ಐಪಿಎಲ್‌: ಕೋಲ್ಕತಾ ನೈಟ್‌ರೈಡರ್ ವಿರುದ್ಧ ಸನ್‌ರೈಸರ್ ಹೈದರಾಬಾದ್‌ಗೆ ಗೆಲುವು


Team Udayavani, Apr 15, 2022, 11:26 PM IST

pil

ಮುಂಬೈ: ಶುಕ್ರವಾರ ನಡೆದ ಐಪಿಎಲ್‌ ಪಂದ್ಯದಲ್ಲಿ ಪ್ರಬಲ ಕೋಲ್ಕತಾ ನೈಟ್‌ರೈಡರ್ ತಂಡವನ್ನು ಹೈದರಾಬಾದ್‌ ಸುಲಭವಾಗಿ ಸೋಲಿಸಿದೆ.

ಮೊದಲು ಬ್ಯಾಟಿಂಗ್‌ ಮಾಡಿದ ಕೋಲ್ಕತ 20 ಓವರ್‌ಗಳಲ್ಲಿ 8 ವಿಕೆಟಿಗೆ 175 ರನ್‌ ಗಳಿಸಿ ಸವಾಲೊಡ್ಡಿತು. ಇದನ್ನು ಸರಾಗವಾಗಿ ಬೆನ್ನತ್ತಿದ ಹೈದರಾಬಾದ್‌ ಕೇವಲ 17.5 ಓವರ್‌ಗಳಲ್ಲಿ 3 ವಿಕೆಟ್‌ 176 ರನ್‌ ಗಳಿಸಿತು.

ಕೋಲ್ಕತ ನೀಡಿದ ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ಹೈದರಾಬಾದ್‌ ಕೈಹಿಡಿದಿದ್ದು ರಾಹುಲ್‌ ತ್ರಿಪಾಠಿ ಮತ್ತು ಐಡೆನ್‌  ತ್ರಿಪಾಠಿ ಕೇವಲ 37 ಎಸೆತಗಳಲ್ಲಿ 4 ಬೌಂಡರಿ, 6 ಸಿಕ್ಸರ್‌ ಸಮೇತ ಅಬ್ಬರದ 71 ರನ್‌ ಗಳಿಸಿದರು. ಇವರಷ್ಟೇ ಅಬ್ಬರ ತೋರಿದ ಮಾಕ್ರìಮ್‌ 36 ಎಸೆತಗಳಲ್ಲಿ, 6 ಬೌಂಡರಿ, 4 ಸಿಕ್ಸರ್‌ಗಳೊಂದಿಗೆ 68 ರನ್‌ ಚಚ್ಚಿದರು. ಈ ಮೂಲಕ 7 ವಿಕೆಟ್‌ಗಳಿಂದ ಜಯ ಸಾಧಿಸಿದರು. ಆಂಡ್ರೆ ರಸೆಲ್‌ 20 ರನ್‌ ನೀಡಿ 2 ವಿಕೆಟ್‌ ಪಡೆದರೂ ಯಾವುದೇ ಪ್ರಯೋಜನವಾಗಲಿಲ್ಲ.

ಕೋಲ್ಕತ ಉತ್ತಮ ಮೊತ್ತ: ಮೊದಲು ಬ್ಯಾಟಿಂಗ್‌ ಮಾಡಿದ ಕೋಲ್ಕತ ಪರ ಏರಾನ್‌ ಫಿಂಚ್‌ ತಾನೆದುರಿಸಿದ 2ನೇ ಎಸೆತವನ್ನೇ ಸಿಕ್ಸರ್‌ಗೆ ಬಡಿದಟ್ಟುವ ಮೂಲಕ ಶುಭಾರಂಭವನ್ನೇ ಮಾಡಿದರು. ಆದರೆ ಇವರ ಆಟ ಏಳೇ ರನ್ನಿಗೆ ಮುಗಿಯಿತು. ಮಾರ್ಕೊ ಜಾನ್ಸೆನ್‌ ಹೈದರಾಬಾದ್‌ಗೆ ಮೊದಲ ಯಶಸ್ಸು ತಂದಿತ್ತರು. ಮತ್ತೋರ್ವ ಓಪನರ್‌ ವೆಂಕಟೇಶ್‌ ಐಯ್ಯರ್‌ ಕೂಡ ಸಿಡಿದು ನಿಲ್ಲಲಿಲ್ಲ. ಇವರ ಗಳಿಕೆ ಕೇವಲ 6 ರನ್‌.

ನಟರಾಜನ್‌ ಅವಳಿ ಆಘಾತ: ಎಡಗೈ ಮಧ್ಯಮ ವೇಗಿ ಟಿ.ನಟರಾಜನ್‌ ತಮ್ಮ ಮೊದಲ ಓವರ್‌ನಲ್ಲೇ ಅವಳಿ ಆಘಾತವಿಕ್ಕಿದರು. ಮೊದಲ ಎಸೆತದಲ್ಲೇ ಐಯ್ಯರ್‌ ಅವರನ್ನು ಕ್ಲೀನ್‌ಬೌಲ್ಡ್‌ ಮಾಡಿ ಪೆವಿಲಿಯನ್ನಿಗೆ ಅಟ್ಟಿದರು. 3ನೇ ಎಸೆತದಲ್ಲಿ ಸುನೀಲ್‌ ನಾರಾಯಣ್‌ ಅವರ ವಿಕೆಟ್‌ ಉರುಳಿಸಿದರು. ನಾರಾಯಣ್‌ ತಾನೆದುರಿಸಿದ ಮೊದಲ ಎಸೆತವನ್ನೇ ಸಿಕ್ಸರ್‌ಗೆ ಬಡಿದಟ್ಟಿದ್ದರು. ಪವರ್‌ ಪ್ಲೇ ಮುಕ್ತಾಯಕ್ಕೆ ಕೆಕೆಆರ್‌ 3 ವಿಕೆಟಿಗೆ ಕೇವಲ 38 ರನ್‌ ಮಾಡಿ ಪರದಾಡುತ್ತಿತ್ತು.

ಆಗ ನಾಯಕ ಶ್ರೇಯಸ್‌ ಅಯ್ಯರ್‌-ನಿತೀಶ್‌ ರಾಣಾ ಜೋಡಿ ಕ್ರೀಸ್‌ನಲ್ಲಿತ್ತು. ಇಬ್ಬರೂ ತೀವ್ರ ಎಚ್ಚರಿಕೆಯ ಆಟವಾಡುತ್ತ ಇನ್ನಿಂಗ್ಸ್‌ ಬೆಳೆಸತೊಡಗಿದರು. 10 ಓವರ್‌ ಮುಕ್ತಾಯಕ್ಕೆ ಇನ್ನೇನು ಒಂದು ಎಸೆತ ಇದೆ ಎನ್ನುವಾಗ ಉಮ್ರಾನ್‌ ಮಲಿಕ್‌ ಈ ಜೋಡಿಯನ್ನು ಬೇರ್ಪಡಿಸಲು ಯಶಸ್ವಿಯಾದರು. 28 ರನ್‌ ಮಾಡಿದ ಶ್ರೇಯಸ್‌ ಐಯ್ಯರ್‌ ಬೌಲ್ಡ್‌ ಆದರು. 25 ಎಸೆತ ಎದುರಿಸಿದ ಕೆಕೆಆರ್‌ ಕಪ್ತಾನ 3 ಬೌಂಡರಿ ಹೊಡೆದಿದ್ದರು. ಅರ್ಧ ಹಾದಿ ಪೂರ್ತಿಗೊಳ್ಳುವಾಗ ಕೋಲ್ಕತಾ 4 ವಿಕೆಟಿಗೆ 70 ರನ್‌ ಮಾಡಿತ್ತು.

ಈ ಹಂತದಲ್ಲಿ ನಿತೀಶ್‌ ರಾಣಾ ತಮ್ಮ ಬ್ಯಾಟಿಂಗ್‌ ಪ್ರತಾಪ ತೋರಲಾರಂಭಿಸಿದರು. 19ನೇ ಇನಿಂಗ್ಸ್‌ ಬಳಿಕ ರಾಣಾ ಐಪಿಎಲ್‌ನಲ್ಲಿ ಮೊದಲ ಅರ್ಧಶತಕ ಬಾರಿಸಿದರು. ರಾಣಾಗೆ ಶೆಲ್ಡನ್‌ ಜಾಕ್ಸನ್‌ (7) ಅವರಿಂದ ಬೆಂಬಲ ಲಭಿಸಲಿಲ್ಲ. ಡೆತ್‌ ಓವರ್‌ಗಳಲ್ಲಿ ಆ್ಯಂಡ್ರೆ ರಸೆಲ್‌ ಕೂಡಿಕೊಂಡರು. 16ನೇ ಓವರ್‌ ಎಸೆದ ಉಮ್ರಾನ್‌ ಮಲಿಕ್‌ ಕೇವಲ 2 ರನ್‌ ನೀಡಿ ರಸೆಲ್‌ ಅವರನ್ನು ಕಟ್ಟಿಹಾಕಿದ್ದೊಂದು ವಿಶೇಷ.

ಅಂತಿಮ ಓವರ್‌ ಎಸೆಯಲು ಬಂದ ನಟರಾಜನ್‌ ಇಲ್ಲಿಯೂ ದೊಡ್ಡ ಯಶಸ್ಸು ಸಂಪಾದಿಸಿದರು. ನಿತೀಶ್‌ ರಾಣಾ ಆಟಕ್ಕೆ ತೆರೆ ಎಳೆದರು. ರಾಣಾ ಗಳಿಕೆ 36 ಎಸೆತಗಳಿಂದ 54 ರನ್‌ (6 ಬೌಂಡರಿ, 2 ಸಿಕ್ಸರ್‌). ಪ್ಯಾಟ್‌ ಕಮಿನ್ಸ್‌ ಗಳಿಕೆ ಕೇವಲ 3 ರನ್‌. ಆದರೆ ರಸೆಲ್‌ ತಮ್ಮ ಛಾತಿಗೆ ತಕ್ಕ ಪ್ರದರ್ಶನ ನೀಡಿ 49 ರನ್‌ ಬಾರಿಸಿ ಅಜೇಯರಾಗಿ ಉಳಿದರು. 25 ಎಸೆತ ಎದುರಿಸಿದ ರಸೆಲ್‌ 4 ಸಿಕ್ಸರ್‌, 4 ಫೋರ್‌ ಬಾರಿಸಿದರು. ಹೈದರಾಬಾದ್‌ ಪರ ಟಿ.ನಟರಾಜನ್‌ 3, ಉಮ್ರಾನ್‌ ಮಲಿಕ್‌ 2 ವಿಕೆಟ್‌ ಉಡಾಯಿಸಿದರು.

ಫಿಂಚ್‌, ಅಮಾನ್‌ ಆಟ: ಕೆಕೆಆರ್‌ ಪರ ಏರಾನ್‌ ಫಿಂಚ್‌ ಮತ್ತು ಅಮಾನ್‌ ಖಾನ್‌ ಪದಾರ್ಪಣೆಗೈದರು. ಜತೆಗೆ ಶೆಲ್ಡನ್‌ ಜಾಕ್ಸನ್‌ ಕೂಡ ಅವಕಾಶ ಪಡೆದರು. ಇವರಿಗಾಗಿ ಜಾಗ ಬಿಟ್ಟವರು ಅಜಿಂಕ್ಯ ರಹಾನೆ, ಸ್ಯಾಮ್‌ ಬಿಲ್ಲಿಂಗ್ಸ್‌ ಮತ್ತು ರಾಸಿಖ್‌ ಸಲಾಂ. ಇದು ಏರಾನ್‌ ಫಿಂಚ್‌ ಪಾಲ್ಗೊಳ್ಳುತ್ತಿರುವ 9ನೇ ಐಪಿಎಲ್‌ ತಂಡವೆಂಬುದೊಂದು ದಾಖಲೆ. ಹೈದರಾಬಾದ್‌ ತಂಡದಲ್ಲಿ ಗಾಯಾಳು ವಾಷಿಂಗ್ಟನ್‌ ಸುಂದರ್‌ ಬದಲು ಕರ್ನಾಟಕದ ಜಗದೀಶ್‌ ಸುಚಿತ್‌ ಕಾಣಿಸಿಕೊಂಡರು.

ಸಂಕ್ಷಿಪ್ತ ಸ್ಕೋರ್‌: ಕೋಲ್ಕತ 20 ಓವರ್‌, 175/8 (ನಿತೀಶ್‌ ರಾಣಾ 54, ಆಂಡ್ರೆ ರಸೆಲ್‌ 49, ಟಿ.ನಟರಾಜನ್‌ 37ಕ್ಕೆ 3, ಉಮ್ರಾನ್‌ ಮಲಿಕ್‌ 27ಕ್ಕೆ 2). ಹೈದರಾಬಾದ್‌ 17.5 ಓವರ್‌, 176/3 (ರಾಹುಲ್‌ ತ್ರಿಪಾಠಿ 71, ಐಡೆನ್‌ 68, ಆಂಡ್ರೆ ರಸೆಲ್‌ 20ಕ್ಕೆ 2).

ಟಾಪ್ ನ್ಯೂಸ್

Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ

Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ

Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೋಟಿಸ್

Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೊಟೀಸ್

LS Polls: ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರಾ ಪ್ರಿಯಾಂಕಾ ಗಾಂಧಿ…? ವರದಿ ಹೇಳೋದೇನು

Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್‌ಗೆ ಭಾರಿ ಡಿಮ್ಯಾಂಡ್ ‌

Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್‌ಗೆ ಭಾರಿ ಡಿಮ್ಯಾಂಡ್ ‌

Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ

Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqeewqe

Mumbai Indians ವಿರುದ್ಧ ತವರಿನ ಅಂಗಳ: ರಾಹುಲ್‌ಗೆ ಮಹತ್ವದ ಪಂದ್ಯ

PCB

Champions Trophy ತಾಣ ಅಂತಿಮ ಲಾಹೋರ್‌, ಕರಾಚಿಯಲ್ಲಿ: ಭಾರತದ ಪಂದ್ಯಗಳೆಲ್ಲಿ?

kejriwal 2

CM ‘ಅಲಂಕಾರಿಕವಲ್ಲ’: ಕೇಜ್ರಿಗೆ ಮತ್ತೆ ಕೋರ್ಟ್‌ ಗುದ್ದು

1-wewqwq-eqw

Amit Shah ನಕಲಿ ವೀಡಿಯೋ :ತೆಲಂಗಾಣ ಸಿಎಂಗೆ ಪೊಲೀಸ್‌ ಸಮನ್ಸ್‌

1-wqqwqwqeqwe

Kodava Hockey: ಚೇಂದಂಡಕ್ಕೆ 3ನೇ ಪ್ರಶಸ್ತಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ

Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ

Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೋಟಿಸ್

Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೊಟೀಸ್

Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!

Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!

LS Polls: ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರಾ ಪ್ರಿಯಾಂಕಾ ಗಾಂಧಿ…? ವರದಿ ಹೇಳೋದೇನು

Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ

Sandalwood: ಧೀರೇನ್‌ ರೀ ಇಂಟ್ರೊಡಕ್ಷನ್‌

Sandalwood: ಧೀರೇನ್‌ ರೀ ಇಂಟ್ರೊಡಕ್ಷನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.