Bantwal;ಅಕ್ರಮ ಮರಳು ಸಾಗಾಟದ ಲಾರಿಗಳ ವಶ
Team Udayavani, Feb 26, 2024, 10:09 PM IST
ಬಂಟ್ವಾಳ: ಬಂಟ್ವಾಳ ಗ್ರಾಮಾಂತರ ಪೊಲೀಸರು ನಾವೂರು ಗ್ರಾಮದ ಮಣಿಹಳ್ಳದಲ್ಲಿ ಫೆ. 24ರಂದು ರಾತ್ರಿ 2 ಲಾರಿಗಳನ್ನು ತಡೆದು ಪರಿಶೀಲಿಸಿದಾಗ ಅಕ್ರಮ ಮರಳು ಸಾಗಾಟ ಪತ್ತೆಯಾಗಿದ್ದು, ಮರಳು ಸಹಿತ ಲಾರಿಗಳನ್ನು ವಶಕ್ಕೆ ಪಡೆದು ಚಾಲಕ-ಮಾಲಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಗ್ರಾಮಾಂತರ ಇನ್ಸ್ಪೆಕ್ಟರ್ ಶಿವಕುಮಾರ್ ಬಿ. ಅವರು ಸಿಬಂದಿ ಜತೆ ಗಸ್ತು ತಿರುಗುತ್ತಿದ್ದಾಗ ಲಾರಿಗಳನ್ನು ತಡೆದು ಪರಿಶೀಲಿಸಿದಾಗ ಮರಳು ಪತ್ತೆಯಾಗಿದ್ದು, ವಳಚ್ಚಿಲ್ನ ನೇತ್ರಾವತಿ ನದಿಯಿಂದ ಕದ್ದು ಅಕ್ರಮವಾಗಿ ಸಾಗಿಸಿರುವುದು ಕಂಡುಬಂದಿದೆ.
ಒಂದು ಟಿಪ್ಪರ್ ಚಾಲಕ ಕೊಡಂಬೆಟ್ಟು ನಿವಾಸಿ ಅನಿಶ್, ಮಾಲಕ ಪ್ರಜ್ವಲ್ ಶೆಟ್ಟಿ ಹಾಗೂ ಮತ್ತೂಂದು ಟಿಪ್ಪರ್ ಚಾಲಕ ಹಾಗೂ ಮಾಲಕ ತೆಂಕಕಜೆಕಾರು ನಿವಾಸಿ ಮಿಥುನ್ ವಿರುದ್ಧ ಪ್ರಕರಣ ದಾಖಲಾಗಿದೆ.