ಸಿತಾರ್ – ಬಾನ್ಸುರಿ ಜುಗಲ್ಬಂದಿ “ಬಸಂತ್ ಉತ್ಸವ್’
Team Udayavani, Apr 3, 2023, 5:40 AM IST
ಉಡುಪಿ: ವಿನಯ್ಸ್ ಅಕಾಡೆಮಿ ಉಡುಪಿ-ಮಣಿಪಾಲ್ ವತಿಯಿಂದ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ರವಿವಾರ ಸಂಗೀತ ಕ್ಷೇತ್ರದ ಪ್ರಸಿದ್ಧ ಕಲಾವಿದರಾದ ಪಂ| ಪ್ರವೀಣ್ ಗೋಡ್ಖಿಂಡಿ, ಉಸ್ತಾದ್ ರಫೀಕ್ ಖಾನ್ ಅವರಿಂದ ಸಿತಾರ್-ಬಾನ್ಸುರಿ ಜುಗಲ್ಬಂದಿ “ಬಸಂತ್ ಉತ್ಸವ್’ ನಡೆಯಿತು. ಸಿತಾರ್-ಬಾನ್ಸುರಿ ವಾದನದಲ್ಲಿ ತಬಲಾಪಟು ಮಾಯಾಂಕ್ ಬೇಡೆಕರ್ ಸಾಥ್ ನೀಡಿದರು. ಶಾಸ್ತ್ರೀಯ ಸಂಗೀತ ವಿವಿಧ ರಾಗಗಳಲ್ಲಿನ ತಾಳಗಳ ಹೊಂದಾಣಿಕೆ ಮಾಡಿಕೊಂಡು ಪ್ರಸ್ತುತಪಡಿಸಿದ ಸಂಗೀತ ಕಛೇರಿ ನೂರಾರು ಸಂಖ್ಯೆಯಲ್ಲಿ ನೆರೆದಿದ್ದವರನ್ನು ಮಂತ್ರಮುಗ್ಧಗೊಳಿಸಿತು.
ಮಾಹೆ ವಿ. ವಿ. ಸಹಕುಲಾಧಿಪತಿ ಡಾ| ಎಚ್. ಎಸ್ ಬಲ್ಲಾಳ್ ಸಂಗೀತ ಕಚೇರಿಯನ್ನು ಉದ್ಘಾಟಿಸಿದರು. ಆಭರಣ ಮೋಟಾರ್ಸ್ನ ಸಂಧ್ಯಾ ಕಾಮತ್, ಡಾ| ಟಿ.ಎಂ.ಎ ಪೈ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ| ಶಶಿಕಿರಣ್ ಉಮಾಕಾಂತ್, ವಿನಯ್ಸ ಆಕಾಡೆಮಿ ನಿರ್ದೇಶಕ ವಿನಯ ಭಟ್ ಉಪಸ್ಥಿತರಿದ್ದರು.
ಡಾ| ಸ್ಮಿತಾ ಪ್ರಭು ಸ್ವಾಗತಿಸಿ, ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ