ಹಲಗಲಿಯಲ್ಲಿ ಹಾಳಾಗಿ ಹೋದವೇ ಸಸಿಗಳು

ಅಗತ್ಯಕ್ಕೆ ತಕ್ಕಷ್ಟು ಮಾತ್ರ ಸಸಿ ವಿತರಣೆ ; ಈ ಬಾರಿ ಸಸಿ ಹಂಚುವ ಕಾರ್ಯದಲ್ಲಿ ಕಟ್ಟುನಿಟ್ಟಿನ ಸೂತ್ರ

Team Udayavani, Jun 7, 2022, 10:48 AM IST

4

ಮುಧೋಳ: ಪರಿಸರ ದಿನ ಅಂಗವಾಗಿ ನೆಡುವ ಸಸಿಗೆ ಒಂದು ದಿನದ ಹಬ್ಬದಂತಾಗಿದೆ ಇಂದಿನ ಸನ್ನಿವೇಶ. ದೊಡ್ಡಮಟ್ಟದ ಕಾರ್ಯಕ್ರಮ ಆಯೋಜಿಸಿ ಸಸಿಗಳನ್ನು ನೆಟ್ಟು ಫೋಟೋ ತೆಗೆದುಕೊಳ್ಳುವ ಮಹಾಶಯರು ಮರುದಿನ ಅವುಗಳತ್ತ ತಿರುಗಿಯೂ ನೋಡಲ್ಲ. ಇದರಿಂದಾಗಿ ತಿಂಗಳುಗಟ್ಟಲೆ ಶ್ರಮ ಹಾಕಿ ಬೆಳೆಸಿರುವ ಸಸಿಗಳು ಹಾಳಾಗಿ ಹೋಗುತ್ತಿವೆ.

ಮೇಲಿನ ಮಾತಿಗೆ ಉತ್ತಮ ಉದಾಹರಣೆ ಎಂಬಂತೆ ತಾಲೂಕಿನ ಹಲಗಲಿ ಗ್ರಾಮದಲ್ಲಿ ನೂರಕ್ಕೂ ಹೆಚ್ಚು ಸಸಿಗಳು ಹಾಳಾಗಿದ್ದು, ಈಚೆಗೆ ಬೆಳಕಿಗೆ ಬಂದಿದೆ.

ಕಳೆದ ವರ್ಷ ಪರಿಸರ ದಿನಾಚರಣೆಯಂದು ಗ್ರಾಮದ ವಿವಿಧೆಡೆ ನೆಡಲು ಅಲ್ಲಿನ ಪಂಚಾಯಿತಿ ವತಿಯಿಂದ ನೂರಾರು ಸಸಿ ತರಿಸಲಾಗಿತ್ತು. ಅವುಗಳಲ್ಲಿ ಕೆಲವೊಂದು ಸಸಿಗಳನ್ನು ಬಳಕೆ ಮಾಡಿಕೊಂಡು ನೂರಕ್ಕೂ ಹೆಚ್ಚು ಸಸಿಗಳನ್ನು ಹಾಳು ಮಾಡಲಾಗಿದೆ.

ಇತ್ತೀಚೆಗೆ ಹಲಗಲಿ ಗ್ರಾಮದ ಭೇಟಿ ನೀಡಿದ್ದ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಕಿರಣ ಘೋರ್ಪಡೆ ಅವರು ಪ್ರಾಥಮಿಕ ಆರೋಗ್ಯ ಕೆಂದ್ರದ ಹಳೆಯ ಕಟ್ಟಡದಲ್ಲಿ ಹಾಳಾಗಿದ್ದ ಸಸಿಗಳನ್ನು ಕಂಡು ತೀವ್ರ ಬೇಸರ ವ್ಯಕ್ತಪಡಿಸಿದ್ದರು. ಇದು ಕೇವಲ ಹಲಗಲಿ ಗ್ರಾಮದ ಉದಾಹರಣೆಯಷ್ಟೇ. ಪ್ರತಿಯೊಂದು ಗ್ರಾಮ ಪಂಚಾಯಿತಿಗಳಲ್ಲಿಯೂ ಇಂದು ಪ್ರಚಾರದ ಗೀಳಿಗೆ ಹೆಚ್ಚಿನ ಪ್ರಮಾಣದ ಸಸಿಗಳನ್ನು ಕೊಂಡೊಯ್ದು ಹಾಳು ಮಾಡಲಾಗುತ್ತದೆ.

ಕಡಿವಾಣ ಹಾಕಿದ ಅರಣ್ಯ ಇಲಾಖೆ: ಪ್ರತಿ ವರ್ಷ ಸಸಿಗಳು ಹಾಳಾಗುವುದರ ಬಗ್ಗೆ ಗಮನಿಸುತ್ತಿದ್ದ ಸಾಮಾಜಿಕ ಅರಣ್ಯ ಇಲಾಖೆ ಅಧಿ ಕಾರಿಗಳು ಈ ಬಾರಿ ಸಸಿ ಹಂಚುವ ಕಾರ್ಯದಲ್ಲಿ ಕಟ್ಟುನಿಟ್ಟಿನ ಸೂತ್ರ ಅನುಸರಿಸುತ್ತಿದ್ದಾರೆ.

ಸಸಿಗಾಗಿ ಬೇಡಿಕೆಯಿಡುವವರ ಪೂರ್ವಾಪರ ಯೋಚಿಸಿ ಅವುಗಳನ್ನು ಬಳಸಿಕೊಂಡು ಸರಿಯಾದ ರೀತಿಯಲ್ಲಿ ಬೆಳೆಸಿ ಎಂಬ ಸಂದೇಶ ಸಾರುತ್ತಿರುವ ಅರಣ್ಯಾ ಧಿಕಾರಿಗಳು ಅಗತ್ಯಕ್ಕೆ ತಕ್ಕಷ್ಟು ಮಾತ್ರ ಸಸಿ ವಿತರಿಸಿರುವುದಾಗಿ ತಿಳಿಸಿದ್ದಾರೆ.

ಬೇಕಿದೆ ಕಾನೂನು: ಬೆಳೆದ ಮರದ ಉಳುವಿಗಾಗಿ ಶ್ರಮಿಸುವ ಅರಣ್ಯ ಇಲಾಖೆ ಅಂತಹ ಮರಗಳನ್ನು ಅನುಮತಿಯಿಲ್ಲದೆ ಕತ್ತರಿಸಿದರೆ ಕಠಿಣ ಕಾನೂನು ಕ್ರಮಕ್ಕೆ ಮುಂದಾಗುತ್ತದೆ. ಅದೇ ರೀತಿ ಅನಗತ್ಯವಾಗಿ ಸಸಿಗಳನ್ನು ಹಾಳು ಮಾಡುವವರ ವಿರುದ್ಧವೂ ಕಠಿಣ ಕ್ರಮ ಜಾರಿಯಾದರೆ ಸಸಿಗಳು ಹಾಳಾಗುವುದನ್ನು ತಪ್ಪಿಸಬಹುದು ಎಂಬುದು ಸಾರ್ವಜನಿಕರ ಅಭಿಪ್ರಾಯ.

ಪರಿಸರ ದಿನ ಎಂಬುದು ಕೇವಲ ಜೂ.5ಕ್ಕೆ ಮಾತ್ರ ಸೀಮಿತವಾಗಬಾರದು. ಅಂದು ನಾವು ನೆಡುವ ಸಸಿಯನ್ನು ಬೆಳೆಸಿ ಮರವನ್ನಾಗಿಸಿದರೆ ನಮ್ಮ ಆಚರಣೆಗೆ ನಿಜವಾದ ಅರ್ಥ ಬರುತ್ತದೆ. ಸಾರ್ವಜನಿಕರು ಬೆಳೆಸುವ ಸಸಿಗಳನ್ನು ಜತನದಿಂದ ಬೆಳೆಸಬೇಕು. –ಕಿರಣ ಘೋರ್ಪಡೆ, ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ

ಈ ಮೊದಲು ಹೆಚ್ಚಿನ ಸಸಿಗಳನ್ನು ಕೊಟ್ಟ ಪರಿಣಾಮ ಅನೇಕ ಕಡೆಗಳಲ್ಲಿ ಸಸಿ ಹಾಳಾಗಿರುವ ಬಗ್ಗೆ ಗಮನಕ್ಕೆ ಬಂದಿದೆ. ಈ ಸಸಿ ವಿತರಣೆಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದೇವೆ. ಮುಂದಿನ ದಿನಗಳಲ್ಲಿ ನಾವು ಕೊಟ್ಟ ಸಸಿಗಳನ್ನು ಸರಿಯಾದ ರೀತಿಯಲ್ಲಿ ಬೆಳೆಸಿದ್ದಾರೋ ಇಲ್ಲವೋ ಎಂಬುದರ ಬಗ್ಗೆ ಪರಿಶೀಲನೆ ಆಗಲಿದೆ. -ಪವನ ಕುರನಿಂಗ, ವಲಯ ಅರಣ್ಯಾಧಿಕಾರಿ,ಸಾಮಾಜಿಕ ಅರಣ್ಯ ವಿಭಾಗ

ಸಸಿಗಳು ಮಕ್ಕಳಿಗೆ ಸಮ ಅವುಗಳನ್ನು ಹಾಳು ಮಾಡುವುದು ಸರಿಯಲ್ಲ. ಪರಿಸರ ದಿನಾಚರಣೆ ನೆಪದಲ್ಲಿ ಅವುಗಳನ್ನು ನೆಟ್ಟು ಕಡೆಗಣಿಸುವುದಕ್ಕಿಂತ ಪ್ರತಿದಿನ ಅವುಗಳನ್ನು ಉಳಿಸಿ ಬೆಳೆಸಿದರೆ ಸುಂದರ ಸ್ವತ್ಛ ಪರಿಸರ ನಿರ್ಮಿಸಬಹುದು. –ಯಲ್ಲಪ್ಪ ಶಿಂಧೆ, ಪರಿಸರ ಪ್ರೇಮಿ, ಮುಧೋಳ 

-ಗೋವಿಂದಪ್ಪ ತಳವಾರ

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾಣೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.