ರಾಹುಲ್ಗೆ ಮಹತ್ವದ ಪಂದ್ಯ
Champions Trophy ತಾಣ ಅಂತಿಮ ಲಾಹೋರ್, ಕರಾಚಿಯಲ್ಲಿ: ಭಾರತದ ಪಂದ್ಯಗಳೆಲ್ಲಿ?
MUST WATCH
ಹೊಸ ಸೇರ್ಪಡೆ
Panaji: ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿ ಪಲ್ಲವಿ ಧೆಂಪೊ
Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ
Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ
Thirthahalli: ಚುನಾವಣಾ ಬಹಿಷ್ಕಾರ; ಸ್ವ-ಇಚ್ಛೆಯಿಂದ ಸಾವಿರಕ್ಕೂ ಅಧಿಕ ಮಂದಿಯಿಂದ ನಿರ್ಧಾರ !
ಬಿಜೆಪಿ ಸುಳ್ಳು ಉತ್ಪಾದನೆ ಮಾಡುವ ಫ್ಯಾಕ್ಟರಿ: ಸಿಎಂ ಸಿದ್ದರಾಮಯ್ಯ