ಜಾಲಹಳ್ಳಿ ಗ್ರಾ.ಪಂ.ನ 31 ಸಿಬ್ಬಂದಿಗೆ ವೇತನ ಬಾಕಿ : ಕಳೆದ 23 ತಿಂಗಳಿಂದ ಬಂದಿಲ್ಲ ವೇತನ
Team Udayavani, Jan 31, 2022, 3:30 PM IST
ದೇವದುರ್ಗ: ಜಾಲಹಳ್ಳಿ ಗ್ರಾಪಂನ 31 ಸಿಬ್ಬಂದಿಗಳಿಗೆ ಬರೋಬ್ಬರಿ 23 ತಿಂಗಳಿಂದ ವೇತನ ಬಾಕಿ ಇದ್ದು, ಇದೀಗ ಆ ಸಿಬ್ಬಂದಿ ಕುಟುಂಬ ನಿರ್ವಹಣೆ ಮಾಡಲು ಸಹ ಸಂಕಷ್ಟ ಪಡುವಂತಾಗಿದೆ. ದಿನಗೂಲಿ ಪೌರ ಕಾರ್ಮಿಕರು, ವಾಟರ್ ಮೇನ್, ಪರಿಚಾರಕ, ಡಾಟಾ ಆಪರೇಟರ್, ವಾಚಮೇನ್ ಸೇರಿದಂತೆ 31 ಜನ ಸಿಬ್ಬಂದಿ ಈ ಗ್ರಾಪಂ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ವಾರ್ಷಿಕ ಆದಾಯ 20 ಲಕ್ಷಕ್ಕೂ ಅ ಧಿಕ ಸಂಗ್ರಹವಾಗುತ್ತಿದೆ. ಆದರೂ ಸಿಬ್ಬಂದಿ ವೇತನ ಪಾವತಿಸಲು ಅಧಿ ಕಾರಿಗಳು ಮೀನಾಮೇಷ ಎಣಿಸುತ್ತಿದ್ದಾರೆ. ಬಾಕಿ ವೇತನ ಸಮಸ್ಯೆ ಕುರಿತು ಹಲವು ಬಾರಿ ಸಿಬ್ಬಂದಿಗಳು ಅಧಿ ಕಾರಿಗಳ ಗಮನಕ್ಕೆ ತಂದಿದ್ದಾರೆ.
ಇಲ್ಲಿವರೆಗೆ ಸಮಸ್ಯೆ ಬಗೆಹರಿದಿಲ್ಲ. ಆರೇಳು ತಿಂಗಳಿಗೊಮ್ಮೆ ಅಧಿಕಾರಿಗಳ ವರ್ಗಾವಣೆಯಿಂದಲೂ ಸಕಾಲಕ್ಕೆ ವೇತನ ಪಾವತಿಗೆ ಅಡ್ಡಿಯಾದಂತಾಗಿದೆ. ಆರೋಗ್ಯ ಸಮಸ್ಯೆ, ಮಕ್ಕಳಿಗೆ ಶಿಕ್ಷಣ ಸೇರಿದಂತೆ ಕುಟುಂಬ ನಿರ್ವಹಣೆ ಮಾಡಲು ಒಂದಿಲ್ಲೊಂದು ಸಮಸ್ಯೆ ಎದುರಿಸುವಂತ ಸ್ಥಿತಿ ಬಂದಿದೆ.
ಜಾಲಹಳ್ಳಿ ಗ್ರಾಮದ 9 ವಾರ್ಡ್ಗಳಲ್ಲಿ ಸ್ವತ್ಛತೆ, ಕುಡಿವ ನೀರು, ಬೀದಿದೀಪ, ಚರಂಡಿ ಸ್ವತ್ಛತೆ ಕೈಗೊಳ್ಳುವಂತ ಸಿಬ್ಬಂದಿಗಳ ಪಾಡು ಹೇಳತೀರದಾಗಿದೆ. ಡಾಟಾ ಆಪರೇಟ್ ಸಿಬ್ಬಂದಿ ವೇತನವೂ ಬಾಕಿ ಇದೆ. ಈ ಹಿಂದೆ ಅಧಿಕಾರ ಅನುಭವಿಸಿದ ಸದಸ್ಯರ ಮುಂದೆಯೂ ಸಿಬ್ಬಂದಿ ತಮ್ಮ ಗೋಳು ತೊಡಿಕೊಂಡಿದ್ದು, ಒಬ್ಬ ಸದಸ್ಯರು ಗಮನಹರಿಸಿಲ್ಲ ಎನ್ನುವುದು ಬೇಸರ ಸಂಗತಿ. ಇನ್ನಾದರೂ ಸ್ಥಳೀಯ ಶಾಸಕರು ಇತ್ತ ಗಮನ ಹರಿಸಬೇಕು ಎಂಬುದು ಸಿಬ್ಬಂದಿಗಳ ಆಗ್ರಹವಾಗಿದೆ.
ಜಾಲಹಳ್ಳಿ ಗ್ರಾಪಂ ಸಿಬ್ಬಂದಿಗಳ 23 ತಿಂಗಳ ಬಾಕಿ ವೇತನ ಪಾವತಿ ಮಾಡುವಂತೆ ವಿವಿಧ ಸಂಘಟನೆ ಮುಖಂಡರು ಕಚೇರಿ ಮುಂದೆ ಧರಣಿ ನಡೆಸಿದ ವೇಳೆ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಿದ್ದೇನೆ. ವಾರದಲ್ಲಿ ವೇತನ ಪಾವತಿ ಮಾಡಲು ಕ್ರಮ ವಹಿಸಲಾಗುತ್ತದೆ.
– ಅಣ್ಣರಾವ್, ತಾಪಂ ಎಡಿ
23 ತಿಂಗಳಿಂದ ವೇತನ ಇಲ್ಲದೇ ದುಡಿಯುತ್ತಿರುವ ಸಿಬ್ಬಂದಿಗೆ ಕೂಡಲೇ ವೇತನ ನೀಡಬೇಕು ಎಂದು ಅಧಿ ಕಾರಿಗಳಿಗೆ ಮನವಿ ಮಾಡಲಾಗಿದೆ. ವಾರದಲ್ಲಿ ಅರ್ಧಷ್ಟು ವೇತನ ಮಾಡದೇ ಇದ್ದರೇ ಹೋರಾಟ ಅನಿವಾರ್ಯ.
– ಗಿರಿಯಪ್ಪ ಪೂಜಾರಿ, ಸಿಐಟಿಯು ಸಂಘಟನೆ ಕಾರ್ಯದರ್ಶಿ
– ನಾಗರಾಜ ತೇಲ್ಕರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ
Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ
State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ
MUST WATCH
ಹೊಸ ಸೇರ್ಪಡೆ
Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
IPL; ಮೆಕ್ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ