Thirthahalli; ರಂಜದಕಟ್ಟೆ ಬಳಿ ಅಪಘಾತ: ವೃದ್ಧ ಮೃತ್ಯು
Team Udayavani, Sep 29, 2023, 11:51 PM IST
ತೀರ್ಥಹಳ್ಳಿ : ರಸ್ತೆಯಲ್ಲಿ ನೆಡೆದುಕೊಂಡು ಹೋಗುತ್ತಿದ್ದ ವೃದ್ಧರೊಬ್ಬರಿಗೆ 407 ಲಾರಿಯೊಂದು ಢಿಕ್ಕಿ ಹೊಡೆದ ಪರಿಣಾಮ ವೃದ್ದರೊಬ್ಬರು ಸಾವನ್ನಪ್ಪಿರುವ ಘಟನೆ ರಂಜದಕಟ್ಟೆ ಬಳಿ ನೆಡೆದಿದೆ.
ತಾಲೂಕಿನ ಆಲಗೇರಿ ಸಮೀಪದ ಹೊಳೆಮೊದ್ಲು ಗ್ರಾಮದ ಚನ್ನಪ್ಪ ಗೌಡ 65 ವರ್ಷ ಮೃತಪಟ್ಟ ದುರ್ದೈವಿ. ತೀರ್ಥಹಳ್ಳಿಯಿಂದ ಬಸ್ ಇಳಿದು ಊರಿಗೆ ಹೋಗುವಾಗ ರಂಜದಕಟ್ಟೆ ಬಳಿ ಈ ಘಟನೆ ಸಂಭವಿಸಿದೆ. ಕೂಡಲೇ ಅವರನ್ನು ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಹೆಬ್ರಿ ಸಮೀಪ ಮೃತಪಟ್ಟಿದ್ದಾರೆ. ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.