G-20 ಗೆ ರಾಜ್ಯದ ಸಿರಿ ಆತಿಥ್ಯ: ಇಬ್ಬರು ಕನ್ನಡತಿಯರಿಂದ ಸಿದ್ಧಗೊಳ್ಳಲಿದೆ ವಿಶೇಷ ಖಾದ್ಯ


Team Udayavani, Sep 7, 2023, 10:00 PM IST

millets

ಬೆಂಗಳೂರು: ಹೊಸದಿಲ್ಲಿಯಲ್ಲಿ ವಾರಾಂತ್ಯದಲ್ಲಿ ನಡೆಯಲಿರುವ ಜಿ20 ಶೃಂಗಸಭೆಗೆ ಕ್ಷಣಗಣನೆ ಆರಂಭವಾಗಿದೆ. ಅಲ್ಲಿಗೆ ಭೇಟಿ ನೀಡಲಿರುವ ಒಕ್ಕೂಟದ ಸದಸ್ಯ ರಾಷ್ಟ್ರಗಳ ಸರಕಾರಿ ಮುಖ್ಯಸ್ಥರ ಪತ್ನಿಯರಿಗೆ ರಾಜ್ಯದ ಇಬ್ಬರು ಮಹಿಳಾಮಣಿಗಳು ಸಿರಿಧಾನ್ಯ ಖಾದ್ಯಗಳ ಆತಿಥ್ಯ ನೀಡಲಿದ್ದಾರೆ! ಅದಕ್ಕಾಗಿ ಅವರಿಗೆ ಆಹ್ವಾನ ಬಂದಿದೆ.

ಕೋಲಾರ ಜಿಲ್ಲೆಯ ಕೆಜಿಎಫ್ನ ಎಚ್‌.ಜೆ. ಮಾರ್ಗರೆಟ್‌ ಹಾಗೂ ಮಂಡ್ಯದ ಕನ್ನಳ್ಳಿಯ ಕಾಗೆಹಳ್ಳದದೊಡ್ಡಿಯ ರಾಣಿ ಚಂದ್ರಶೇಖರ್‌ ಅವರನ್ನು ರಾಜ್ಯ ಕೃಷಿ ಇಲಾಖೆ ಆಯ್ಕೆ ಮಾಡಿ ಕಳುಹಿಸಿಕೊಟ್ಟಿದೆ. ಸಭೆಗೆ ಆಗಮಿಸಲಿರುವ ಜಾಗತಿಕ ನಾಯಕರ ಕುಟುಂಬದ ಸದಸ್ಯರು ರಾಜ್ಯದ ಈ ಇಬ್ಬರ ಸಿರಿಧಾನ್ಯ ಉತ್ಪನ್ನಗಳ ರುಚಿ ಸವಿಯಲಿದ್ದಾರೆ. ಇದಕ್ಕಾಗಿ ಅಂತಾರಾಷ್ಟ್ರೀಯ ಶೆಫ್ ಕೂಡ ಅಲ್ಲಿ ಇರಲಿದ್ದಾರೆ.

ಸಿರಿಧಾನ್ಯಗಳಿಂದ ತಯಾರಿಸಿದ ಮ್ಯಾಗಿ, ಪಾಸ್ತಾ, ಚಕ್ಕೆಗಳು, ರಾಗಿ ಜಾಮೂನು, ರಾಗಿ ರವೆ ಇಡ್ಲಿ ಮಿಕ್ಸ್‌, ರಾಗಿ ಮಲ್ಟ್, ರಾಗಿ ರವೆ ಮತ್ತಿತರ ಮೌಲ್ಯವರ್ಧಿತ ಉತ್ಪನ್ನಗಳನ್ನು ಮಾರ್ಗರೆಟ್‌ ಮತ್ತು ರಾಣಿ ಚಂದ್ರಶೇಖರ್‌ ಪ್ರದರ್ಶಿಸಲಿದ್ದಾರೆ. ಇಬ್ಬರೂ ಈಗಾಗಲೇ ದಿಲ್ಲಿಗೆ ತೆರಳಿದ್ದು, ತಾಲೀಮು ಆರಂಭಿಸಿದ್ದಾರೆ. ಈ ಸಂದರ್ಭದಲ್ಲಿ “ಉದಯವಾಣಿ’ಯೊಂದಿಗೆ ಖುಷಿ ಹಂಚಿಕೊಂಡರು.

“ಹೆಮ್ಮೆ ಅನಿಸುತ್ತದೆ’
ಜಿ20ಯಂತಹ ಶೃಂಗಸಭೆಯಲ್ಲಿ ರಾಜ್ಯವನ್ನು ನಾವಿಬ್ಬರೂ ಪ್ರತಿನಿಧಿಸುತ್ತಿರುವುದಕ್ಕೆ ಹೆಮ್ಮೆ ಅನಿಸುತ್ತಿದೆ. ನಮ್ಮ ಸಿರಿಧಾನ್ಯಗಳ ಉತ್ಪನ್ನಗಳ ಪ್ರದರ್ಶನಕ್ಕೆ ಇಲ್ಲಿ ವೇದಿಕೆ ಕಲ್ಪಿಸಲಾಗಿದೆ. ನವಣಕ್ಕಿ, ಊದಲಕ್ಕಿ, ಸಾಮೆ ಮತ್ತಿತರ ಧಾನ್ಯಗಳಿಂದ ತಯಾರಿಸಿದ ಮ್ಯಾಗಿ, ಪಾಸ್ತಾದಂತಹ ಖಾದ್ಯಗಳ ಜತೆಗೆ ಪಾಲಿಶ್‌ ಮಾಡಿರದ, ನಾರಿನಂಶ ನಷ್ಟವಾಗದಂತೆ ಸಂಸ್ಕರಣೆ ಮಾಡಿದ ಸಿರಿಧಾನ್ಯಗಳನ್ನು ಇಲ್ಲಿ ಪ್ರದರ್ಶನ ಮಾಡುತ್ತಿದ್ದೇನೆ ಎಂದು ಕೆಜಿಎಫ್ನ ಮಾರ್ಗರೆಟ್‌ ಹೇಳಿದರು.

“ನಾನು 2017ರಲ್ಲಿ ಈ ಸಿರಿಧಾನ್ಯಗಳ ಸಂಸ್ಕರಣೆಗೆ ಸಂಬಂಧಿಸಿದ ಇಸಾಯು ಫ‌ುಡ್‌ ಪ್ರೈ.ಲಿ. ಆರಂಭಿಸಿದೆ. ಆಗ ಮೂವರು ಕೆಲಸಗಾರರಿದ್ದರು. ಇಂದು ಸುಮಾರು 150 ರೈತರಿಂದ ವಾರ್ಷಿಕ 200-300 ಟನ್‌ ಸಿರಿಧಾನ್ಯ ಖರೀದಿಸುತ್ತಿದ್ದೇನೆ. ಅವುಗಳ ಸಂಸ್ಕರಣೆ ಜತೆಗೆ ಮೌಲ್ಯವರ್ಧಿತ ಉತ್ಪನ್ನಗಳನ್ನು ಮಾಡಿ, ಮಹಾರಾಷ್ಟ್ರ, ತಮಿಳುನಾಡು, ಪಂಜಾಬ್‌, ಉತ್ತರಾಖಂಡ, ದಿಲ್ಲಿ, ಹರಿಯಾಣಕ್ಕೆ ಪೂರೈಸುತ್ತಿದ್ದೇನೆ. 30 ಜನ ನನ್ನ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದು, 3ರಿಂದ 5 ಕೋಟಿ ರೂ. ವಾರ್ಷಿಕ ವಹಿವಾಟು ಮಾಡುತ್ತಿದ್ದೇನೆ. ಈ ಮೊದಲು ಐಟಿ ಕಂಪೆನಿಯಲ್ಲಿ ಎಚ್‌ಆರ್‌ ವಿಭಾಗದ ಮುಖ್ಯಸ್ಥೆ ಆಗಿದ್ದೆ. ಐಎಎಸ್‌ ಪರೀಕ್ಷೆ ಸಿದ್ಧತೆಗಾಗಿ 2 ಲಕ್ಷ ರೂ. ಸಂಬಳದ ಕೆಲಸ ತೊರೆದೆ. ಪರೀಕ್ಷೆಯಲ್ಲಿ ಉತ್ತೀರ್ಣ ಆಗಲಿಲ್ಲ. ಆದರೆ ಇತಿಹಾಸ ವಿಷಯ ಓದುವಾಗ ಸಿರಿಧಾನ್ಯಗಳ ಮಹತ್ವ ಗೊತ್ತಾಯಿತು. ಅಲ್ಲಿಂದ ಇದರ ಕಡೆಗೆ ಆಸಕ್ತಿ ಬೆಳೆಯಿತು ಎಂದರು.

“ಬ್ಯುಸಿ ಇದ್ದೇನೆ, ಆಗುವುದಿಲ್ಲ ಅಂದಿದ್ದೆ!”
ಸಿರಿಧಾನ್ಯಗಳಿಂದ ನಾನು ಸುಮಾರು 40 ಉತ್ಪನ್ನಗಳನ್ನು ತಯಾರಿಸುತ್ತಿದ್ದೇನೆ. ಅದರಲ್ಲೂ ವಿಶೇಷವಾಗಿ ರಾಗಿ ಜಾಮೂನು ಪೌಡರ್‌, ರಾಗಿ ರವೆ ಇಡ್ಲಿ ಮಿಕ್ಸ್‌, ರಾಗಿ ರವೆ, ಮಿಲೆಟ್‌ ನ್ಯೂಟ್ರಿಷನ್‌ ಮಿಕ್ಸ್‌ ಈಚೆಗೆ ಮಾರುಕಟ್ಟೆಯಲ್ಲಿ ಕಾಣಬಹುದು. ಈ ಐದೂ ಉತ್ಪನ್ನಗಳನ್ನು ಜಿ20ಯಲ್ಲಿ ಪ್ರದರ್ಶಿಸುತ್ತಿದ್ದೇನೆ. ಮೊದಲಿಗೆ ನನಗೆ ಕೃಷಿ ಇಲಾಖೆಯಿಂದ ಕಾರ್ಯಕ್ರಮವೊಂದಕ್ಕೆ ಭಾಗವಹಿಸುವಂತೆ ಕರೆ ಬಂತು. ಆದರೆ ಸ್ವಲ್ಪ ಬ್ಯುಸಿ ಇದ್ದುದರಿಂದ ಕಷ್ಟ ಎಂದು ಹೇಳಿದ್ದೆ. ಅನಂತರ ಸಚಿವರು ಮಾಧ್ಯಮಗಳಲ್ಲಿ ಜಿ20ಗೆ ನಾನು ಆಯ್ಕೆಯಾಗಿದ್ದನ್ನು ಪ್ರಕಟಿಸಿದರು. ಗೂಗಲ್‌ ಮಾಡಿದಾಗ ಈ ಶೃಂಗಸಭೆಯ ಮಹತ್ವ ತಿಳಿಯಿತು ಎಂದು ಮಂಡ್ಯದ ರಾಣಿ ಚಂದ್ರಶೇಖರ್‌ ಸಂತಸ ಹಂಚಿಕೊಂಡರು.

2002-03ರಲ್ಲಿ ನನಗೆ ಸಿರಿಧಾನ್ಯಗಳ ಬಗ್ಗೆ ಆಸಕ್ತಿ ಬೆಳೆಯಿತು. ಆರಂಭದಲ್ಲಿ ಚಿಕ್ಕದಾಗಿ ಇವುಗಳ ಉತ್ಪನ್ನಗಳ ವ್ಯಾಪಾರ ಆರಂಭಿಸಿದಾಗ ಮೂವರು ಇದ್ದರು. ಈಗ 13 ಜನ ಕೆಲಸ ಮಾಡುತ್ತಿದ್ದಾರೆ. ವಾರ್ಷಿಕ 1 ಟನ್‌ ಸಿರಿಧಾನ್ಯಗಳನ್ನು ಸುಮಾರು 20 ರೈತರು ಮತ್ತು ಐದು ರೈತ ಉತ್ಪಾದಕ ಸಂಸ್ಥೆ (ಎಫ್ಪಿಒ)ಗಳಿಂದ ಖರೀದಿಸುತ್ತಿದ್ದೇನೆ. ಹಳೆಬುದನೂರಿನಲ್ಲಿ ವಿ ಹೆಲ್ಪ್ ಆಹಾರ ಸಂಸ್ಕರಣೆ ಮತ್ತು ಉತ್ಪಾದನೆ ಘಟಕ ತೆರೆಯಲಾಗಿದೆ. ನಮ್ಮ ಉತ್ಪನ್ನಗಳು ಕೇರಳ, ಕೊಲ್ಕತಾ, ಜರ್ಮನಿ, ಮುಂಬಯಿ, ಬೆಂಗಳೂರಿಗೆ ಪೂರೈಕೆ ಆಗುತ್ತಿವೆ ಎಂದು ರಾಣಿ ವಿವರಿಸಿದರು.

ವಿಜಯಕುಮಾರ ಚಂದರಗಿ

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Drought Relief: ಕಾಂಗ್ರೆಸ್‌-ಬಿಜೆಪಿ ಬರ ಪರಿಹಾರ ಜಟಾಪಟಿ

Drought Relief: ಕಾಂಗ್ರೆಸ್‌-ಬಿಜೆಪಿ ಬರ ಪರಿಹಾರ ಜಟಾಪಟಿ

Drought Relief: ಎಕ್ಸ್‌ (ಟ್ವಿಟರ್‌)ನಲ್ಲೂ ಕಾಂಗ್ರೆಸ್‌-ಬಿಜೆಪಿ ವಾಕ್ಸಮರ

Drought Relief: ಎಕ್ಸ್‌ (ಟ್ವಿಟರ್‌)ನಲ್ಲೂ ಕಾಂಗ್ರೆಸ್‌-ಬಿಜೆಪಿ ವಾಕ್ಸಮರ

Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್‌ ಏಜೆಂಟ್‌ ಟ್ರಿಫ್’: ಬಿಜೆಪಿ ಆರೋಪ

Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್‌ ಏಜೆಂಟ್‌ ಟ್ರಿಫ್’: ಬಿಜೆಪಿ ಆರೋಪ

HDK ಪೆನ್‌ಡ್ರೈವ್‌ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ

HDK ಪೆನ್‌ಡ್ರೈವ್‌ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ

Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್‌.ಡಿ. ಕುಮಾರಸ್ವಾಮಿ

Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್‌.ಡಿ. ಕುಮಾರಸ್ವಾಮಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.