ಭಾರತ ಮೂಲದವನಿಗೆ ಮರಣದಂಡನೆ
Team Udayavani, Apr 28, 2022, 6:55 AM IST
ಸಿಂಗಾಪುರ: ಭಾರತ ಮೂಲದ ಮಲೇಷ್ಯಾ ನಿವಾಸಿ ನಾಗಯಂತ್ರಂ ಧರ್ಮಲಿಂಗಂರನ್ನು ಬುಧವಾರ ಸಿಂಗಾಪುರದಲ್ಲಿ ಗಲ್ಲಿಗೇರಿಸಲಾಗಿದೆ. ಮಾನಸಿಕ ಅಸ್ವಸ್ಥನಾಗಿದ್ದ ಧರ್ಮಲಿಂಗಂರನ್ನು 2009ರ ಡ್ರಗ್ಸ್ ಕಳ್ಳಸಾಗಣೆ ಆರೋಪದ ಮೇರೆಗೆ ಮರಣದಂಡನೆಗೆ ಗುರಿಪಡಿಸಲಾಗಿದೆ.
2009ರಲ್ಲಿ ಮಲೇಷ್ಯಾದಿಂದ ಸಿಂಗಾಪುರಕ್ಕೆ 42.72 ಗ್ರಾಂ ಹೆರಾಯಿನ್ ಕಳ್ಳಸಾಗಣೆ ಮಾಡುವಾಗ ಧರ್ಮಲಿಂಗಂ ಸಿಕ್ಕಿಹಾಕಿಕೊಂಡಿದ್ದ. ಆತನಿಗೆ ನ್ಯಾಯಾಲಯ 2010ರ ನವೆಂಬರ್ನಲ್ಲೇ ಗಲ್ಲುಶಿಕ್ಷೆಗೆ ಆದೇಶಿಸಿತ್ತು.
ಆತನ ತಾಯಿ ಹಲವು ಬಾರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ಹಿನ್ನೆಲೆ ವಿಚಾರಣೆ ಮುಂದುವರಿಸಲಾಗಿತ್ತು. ಅವರ ಏಳನೇ ಅರ್ಜಿಯನ್ನು ನ್ಯಾಯಾಲಯ ಮಂಗಳವಾರ ತಿರಸ್ಕರಿಸಿದ್ದು, ಮರಣ ದಂಡನೆ ಶಿಕ್ಷೆ ಪೂರ್ಣಗೊಳಿಸಿದೆ.