ತೆಕ್ಕಟ್ಟೆ :ವರದಿಯತ್ತ ಗ್ರಾಮಸ್ಥರ ಚಿತ್ತ : ಮೆಡಿಕಲ್ಗೂ ತಟ್ಟಿದ ಬಿಸಿ !
Team Udayavani, May 1, 2020, 5:08 AM IST
ತೆಕ್ಕಟ್ಟೆ: ಮಂಡ್ಯ ಮೂಲದ ಕೋವಿಡ್19 ಸೋಂಕಿತ ವ್ಯಕ್ತಿ ಕುಂದಾಪುರ ತಾಲೂಕಿನ ತೆಕ್ಕಟ್ಟೆಯ ಪೆಟ್ರೋಲ್ ಬಂಕ್ವೊಂದರಲ್ಲಿ ಸ್ನಾನ ಮಾಡಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಪೆಟ್ರೋಲ್ ಬಂಕ್ನ್ನು ಸಂಪೂರ್ಣ ಸೀಲ್ ಡೌನ್ ಮಾಡಿದ್ದು ಅಲ್ಲಿದ್ದವರು ವಿವಿಧ ಆಸ್ಪತ್ರೆಯ ಐಸೋಲೇಶನ್ ವಾರ್ಡ್ ನಲ್ಲಿದ್ದ ಕ್ವಾರಂಟೈನ್ನಲ್ಲಿದ್ದ ಒಟ್ಟು 19 ಮಂದಿಯ ಗಂಟಲು ದ್ರವ ಪರೀಕ್ಷೆಗಾಗಿ ಲ್ಯಾಬ್ಗ ಕಳುಹಿಸಲಾಗಿದ್ದು ಆ ವರದಿಯ ಮೇಲೆ ಎಲ್ಲರ ಚಿತ್ತವಿದ್ದು , ಪರಿಣಾಮ ಕಳೆದೆರಡು ದಿನಗಳಿಂದಲೂ ಸಂಪೂರ್ಣ ಗ್ರಾಮವೇ ಸ್ತಬ್ಧಗೊಂಡಿದೆ.
ಮೆಡಿಕಲ್ಗೂ ತಟ್ಟಿದ ಬಿಸಿ
ಲಾಕ್ಡೌನ್ ಸಂದರ್ಭದಲ್ಲಿ ಮೆಡಿಕಲ್ ಶಾಪ್ ಗಳಿಗೆ ವಿಶೇಷವಾದ ವಿನಾಯಿತಿಗಳಿದ್ದರೂ ಸಹ ಕಳೆರಡು ದಿನಗಳಿಂದಲೂ ತೆಕ್ಕಟ್ಟೆ ಪ್ರಮುಖ ಭಾಗದಲ್ಲಿರುವ ಮೆಡಿಕಲ್ ಶಾಪ್ಗೆ ಗ್ರಾಹಕರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ.
ನೋಡುವ ದೃಷ್ಟಿ ಬದಲಾಯಿತು ?
ಸೋಂಕಿತ ವ್ಯಕ್ತಿಯಿಂದಾಗಿಯೇ ತೆಕ್ಕಟ್ಟೆ ಗ್ರಾಮದವರನ್ನು ನೋಡುವ ದೃಷ್ಟಿಯೇ ಬದಲಾಗಿದೆ ಎನ್ನುವುದಕ್ಕೆ ನಿದರ್ಶನವಾಗಿ ಎ.30ರಂದು ತೆಕ್ಕಟ್ಟೆ ನಿವಾಸಿಯೋರ್ವರು ಕುಂದಾಪುರದ ಬ್ಯಾಂಕ್ ತೆರಳಿದ ಸಂದರ್ಭದಲ್ಲಿ ತೆಕ್ಕಟ್ಟೆಯಿಂದ ಎಂದು ಹೇಳಿದಾಕ್ಷಣವೇ ಒಮ್ಮೆಲೇ ಅವರ ಬಳಿ ನಿಂತ ಮೂವರು ದೂರ ಸರಿದರು ಎನ್ನುವ ಘಟನೆ ಕೂಡಾ ಸಂಭವಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
MUST WATCH
ಹೊಸ ಸೇರ್ಪಡೆ
Devotion: ಭಕ್ತಿಯ ಅರ್ಥವಾದರೂ ಏನು?
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು