Politics: ಅಪ್ಪ-ಅಮ್ಮ ಗೊತ್ತಿಲ್ಲದವರು ಜಾತ್ಯತೀತ ಎನ್ನುತ್ತಾರೆ: ಅನಂತಕುಮಾರ್ ಹೆಗಡೆ
Team Udayavani, Jan 19, 2024, 12:40 AM IST
ಬೆಳಗಾವಿ: ಕೆಲವರು ಜಾತ್ಯತೀತ ಎಂದು ಹೇಳುತ್ತಾರೆ. ಅಪ್ಪ-ಅಮ್ಮ ಯಾರೆಂದು ಗೊತ್ತಿಲ್ಲದವರು ಮಾತ್ರ ಹೀಗೆ ಹೇಳಲು ಸಾಧ್ಯ ಎಂದು ಕೆನರಾ ಸಂಸದ ಅನಂತಕುಮಾರ್ ಹೆಗಡೆ ಹೇಳಿದ್ದಾರೆ.
ಖಾನಾಪುರ ನಗರದಲ್ಲಿ ಗುರುವಾರ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ನಾವು ಹಿಂದೂಗಳೆಂದು ಮರೆತೇ ಹೋಗಿತ್ತು. ಈಗಲೂ ತತ್ಕ್ಷಣ ಕೇಳಿದರೆ ಅನೇಕರು ತಮ್ಮ ಜಾತಿ ಹೆಸರು ಹೇಳುತ್ತಾರೆ. ಲಿಂಗಾಯತ, ಮರಾಠ, ಭಟ್, ಶೆಟ್ಟಿ ಎಂಬುದಾಗಿ ಪರಿಚಯಿಸಿಕೊಳ್ಳುತ್ತಾರೆ. ಹಿಂದೂ ಎಂಬುದಾಗಿ ನೆನಪಿಸಿಕೊಂಡು ಹೇಳುವ ಸ್ಥಿತಿ ಇದೆ. ಸಂಸ್ಕಾರ ಇದ್ದರೆ ಹಿಂದೂ ಎನ್ನುತ್ತಾರೆ ಎಂದರು.
ಇಷ್ಟು ವರ್ಷಗಳ ಕಾಲ ಜಾತಿ-ಭಾಷೆ ಹೆಸರಲ್ಲಿ ನಮ್ಮನ್ನು ಒಡೆದಿದ್ದಾರೆ. ಮರಾಠಿ-ಕನ್ನಡ ಒಂದಾಗುತ್ತಾರೆ ಎಂದರೆ ಕತ್ತಿ ತಗೊಂಡು ಬರುತ್ತಾರೆ. ಈ ರೀತಿ ಒಡೆದರೆ ಅವರ ರಾಜಕಾರಣ ನಡೆಯುವುದು. ಸ್ವಾತಂತ್ರ್ಯ ಬಳಿಕ ಮರಾಠಿ-ಕನ್ನಡ ಜಗಳ ಆರಂಭವಾಯಿತು. ನಮ್ಮನ್ನು ಒಡೆದು ಆಳಿದರು. ಇದರ ಹೊರತಾಗಿ ನಾವೆಲ್ಲರೂ ಒಂದಾಗಿ ಹಿಂದೂ ಹೆಸರಲ್ಲಿ ಎದ್ದು ನಿಂತೆವು. ರಣಭೈರವ ರೀತಿಯಲ್ಲಿ ಏಳುತ್ತಿದ್ದೇವೆ ಎಂದರು. 500 ವರ್ಷಗಳ ಪಾಪವನ್ನು ತೊಳೆದುಕೊಂಡು ಶ್ರೀರಾಮ ಮಂದಿರ ಕಟ್ಟುತ್ತಿದ್ದೇವೆ. ಇನ್ನು ಕಾಶಿ, ಮಥುರಾ ಬಾಕಿ ಇದೆ. ಹಳ್ಳಿ ಹಳ್ಳಿಗಳಲ್ಲಿ ಅವಮಾನಗೊಂಡ ಅನೇಕ ದೇವಸ್ಥಾನಗಳಿವೆ. ಹಳ್ಳಿ ಹಳ್ಳಿಯಲ್ಲಿ ಆಗಿರುವ ಅಪಮಾನದ ಸೇಡು ತೀರಿಸಿಕೊಳ್ಳುತ್ತೇವೆ ಎಂದರು.
ಹೆಗಡೆ ವಿರುದ್ಧ ಅಸಮಾಧಾನ
ಖಾನಾಪುರದ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯ ಕರ್ತರ ಸಭೆಯಲ್ಲಿ ಅನಂತಕುಮಾರ್ ಹೆಗಡೆ ವಿರುದ್ಧ ಕೆಲವು ಕಾರ್ಯಕರ್ತರು ಅಸಮಾಧಾನ ಹೊರಹಾಕಿದರು. ಹಲವು ವರ್ಷಗಳಿಂದ ನೀವು ಕಾರ್ಯಕರ್ತರ ಕೈಗೆ ಸಿಕ್ಕಿಲ್ಲ. ಅಭಿವೃದ್ಧಿ ಕೆಲಸಗಳೂ ಕುಂಠಿತಗೊಂಡಿವೆ. ಸಂಸದರ ಕಾರ್ಯಾಲಯವಿಲ್ಲದೆ ಪರದಾಡುತ್ತಿದ್ದೇವೆ. ಖಾನಾಪುರದ ಜನರು ಬೆಳಗಾವಿಗೆ ಹೋದರೆ ಕಾರವಾರಕ್ಕೆ ಕಳುಹಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ
Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ
Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
MUST WATCH
ಹೊಸ ಸೇರ್ಪಡೆ
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ
PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ