Robot: ಮನಸ್ಸಿನ ಭಾವನೆಗೂ ಸ್ಪಂದಿಸಲಿದೆ ರೊಬೋಟ್‌

ರೊಬೋಟ್‌ಗಳಿಗೆ ಪ್ರಜ್ಞೆ ತುಂಬುವ‌ಲ್ಲಿ ಐಐಐಟಿ ವಿಜ್ಞಾನಿಗಳಿಗೆ ಆರಂಭಿಕ ಯಶಸ್ಸು

Team Udayavani, Nov 23, 2023, 11:15 PM IST

robot

ಬೆಂಗಳೂರು: ರೊಬೋಟ್‌, ಚಾಟ್‌ಬಾಕ್ಸ್‌ಗಳು ನಮ್ಮ ಮನಸ್ಸಿನ ಭಾವನೆಗಳನ್ನು ಅರಿತು ಸ್ಪಂದಿಸುವ ದಿನ ದೂರವಿಲ್ಲ!

ಯಂತ್ರಗಳಿಗೆ ಮಾನವ ಪ್ರಜ್ಞೆಯನ್ನು ತುಂಬುವ ಮೊದಲ ಹೆಜ್ಜೆಯಲ್ಲಿ ಬೆಂಗಳೂರಿನ ಅಂತಾರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ)ಯ ವಿಜ್ಞಾನಿಗಳು ಯಶಸ್ವಿಯಾಗಿದ್ದು, ಮುಂದಿನ ದಿನಗಳಲ್ಲಿ ರೊಬೋಟ್‌ಗಳು ಮನುಷ್ಯನಿಗೆ ಸಹಾಯಕನಾಗಿ ಕೆಲಸ ಮಾಡುವುದರ ಜತೆಗೆ ಸ್ನೇಹಿತನಾಗಿಯೂ ಸ್ಪಂದಿಸುವ ಸಾಧ್ಯತೆ ಇದೆ.

ರೊಬೋಟ್‌, ಮೆಷಿನ್‌ ಲರ್ನಿಂಗ್‌(ಎಂಎಲ್‌)ನಲ್ಲಿ ತರಬೇತಿ ನೀಡಿರುವ ಹಾಗೂ ಸಿದ್ಧಪಡಿಸಲಾಗಿರುವ ದತ್ತಾಂಶಗಳನ್ನು ಆಧರಿಸಿ ಯಂತ್ರ ಕಾರ್ಯನಿರ್ವಹಿಸುತ್ತದೆ. ನಾವು ಕೇಳಿದ ಪ್ರಶ್ನೆ, ಮಾಹಿತಿಗೆ ಅನುಗುಣವಾಗಿ ಅದು ತನ್ನ ಸಂಗ್ರಹದ ಅಥವಾ ಸಂಪರ್ಕದ ಜಾಲದಿಂದ ಮಾಹಿತಿಯನ್ನು ಹೆಕ್ಕಿ ನೀಡುವುದು, ಸ್ಪಂದಿಸುವುದು ಮುಂತಾದವನ್ನು ಮಾಡುತ್ತದೆ. ಈ ಸಂದರ್ಭದಲ್ಲಿ ಮಾಹಿತಿ ಕೇಳಿದಾತನ ಮನಸ್ಥಿತಿ, ಪರಿಸ್ಥಿತಿ, ವಯಸ್ಸು ಮುಂತಾದವನ್ನು ಅದು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಹೀಗಾಗಿ ರೊಬೋಟ್‌, ಕೃತಕ ಬುದ್ಧಿಮತ್ತೆ (ಎಐ), ಎಂಎಲ್‌ ತಂತ್ರಾಂಶಗಳ ಪೂರ್ವಗ್ರಹಿಕೆ, ಸೀಮಿತತೆ ಬಗ್ಗೆ ವೈಜ್ಞಾನಿಕ ಮತ್ತು ಉದ್ದಿಮೆ ಜಗತ್ತಿನಲ್ಲಿ ಸಾಕಷ್ಟು ಚರ್ಚೆಗಳು ನಡೆದಿದೆ.

ಈ ಹಿನ್ನೆಲೆಯಲ್ಲಿ ಐಐಐಟಿ ಪ್ರೊಫೆಸರ್‌ ಶ್ರೀಶ ರಾವ್‌ ನೇತೃತ್ವದಲ್ಲಿ ಪದವಿ ವಿದ್ಯಾರ್ಥಿಗಳಾದ ಅರ್ಪಿತಾ ಮಳವಳ್ಳಿ ಮತ್ತು ಸೋನಂ ಜೋಷಿ ಅವರು ಮನುಷ್ಯನ ಸಂತೋಷ, ದುಃಖ, ಬೇಸರ, ನಿರ್ಲಿಪ್ತತೆ ಮುಂತಾದ ಭಾವನೆಗಳನ್ನು ಆತನ ಕಣ್ಣು, ಮುಖ ಮತ್ತು ಅಂಗಿಕ ಭಾಷೆಗಳಿಂದ ಅರಿತು ಸ್ಪಂದಿಸುವ ಪ್ರಣಾಳಿ(ಒಂದು ಮಾದರಿಯ ತಂತ್ರಾಂಶ)ಯನ್ನು ಅಭಿವೃದ್ಧಿಪಡಿಸಿದ್ದಾರೆ.

ನಿಖರ ಮಾದರಿ
ತಲೆಯ ಚಲನೆ, ಕೈಸನ್ನೆ, ಕಣ್ಣಿನ ಚಲನೆ, ಶಾರೀರಿಕ ಲಕ್ಷಣಗಳನ್ನು ಗುರುತಿಸಿ ವ್ಯಕ್ತಿತ್ವವನ್ನು ಅಳೆಯುವ ಪ್ರಮುಖ ಐದು ವ್ಯಕ್ತಿತ್ವದ ಗುಣ ಲಕ್ಷಣಗಳನ್ನು ಪ್ರಯೋಗ ಹಂತದಲ್ಲಿ ಪರಿಗಣಿಸಿದ್ದೇವೆ. ಬಹಿರ್ಮುಖತೆ, ಸಮ್ಮತಿ, ಮುಕ್ತತೆ, ಪ್ರಜ್ಞಾವಂತಿಕೆ ಮತ್ತು ನರ ಸಮಸ್ಯೆ ಈ ಐದು ಅಂಶಗಳ ನೆಲೆಯಲ್ಲಿ ವ್ಯಕ್ತಿತ್ವ ಅಳೆಯುವ ಹೆಚ್ಚು ನಿಖರವಾದ ಮಾದರಿಯನ್ನು ಅನುಸರಿಸಿದ್ದೇವೆ. 45 ನಿಮಿಷಗಳ 18 ಸೆಷನ್‌ಗಳ ಪ್ರತಿ ಫ್ರೆàಮ್‌ನ ಮಾಹಿತಿ ಸಂಗ್ರಹಿಸಿ ನಾವು ಈ ಮಾದರಿ ರೂಪಿಸಿದ್ದೇವೆ ಎಂದು ಅರ್ಪಿತಾ ಮಳವಳ್ಳಿ ಹೇಳುತ್ತಾರೆ.

ತನ್ನ ಸಂಪರ್ಕಕ್ಕೆ ಬರುವ ಪ್ರತಿಯೊಬ್ಬನ ವ್ಯಕ್ತಿತ್ವವನ್ನು ಆತನ ಕಣ್ಣು ಮತ್ತು ಮನಶಾಸ್ತ್ರೀಯ ಮಾದರಿಗಳ ಮೂಲಕ ಅಳೆದು ಅದಕ್ಕೆ ತಕ್ಕಂತೆ ಸ್ಪಂದಿಸುವ ಸಾಮರ್ಥ್ಯವನ್ನು ನಾವು ಅಭಿವೃದ್ಧಿಪಡಿಸಿರುವ “ಪ್ರಣಾಳಿ’ ಹೊಂದಿದೆ. ಮೊದಲ ಬಾರಿಗೆ ಇಂತಹ ಪ್ರಯತ್ನ ಯಶಸ್ವಿಯಾಗಿದೆ.
– ಶ್ರೀಶ ರಾವ್‌, ಐಐಐಟಿ ಪ್ರೊಫೆಸರ್‌, ಸಂಶೋಧನ ಮಾರ್ಗದರ್ಶಕ

ಉಪಯೋಗವೇನು?
 ವಿಶೇಷ ಚೇತನರ ಉಪಕರಣಗಳಲ್ಲಿ ಬಳಕೆಗೆ ಹೆಚ್ಚು ಸೂಕ್ತ
 ಮಕ್ಕಳ ಕಲಿಕಾ ಸಲಕರಣೆಗಳಲ್ಲಿ ಅಳವಡಿಸಿದರೆ ಅವರ ಚಟುವಟಿಕೆಗಳ ಮೇಲೆ ನಿಗಾ ಇಡಲು
 ಆನ್‌ಲೈನ್‌ ವೇದಿಕೆಗಳಲ್ಲಿ ಶಾಪಿಂಗ್‌ನ ಸಂದರ್ಭದಲ್ಲಿ ಮಾಹಿತಿ ವಿನಿಮಯಕ್ಕೆ
 ಎಟಿಎಂ, ಸೇಫ್ಟಿ ಐ ಲ್ಯಾಂಡ್‌ ಮುಂತಾದ ಮಾನವ – ತಂತ್ರಜ್ಞಾನದ ಸಂಪರ್ಕದ ಸ್ಥಳಗಳಲ್ಲಿ
 ಮಾನವ ಮತ್ತು ರೊಬೋಟ್‌ ಒಟ್ಟಾಗಿ ಕೆಲಸ ಮಾಡುವ ಸ್ಥಳಗಳಲ್ಲಿ ಮಾನವನ ಸುರಕ್ಷೆಗೆ ಬಳಕೆ

ತೊಂದರೆಗಳೇನು?
ಖಾಸಗಿ ಮಾಹಿತಿ ಸಂಗ್ರಹಿಸುವ ಸಾಧ್ಯತೆ
 ಸುರಕ್ಷೆಯ ಸಮಸ್ಯೆ
 ನಿರುದ್ಯೋಗ ಹೆಚ್ಚಳ
 ಮಾನವನ ವ್ಯಕ್ತಿತ್ವ ಸಂಕೀರ್ಣವಾಗಿರುವ ಹಿನ್ನೆಲೆಯಲ್ಲಿ ಫ‌ಲಿತಾಂಶದ ನಿಖರತೆ ಯನ್ನು ಅರಿಯುವುದು ಕಷ್ಟ

 ರಾಕೇಶ್‌ ಎನ್‌.ಎಸ್‌.

ಟಾಪ್ ನ್ಯೂಸ್

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

MP Prajwal Revanna ವಿರುದ್ಧ ಮಹಿಳೆಯರು ಕೆಂಡ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.