ಕಾಯುವಂತೆ ವರಿಷ್ಠರ ಸೂಚನೆ ಇರಲಿಲ್ಲ
Team Udayavani, Jul 27, 2019, 5:25 AM IST
ನವದೆಹಲಿ:“ಕರ್ನಾಟಕದಲ್ಲಿ ಯಡಿಯೂರಪ್ಪ ನೇತೃತ್ವದ ಸರ್ಕಾರ ರಚನೆ ಮಾಡಲು ವರಿಷ್ಠರು ಹೆಚ್ಚು ದಿನ ಕಾಯುವಂತೆ ಸೂಚಿಸಿರಲಿಲ್ಲ. ಅವರ ನೇತೃತ್ವದ ಸರ್ಕಾರ ಪೂರ್ಣಾವಧಿ ಪೂರೈಸಲಿದೆ’ ಎಂದು ಚಿಕ್ಕಮಗಳೂರು-ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ನವದೆಹಲಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಬಿಜೆಪಿ ವರಿಷ್ಠರು ಅನುಮೋದನೆ ನೀಡಿದ ಬಳಿಕವೇ ಯಡಿಯೂರಪ್ಪರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚನೆಯ ಬಗ್ಗೆ ಹಕ್ಕು ಮಂಡಿಸಿದ್ದಾರೆ. ಪಕ್ಷದ ಕೇಂದ್ರ ನಾಯಕತ್ವ ಮತ್ತು ರಾಜ್ಯ ಬಿಜೆಪಿ ಘಟಕ ಒಂದೇ ಅಭಿಪ್ರಾಯ ಹೊಂದಿದೆ ಎಂದು ಕರಂದ್ಲಾಜೆ ಹೇಳಿದ್ದಾರೆ. ಇದೇ ವೇಳೆ ಬಿಜೆಪಿಯ ಮಾಧ್ಯಮ ವಿಭಾಗದ ಉಸ್ತುವಾರಿ ಅನಿಲ್ ಬಲುನಿ ಮಾತನಾಡಿ, ಹೊಸ ಸರ್ಕಾರ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕೂಟದ ಸರ್ಕಾರದಂತೆ ಇರದೆ, ಕರ್ನಾಟಕಕ್ಕೆ
ಹೊಸ ರೀತಿಯ ಅಭಿವೃದಿಟಛಿಯನ್ನು ನೀಡಲಿದೆ. ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಅವರೇ ಆಗಿರುವುದರಿಂದ ಮತ್ತೂಮ್ಮೆ ಸಭೆ ಸೇರಬೇಕಾದ ಅಗತ್ಯವಿಲ್ಲ ಎಂದು ಹೇಳಿದ್ದಾರೆ.