Tripura: ಸರಸ್ವತಿ ಮಾತೆ ವಿವಸ್ತ್ರ ಮೂರ್ತಿ, ಪ್ರತಿಭಟನೆ
ಕಾಲೇಜಿನಲ್ಲಿ ಘಟನೆ; ಆರೆಸ್ಸೆಸ್ ಕಾರ್ಯಕರ್ತರಿಂದ ಪ್ರನೆ
Team Udayavani, Feb 16, 2024, 12:55 AM IST
ಅಗರ್ತಲಾ: ತ್ರಿಪುರಾದ ಲಿಚುಬಗಾನ್ ಸರ್ಕಾರಿ ಕಲಾ ಮತ್ತು ಕರಕುಶಲ ಕಾಲೇಜಿನ ವಿದ್ಯಾರ್ಥಿಗಳು ಕೆತ್ತಿದ್ದು ಎನ್ನಲಾದ ಸರಸ್ವತಿ ದೇವಿಯ ವಿವಸ್ತ್ರ ಮೂರ್ತಿಯ ವಿಡಿಯೋ ವೈರಲ್ ಆಗಿದ್ದು, ಆರ್ಎಸ್ಎಸ್ ಮತ್ತು ಬಜರಂಗದಳ ಕಾರ್ಯಕರ್ತರು ಕಾಲೇಜಿಗೆ ನುಗ್ಗಿ ಪ್ರತಿಭಟನೆ ನಡೆಸಿದ್ದಾರೆ.
ಬಸಂತ್ ಪಂಚ ಮಿಯ ದಿನವಾದ ಬುಧವಾರ ಕಾಲೇಜಿನ ಆಡಳಿತ ಮಂಡಳಿ ಮತ್ತು ವಿದ್ಯಾರ್ಥಿಗಳು ಉದ್ದೇಶಪೂರ್ವಕವಾಗಿಯೇ ಸರಸ್ವತಿ ಮಾತೆಯ ಪ್ರತಿಮೆಯನ್ನು ಕೆಟ್ಟ ರೀತಿಯಲ್ಲಿ ತೋರಿಸುವ ಪ್ರಯತ್ನ ಮಾಡಿದ್ದಾರೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಪೂಜೆಗೆ ಅಡ್ಡಿಪಡಿಸಿ, ಮೂರ್ತಿಗೆ ಸೀರೆ ತೊಡಿಸುವಂತೆ ಆಗ್ರಹಿಸಿ, ಕೊನೆಗೆ ತಾವೇ ಒಂದು ಒಂದು ಸೀರೆಯನ್ನು ಉಡಿಸಿದರು. ಪರಿಸ್ಥಿತಿ ಬಿಗಡಾಯಿಸಿದ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕಾಗಮಿಸಿದರು. ಹಿಂದೂ ದೇವಾಲಯಗಳಲ್ಲಿನ ವಾಸ್ತುಶಿಲ್ಪ ಅಧ್ಯಯನ ನಿಟ್ಟಿನಲ್ಲಿ ಮೂರ್ತಿಯನ್ನು ಆ ರೀತಿಯಲ್ಲಿ ಕೆತ್ತಲಾಗಿತ್ತು. ಯಾರ ಭಾವನೆಯನ್ನೂ ನೋಯಿಸುವ ಉದ್ದೇಶ ಇರಲಿಲ್ಲ ಎಂದು ಕಾಲೇಜಿನ ಆಡಳಿತ ಮಂಡಳಿ ಹೇಳಿದೆ.