ಸರಕಾರಕ್ಕೆ GST ಸಂಗ್ರಹವೇ ಸವಾಲು- ಇದುವರೆಗೆ ಸಂಗ್ರಹಿಸಿದ್ದು ಕೇವಲ 68 ಸಾವಿರ ಕೋ.ರೂ.
Team Udayavani, Jan 21, 2024, 12:48 AM IST
ಬೆಂಗಳೂರು: ರಾಜ್ಯದ ಜಿಎಸ್ಟಿ ಸಂಗ್ರಹದಲ್ಲಿ ಹಿನ್ನಡೆ ಉಂಟಾಗಿದ್ದು, ಈ ಸಾಲಿನ ಗುರಿ ಮುಟ್ಟುವ ಸವಾಲು ಸರಕಾರದ ಮುಂದಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಸುಮಾರು 6 ರಿಂದ 8 ಸಾವಿರ ಕೋಟಿ ರೂ. ತೆರಿಗೆ ಸಂಗ್ರಹ ಖೋತಾ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಪ್ರಸಕ್ತ ವಿತ್ತೀಯ ವರ್ಷದಲ್ಲಿ ರಾಜ್ಯ ದಲ್ಲಿ ಜಿಎಸ್ಟಿ ಗುರಿ ಇರುವುದು 1.01 ಲಕ್ಷ ಕೋಟಿ ರೂ. ಆದರೆ ಜ. 10ರ ವರೆಗೆ ಸಂಗ್ರಹವಾಗಿರುವುದು 68 ಸಾವಿರ ಕೋಟಿ ರೂ. ಮುಂದಿನ 3 ತಿಂಗಳಲ್ಲಿ 31 ಸಾವಿರ ಕೋ.ರೂ. ಸಂಗ್ರಹಿಸುವ ಸವಾಲು ವಾಣಿಜ್ಯ ತೆರಿಗೆ ಇಲಾಖೆ ಮುಂದಿದೆ. ಸುಮಾರು 6ರಿಂದ 8 ಸಾವಿರ ಕೋಟಿ ರೂ. ಖೋತಾ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.
2023-24ನೇ ಸಾಲಿನಲ್ಲಿ ಮೂಲ ಜಿಎಸ್ಟಿ ಗುರಿ ಇದ್ದದ್ದು 92 ಸಾವಿರ ಕೋಟಿ ರೂ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಅನಂತರ ಈ ಗುರಿಯನ್ನು ಪರಿಷ್ಕರಿಸಿ, 1.01 ಲಕ್ಷ ಕೋ.ರೂ.ಗೆ ಹೆಚ್ಚಿಸಿತ್ತು. ಈ ಹೆಚ್ಚುವರಿ ಸಂಪನ್ಮೂಲ ವಿವಿಧ ಗ್ಯಾರಂಟಿ ಯೋಜನೆಗಳಿಂದ ಪರೋಕ್ಷವಾಗಿ ಬರಲಿದೆ ಎಂದು ಅಂದಾಜಿಸಿತ್ತು.
ಸರಕಾರದ ಲೆಕ್ಕಾಚಾರದ ಪ್ರಕಾರ ಯೋಜನೆ
ಗಳಿಂದ ಜನರ ಕೈಗೆ ಹಣ ಸೇರುತ್ತಿರುವುದು ನಿಜ. ಆದರೆ ಅದರ ಹರಿವು ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ. ಮೂಲತಃ ನಮ್ಮದು ಉಳಿತಾಯ ಸಂಸ್ಕೃತಿ. ಹೀಗಾಗಿ ಜನರು ಹಣ ಕೂಡಿಡುತ್ತಾರೆ. ಗುರಿ ಸಾಧನೆ ಕಷ್ಟವಾಗುತ್ತಿದೆ ಎಂದು ವಾಣಿಜ್ಯ ಇಲಾಖೆ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ
MUST WATCH
ಹೊಸ ಸೇರ್ಪಡೆ
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್