Terrorism: ತಾಜ್ ಉಗ್ರದಾಳಿ ಬೆದರಿಕೆ: ಬಂಧನ
Team Udayavani, Sep 2, 2023, 9:54 PM IST
ಮುಂಬೈ: 26/11ರ ಮಾದರಿಯಲ್ಲೇ ಮುಂಬೈನ ತಾಜ್ ಹೋಟೆಲ್ನಲ್ಲಿ ಮತ್ತೂಂದು ಭಯೋತ್ಪಾದಕ ದಾಳಿ ನಡೆಯಲಿದೆ. ಪಾಕಿಸ್ತಾನದ ಇಬ್ಬರು ಉಗ್ರರು ಅದಕ್ಕಾಗಿಯೇ ಜಲ ಮಾರ್ಗದ ಮೂಲಕ ಭಾರತ ತಲುಪಿದ್ದಾರೆ! ಹೀಗೆಂದು ಪೊಳ್ಳು ಬೆದರಿಕೆ ಒಡ್ಡಿ, ಸುಳ್ಳು ಕರೆ ಮಾಡಿದ್ದ ಭೂಪ ಇದೀಗ ಮುಂಬೈ ಪೊಲೀಸರ ಅತಿಥಿಯಾಗಿದ್ದಾನೆ.
ಗಾಜಿಯಾಬಾದ್ ಮೂಲದ ನಿವಾಸಿ ಮುಕೇಶ್ ಸಿಂಗ್ ಎಂಬ ಹೆಸರಿನಲ್ಲಿ ಪೊಲೀಸ್ ಕಚೇರಿಗೆ ಗುರುವಾರ ವ್ಯಕ್ತಿಯೊಬ್ಬ ಕರೆ ಮಾಡಿ ಉಗ್ರದಾಳಿಯ ಬಗ್ಗೆ ಮಾಹಿತಿ ನೀಡಿದ್ದ. ಕೂಡಲೇ ಪೊಲೀಸರು ಭದ್ರತೆ ಹೆಚ್ಚುಗೊಳಿಸಿದ್ದಲ್ಲದೇ, ಕರೆ ಮಾಡಿದವನ ಮೂಲ ಕಂಡುಹಿಡಿಯಲು ಬೆನ್ನತ್ತಿದ್ದಾರೆ. ತನಿಖೆಯಲ್ಲಿ ಕರೆ ಮಾಡಿರುವ ವ್ಯಕ್ತಿ ಮುಂಬೈನ ಗೋಲಿಬಾರ್ ರಸ್ತೆಯ ನಿವಾಸಿ ಜಗದಂಬಾ ಪ್ರಸಾದ್ ಸಿಂಗ್ ಎಂಬುದು ಪತ್ತೆಯಾಗಿದ್ದು, ಜನರಲ್ಲಿ ಭೀತಿ ಹುಟ್ಟಿಸಲು ಈ ರೀತಿ ಸುಳ್ಳು ಉಗ್ರದಾಳಿಯ ಬೆದರಿಕೆ ಒಡ್ಡಿದ್ದಾನೆಂಬುದು ಬಳಿಕ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿ, ಆತನನ್ನು ಬಂಧಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Threat: ಚುನಾವಣಾ ಫಲಿತಾಂಶಕ್ಕೂ ಮುನ್ನ ನಿಮ್ಮ ಫಲಿತಾಂಶ ಬರಲಿದೆ… ಸಚಿವರಿಗೆ ಜೀವ ಬೆದರಿಕೆ
Bihar: 2025ರ ಚುನಾವಣೆಗೂ ಮುನ್ನ ಬಿಜೆಪಿಯಿಂದ 10 ಲಕ್ಷ ಸರ್ಕಾರಿ ಉದ್ಯೋಗದ ಭರವಸೆ
Supreme Court ಸಲಹೆ; ಹೊಂದಾಣಿಕೆಯು ಸುಖ ದಾಂಪತ್ಯದ ಅಡಿಪಾಯ
Rohit Vemula ದಲಿತ ಅಲ್ಲ; ಪೊಲೀಸ್ ವರದಿಯಲ್ಲಿ ಉಲ್ಲೇಖ: ಏನಿದು ಪ್ರಕರಣ?
Amit Shah ನಕಲಿ ವೀಡಿಯೋ ಕೇಸ್: ಕಾಂಗ್ರೆಸ್ ಮುಖಂಡನ ಸೆರೆ
MUST WATCH
ಹೊಸ ಸೇರ್ಪಡೆ
ಬಿಗ್ಬಾಸ್ ವಿಜೇತ ಎಲ್ವಿಶ್ ಯಾದವ್ ವಿರುದ್ಧ ಅಕ್ರಮ ವರ್ಗಾವಣೆ ಕೇಸ್ ದಾಖಲಿಸಿದ ಇ.ಡಿ
T20 World Cup; ಅಮೆರಿಕ ತಂಡದಲ್ಲಿ ಮೂಡಿಗೆರೆಯ ನಾಸ್ತುಷ್ ಕೆಂಜಿಗೆಗೆ ಸ್ಥಾನ
Kalaburagi Lok Sabha Constituency: ಖರ್ಗೆಗೆ ಪ್ರತಿಷ್ಠೆಯ ಕಣ: ಜಾಧವ್ ಏಕಾಂಗಿ ಫೈಟ್
Prajwal Revanna Case; ರೆಕಾರ್ಡ್ ಸ್ಪೀಡ್ನಲ್ಲಿ ತನಿಖೆ ನಡೆಸಲಿ: ಅಣ್ಣಾಮಲೈ
Belgaum Lok Sabha Constituency: ಅನುಭವದ ರಾಜಕಾರಣಕ್ಕೆ ಯುವ ಮುಖದ ಸವಾಲು