ಕೋವಿಡ್ ಬಿಕ್ಕಟ್ಟಿನ ನಿವಾರಣೆಯಲ್ಲಿ ಭಾರತದ ಭರವಸೆ-ಸ್ಪುಟ್ನಿಕ್ ವಿ

ಸ್ಪುಟ್ನಿಕ್ ವಿ ಯ ಎರಡು ಡೋಸ್ ಗಳು ಒಂದೇ ಲಸಿಕೆಯ ಸ್ವಲ್ಪ ವಿಭಿನ್ನ ಆವೃತ್ತಿಗಳಾಗಿವೆ

Team Udayavani, Jun 17, 2021, 12:38 PM IST

ಕೋವಿಡ್ ಬಿಕ್ಕಟ್ಟಿನ ನಿವಾರಣೆಯಲ್ಲಿ ಭಾರತದ ಭರವಸೆ-ಸ್ಪುಟ್ನಿಕ್ ವಿ

ವಿಶ್ವದ ಅತಿದೊಡ್ಡ ವ್ಯಾಕ್ಸಿನೇಷನ್ ಅಭಿಯಾನದಲ್ಲಿ, ಭಾರತ ತನ್ನ ಜನಸಂಖ್ಯೆಯ ಪ್ರಮುಖ ಭಾಗಕ್ಕೆ ಪೂರೈಕೆ ದೊಡ್ಡ ಸವಾಲಿನ ಕೆಲಸವಾಗಿದೆ. ಇದಕ್ಕೆ ಕ್ಷಿಪ್ರ ವ್ಯಾಕ್ಸಿನೇಷನ್ ಅಭಿಯಾನ ಮತ್ತು ಲಸಿಕೆಗಳ ಆಯ್ಕೆಗಳ ಸಂಗ್ರಹದೊಂದಿಗೆ ನಿರಂತರ ಲಸಿಕೆ ಪೂರೈಕೆಯ ಅಗತ್ಯತೆಯಿದೆ.

ಇದನ್ನೂ ಓದಿ:ಬಾಂಬ್ ಬೆದರಿಕೆ ಕೇಸ್: ಮಾಜಿ ಎನ್ ಕೌಂಟರ್ ಸ್ಪೆಷಲಿಸ್ಟ್ ಶರ್ಮಾ ನಿವಾಸದ ಮೇಲೆ NIA ದಾಳಿ

1957 ಅಕ್ಟೋಬರ್ ನಲ್ಲಿ, ಸ್ಪುಟ್ನಿಕ್ (ಉಪಗ್ರಹ ಅಥವಾ ರಷ್ಯಾದ ಭಾಷೆಯಲ್ಲಿ ಪ್ರಯಾಣದ ಒಡನಾಡಿ) ಭೂಮಿಯಿಂದ ಉಡಾಯಿಸಿದ ಮೊದಲ ಉಪಗ್ರಹವಾಗಿದೆ. ಇದು ಬಾಹ್ಯಾಕಾಶವನ್ನು ಅನ್ವೇಷಿಸಲು ತಂತ್ರಜ್ಞಾನದ ವಿಸ್ತೃತ ಬಳಕೆಯ ಬಗ್ಗೆ ಮಾನವಕುಲದ ಭರವಸೆಯನ್ನು ಹುಟ್ಟುಹಾಕಿತು. ಆದರೆ, ಕಳೆದ ವರ್ಷ ರಷ್ಯಾ ಲಸಿಕೆ ಕುರಿತು ತಮ್ಮ ಪ್ರಯೋಗ ದತ್ತಾಂಶವನ್ನು ಅಲ್ಲಿಯವರೆಗೆ ಹಂಚಿಕೊಂಡಿಲ್ಲದ ಕಾರಣ ಸ್ಪುಟ್ನಿಕ್ ವಿ ಬಗ್ಗೆ ಅಪನಂಬಿಕೆ ಇತ್ತು. ಆದರೆ ಕಳೆದ ಕೆಲವು ವರ್ಷಗಳಲ್ಲಿ ನಡೆದ ಬೆಳವಣಿಗೆಯಲ್ಲಿ, ಫೆಬ್ರವರಿ 2021 ರಲ್ಲಿ ಲ್ಯಾನ್ಸೆಟ್ ತಮ್ಮ ಇತ್ತೀಚಿನ ಅಧ್ಯಯನದಲ್ಲಿ ಸ್ಪುಟ್ನಿಕ್ ವಿ ಲಸಿಕೆಯು “ಇಲ್ಲಿಯವರೆಗೆ ಅತ್ಯಂತ ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿ ಕಂಡಿದೆ” ಎಂದು ಘೋಷಿಸಿತ್ತು.

ಈ ಲಸಿಕೆಯನ್ನು ಈ ಹಿಂದೆ ಎಬೋಲಾ ಮತ್ತು ಮರ್ಸ್ ಗೆ ಲಸಿಕೆ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದ ಗಮಲೇಯ ನ್ಯಾಷನಲ್ ರಿಸಚರ್ಚ್ ಇನ್ಸ್ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿ ಅಂಡ್ ಮೈಕ್ರೋಬಯಾಲಜಿ ಅಭಿವೃದ್ಧಿಪಡಿಸಿದೆ. ಕೋವಿಡ್ -19 ರ ವಿರುದ್ಧ ಇಲ್ಲಿಯವರೆಗೆ ಅಭಿವೃದ್ಧಿಪಡಿಸಿದ ಎಲ್ಲಾ ಲಸಿಕೆಗಳಲ್ಲಿ ಮೂರು ಹಂತದ ಪ್ರಯೋಗಗಳ ನಂತರ ಸ್ಪುಟ್ನಿಕ್ ವಿ ಅತ್ಯಧಿಕ ಪರಿಣಾಮಕಾರಿತ್ವವನ್ನು (91. 6 ಪ್ರತಿಶತ) ಹೊಂದಿದೆ ಎಂದು ಗಮಲೇಯ ಇನ್ಸ್ಟಿಟ್ಯೂಟ್ ಘೋಷಿಸಿತು.

ಎರಡು ತಿಂಗಳ ನಂತರ, ಭಾರತವು ದೇಶದಲ್ಲಿ ಬಿಡುಗಡೆಯಾಗುವ ಮೂರನೇ ಕೋವಿಡ್-19 ಲಸಿಕೆ ಎಂದು ಅನುಮೋದಿಸಿತು. ಇತರ ಕೋವಿಡ್-19 ರ ಲಸಿಕೆಗಳಿಗಿಂತ ಭಿನ್ನವಾಗಿ, ಸ್ಪುಟ್ನಿಕ್ ವಿ ಒಂದು ವೈರಲ್ ವೆಕ್ಟರ್ ಆಗಿದ್ದು, ಇದರಲ್ಲಿ ಲಸಿಕೆಯ ಎರಡೂ ಪ್ರಮಾಣಗಳು ಒಂದಕ್ಕಿಂತ ಭಿನ್ನವಾಗಿರುತ್ತವೆ. ಆದಾಗ್ಯೂ, ಕೋವಿಡ್ -19 ಗೆ ಕಾರಣವಾಗುವ SARS-CoV-2 ಕೋವಿಡ್ ವೈರಸ್ ನ ಸ್ಪೈಕ್ ಪ್ರೋಟೀನ್ ಮೇಲೆ ದಾಳಿಮಾಡಲು ಎರಡೂ ಡೋಸ್ ಗಳು ವಿಭಿನ್ನ ವಾಹಕಗಳನ್ನು ಬಳಸುತ್ತವೆ. ಗುಣಸ್ವರೂಪದಲ್ಲಿ, ಸ್ಪುಟ್ನಿಕ್ ವಿ ಯ ಎರಡು ಡೋಸ್ ಗಳು ಒಂದೇ ಲಸಿಕೆಯ ಸ್ವಲ್ಪ ವಿಭಿನ್ನ ಆವೃತ್ತಿಗಳಾಗಿವೆ ಮತ್ತು ಕೋವಿಡ್ -19 ವಿರುದ್ಧ ಹೆಚ್ಚಿನ ರಕ್ಷಣೆ ನೀಡುವ ಗುರಿಯನ್ನು ಹೊಂದಿವೆ.

ಇದನ್ನೂ ಓದಿ:ಅಂತರಿಕ್ಷ ಕ್ಷೇತ್ರದಲ್ಲಿ ಚೀನಾ ಮೈಲಿಗಲ್ಲು: ಬಾಹ್ಯಾಕಾಶ ಯಾನಕ್ಕೆ ಮಾನವ ಸಹಿತ ರಾಕೆಟ್ ಉಡಾವಣೆ

ಗಮಲೇಯ ಇನ್ಸ್ಟಿಟ್ಯೂಟ್ ಸ್ಪುಟ್ನಿಕ್ ವಿ ಯ ಇತರ ಆವೃತ್ತಿಗಳನ್ನು ಅಭಿವೃದ್ಧಿಪಡಿಸುತ್ತಿರುವುದರಿಂದ, ಸ್ಪುಟ್ನಿಕ್ ವಿ ಈ ದಿನಗಳಲ್ಲಿ ಲಭ್ಯವಿರುವ ಅತ್ಯಂತ ವೈವಿಧ್ಯಮಯ ಕೋವಿಡ್ -19 ಲಸಿಕೆಯಾಗಿದೆ. ಇದರ ಸಾಮಾನ್ಯ ದ್ರವ ಆವೃತ್ತಿಯನ್ನು ಕೋವಿಶೀಲ್ಡ್ ಮತ್ತು ಕೊವಾಕ್ಸಿನ್ ಗಳನ್ನು ಸಂಗ್ರಹಿಸುವ ತಾಪಮಾನ ವ್ಯಾಪ್ತಿಯಲ್ಲಿಯೇ (2-8 ಡಿಗ್ರಿ ಸೆಲ್ಸಿಯಸ್) ಸಂಗ್ರಹಿಸಬಹುದು. ಸಾಧಾರಣ ಫ್ರಿಜ್ ತಾಪಮಾನದಲ್ಲಿ ಸಂಗ್ರಹಿಸಬಹುದಾದ ಮತ್ತೊಂದು ಆವೃತ್ತಿಯು ಅಭಿವೃದ್ಧಿಯ ಹಂತದಲ್ಲಿದೆ. ಇನ್ಸ್ಟಿಟ್ಯೂಟ್, ಈ ಹಿಂದೆ, ಸ್ಪುಟ್ನಿಕ್ ವಿ ಯ ಪುಡಿ ರೂಪವನ್ನು ಶೀಘ್ರದಲ್ಲೇ ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಘೋಷಿಸಿತ್ತು.

ಪ್ರಸ್ತುತ ಭಾರತದಲ್ಲಿರುವ ಕೋವಿಡ್ -19 ಲಸಿಕೆಗಳು – ಕೋವಿಶೀಲ್ಡ್ ಮತ್ತು ಕೊವಾಕ್ಸಿನ್ – ಖಾಸಗಿ ಆಸ್ಪತ್ರೆಗಳಲ್ಲಿ 250 ರೂ.ಗಳಿಗೆ ಮತ್ತು ಸರ್ಕಾರಿ ಕೇಂದ್ರಗಳಲ್ಲಿ ಉಚಿತವಾಗಿ ಲಭ್ಯವಿದೆ. ಆದಾಗ್ಯೂ, ಮೇ ಆರಂಭದಿಂದಲೂ ಕೋವಿಶೀಲ್ಡ್ ಮತ್ತು ಕೊವಾಕ್ಸಿನ್ ಡೋಸ್ ಗಳ ಬೆಲೆಯಲ್ಲಿ ಬದಲಾವಣೆ ಕಂಡುಬಂದಿದೆ. ಖಾಸಗಿ ಸಂಸ್ಥೆಗಳಲ್ಲಿ ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ಬೆಲೆಯನ್ನು ಕೇಂದ್ರ ಸರ್ಕಾರ ನಿಗದಿಗೊಳಿಸಿದೆ. ಭಾರತದಲ್ಲಿ, ಸ್ಪುಟ್ನಿಕ್ ವಿ ಯ ಪ್ರತಿ ಡೋಸ್ ನ ಬೆಲೆಯನ್ನು 995 ರೂ.ಗಳಿಗೆ ನಿಗದಿಪಡಿಸಲಾಗಿದೆ . ಸ್ಪುಟ್ನಿಕ್ ವಿ ಗರಿಷ್ಠ ಜಾಗತಿಕ ವ್ಯಾಪ್ತಿಯನ್ನು ಹೊಂದಿರುವ ಕೋವಿಡ್ -19 ರ ಲಸಿಕೆಯಾಗಲಿದೆ.
ಸ್ಪುಟ್ನಿಕ್ ವಿ ಪೂರೈಕೆಗಾಗಿ 60 ಕ್ಕೂ ಹೆಚ್ಚು ದೇಶಗಳು ಒಪ್ಪಂದಗಳಿಗೆ ಸಹಿ ಹಾಕಿವೆ. ಲಸಿಕೆಯ ಅಭಿವೃದ್ಧಿಗೆ ಧನಸಹಾಯ ನೀಡಿದ ದಿ ರಷ್ಯನ್ ಡೈರೆಕ್ಟ್ ಇನ್ವೆಸ್ಟ್ ಮೆಂಟ್ ಫಂಡ್ (ಆರ್ ಡಿಐಎಫ್), ಐದು ಭಾರತೀಯ ಸಂಸ್ಥೆಗಳೊಂದಿಗೆ 850 ಮಿಲಿಯನ್ ಅಥವಾ 85 ಕೋಟಿ ಡೋಸ್ ಗಳ ಲಸಿಕೆ ತಯಾರಿಸಲು ಒಪ್ಪಂದ ಮಾಡಿಕೊಂಡಿದೆ.

ಆ ಐದು ಭಾರತೀಯ ಸಂಸ್ಥೆಗಳೆಂದರೆ ಪ್ಯಾನೇಸಿಯಾ ಬಯೋಟೆಕ್, ವಿರ್ಜೋ ಬಯೋಟೆಕ್, ಸ್ಟೆಲಿಸ್ ಬಯೋಫಾರ್ಮಾ, ಗ್ಲ್ಯಾಂಡ್ ಫಾರ್ಮಾ ಮತ್ತು ಹೆಟೆರೊ. ಇತ್ತೀಚೆಗೆ, ಸ್ಪುಟ್ನಿಕ್ ವಿ ಲಸಿಕೆಯ 60,000 ಡೋಸ್ ಗಳ ಎರಡನೇ ಲೋಡ್ ಭಾರತಕ್ಕೆ ಬಂದಿದೆ. ದೇಶಗಳಲ್ಲಿ ಲಸಿಕೆ ಚಾಲನೆಯನ್ನು ತ್ವರಿತಗೊಳಿಸಲು ಮತ್ತು ಕಡಿಮೆ ಅವಧಿಯಲ್ಲಿ ಕೋವಿಡ್-19 ವಿರುದ್ಧದ ಹೋರಾಟವನ್ನು ಬಲಪಡಿಸಲು ಆರ್ ಡಿ ಐಎಫ್ ಇತ್ತೀಚೆಗೆ ಸ್ಪುಟ್ನಿಕ್ ಲೈಟ್ ಎಂಬ ಏಕ ಡೋಸ್ ಕೋವಿಡ್-19 ಲಸಿಕೆಯನ್ನು ಅಧಿಕೃತಗೊಳಿಸಿದೆ.

ಚುಚ್ಚುಮದ್ದನ್ನು ನೀಡಿದ 28 ದಿನಗಳ ನಂತರದ ಮಾಹಿತಿಯ ಪ್ರಕಾರ ಈ ಲಸಿಕೆಯು 79.4% ಪರಿಣಾಮಕಾರಿತ್ವ ಕಂಡು ಬಂದಿದೆ. ಡಿಸೆಂಬರ್ 5 ಮತ್ತು ಏಪ್ರಿಲ್ 15 ರ ನಡುವಿನ ಸಾಮೂಹಿಕ ವ್ಯಾಕ್ಸಿನೇಷನ್ ಕಾರ್ಯಕ್ರಮದ ಸಮಯದಲ್ಲಿ ಒಂದೇ ಚುಚ್ಚುಮದ್ದಿನೊಂದಿಗೆ ಲಸಿಕೆ ಹಾಕಿದ ಆದರೆ ಯಾವುದೇ ಕಾರಣಕ್ಕೂ ಎರಡನೆಯ ಡೋಸ್ ಅನ್ನು ಪಡೆಯದ ರಷ್ಯನ್ನರಿಂದ ಡೇಟಾವನ್ನು ಪಡೆಯಲಾಗಿದೆ. ಇದು ಶೀಘ್ರದಲ್ಲೇ ಭಾರತದಲ್ಲಿಯೂ ಬಿಡುಗಡೆಯಾಗಬಹುದು.

ಭಾರತದಲ್ಲಿ ಕೋವಿಡ್ -19 ಲಸಿಕೆ ಚಾಲನೆಯ ಹೊಸ ಹಂತವು ಪ್ರತಿ ವಯಸ್ಕರಿಗೆ ವ್ಯಾಕ್ಸಿನೇಷನ್ ಮಾಡಲು ಅರ್ಹತೆಯನ್ನು ನೀಡುತ್ತದೆ, ಭಾರತದಲ್ಲಿ ಸ್ಪುಟ್ನಿಕ್ ವಿ ಅನ್ನು ಪ್ರಾರಂಭಿಸುವುದು ಪರಿಣಾಮಕಾರಿಯಾಗಲಿದೆ. ಜನಸಂಖ್ಯೆಯ ಬಹುಪಾಲು ಭಾಗಕ್ಕೆ ಲಸಿಕೆ ಹಾಕುವ ಗುರಿಯೊಂದಿಗೆ, ಈ ವರ್ಷದ ಕೊನೆಯ ತ್ರೈಮಾಸಿಕದಲ್ಲಿ ನಿರೀಕ್ಷಿಸಲಾಗಿರುವ ಕೋವಿಡ್ 19 ಪ್ರಕರಣಗಳಲ್ಲಿ ಮುಂಬರುವ ವೈರಸ್ ವಿರುದ್ಧ ಹೋರಾಡಲು ಭಾರತ ನಿರ್ಧರಿಸಿದೆ.

ಭಾರತದಲ್ಲಿ ಪ್ರತಿ ವಯಸ್ಕರಿಗೂ ವ್ಯಾಕ್ಸಿನೇಷನ್ ಗೆ ಅರ್ಹತೆಯನ್ನು ನೀಡುವ ಕೋವಿಡ್ -19 ಲಸಿಕೆ ಚಾಲನೆಯ ಹೊಸ ಹಂತದೊಂದಿಗೆ, ಭಾರತದಲ್ಲಿ ಸ್ಪುಟ್ನಿಕ್ ವಿ ಯ ಬಿಡುಗಡೆಯು ದಿಕ್ಕನ್ನೇ ಬದಲಾಯಿಸಬಹುದು. ಜನಸಂಖ್ಯೆಯ ಬಹುಪಾಲು ಸಂಖ್ಯೆಗೆ ಲಸಿಕೆ ಹಾಕುವ ಗುರಿಯೊಂದಿಗೆ, ಈ ವರ್ಷದ ಕೊನೆಯ ತ್ರೈಮಾಸಿಕದಲ್ಲಿ ನಿರೀಕ್ಷಿಸಲಾಗಿರುವ ಕೋವಿಡ್-19 ಪ್ರಕರಣಗಳ ತೀವ್ರ ಏರಿಕೆಯ ವಿರುದ್ಧ ಸೆಣಸಲು ಭಾರತವು ನಿರ್ಧರಿಸಿದೆ.

*ಡಾ. ಗಜೇಂದ್ರ ಸಿಂಗ್, ಸಾರ್ವಜನಿಕ ಆರೋಗ್ಯ ತಜ್ಞರು

ಟಾಪ್ ನ್ಯೂಸ್

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

10-ramanagara

Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3–child-growth

Child Growth: ಮಕ್ಕಳು ಬೇಗನೇ ದೊಡ್ಡವರಾಗುವುದು

2-bamboo-brush

Bamboo:ಶುದ್ಧ ಮತ್ತು ಹಸುರು ಪರಿಸರ ಕಾಯ್ದುಕೊಳ್ಳಲು ಹಲ್ಲುಜ್ಜುವ ಬಿದಿರಿನಬ್ರಶ್‌ ಮೊರೆಹೋಗಿ

2-kidney-day

World Kidney Day: ಹಿಮೋಡಯಾಲಿಸಿಸ್‌: ಯಾವಾಗ ಅಗತ್ಯ? ಯಾಕೆ ಆವಶ್ಯಕ? ಕಾರ್ಯನಿರ್ವಹಣೆ ಹೇಗೆ?

3-health

Rare diseases: ಅಪರೂಪದ ರೋಗಗಳು: ಕೆಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

ದಿನಕ್ಕೆ ಹಿಡಿಯಷ್ಟು ಬಾದಾಮಿ ತಿನ್ನಿ, ಆರೋಗ್ಯ ಕಾಪಾಡಿಕೊಳ್ಳಿ: ಡಾ.ಮಧುಮಿತ ಕೃಷ್ಣನ್ ಸಲಹೆ

ದಿನಕ್ಕೆ ಹಿಡಿಯಷ್ಟು ಬಾದಾಮಿ ತಿನ್ನಿ, ಆರೋಗ್ಯ ಕಾಪಾಡಿಕೊಳ್ಳಿ: ಡಾ.ಮಧುಮಿತ ಕೃಷ್ಣನ್ ಸಲಹೆ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

10-ramanagara

Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

9-udupi

ಶ್ರೀ ನಿತ್ಯಾನಂದ ಸ್ವಾಮಿ ಮಂದಿರ ಮಠ; ಧ್ಯಾನ ಮಂದಿರ, ಭೋಜನ ಶಾಲೆ ನಿರ್ಮಾಣ ಕಾಮಗಾರಿಗೆ ಚಾಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.